ಚಳ್ಳಕೆರೆ ಜನಧ್ವನಿ ವಾರ್ತೆ ಜೂ 7 ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಅಧಿಕಾರಿಗಳು ಮುಂದಾಗುವರೇ…? ಬುಧವಾರ ಜನಧ್ವನಿ ಡಿಜಿಟಲರ ಮೀಡಯಾ ಬೆಳಕು ಚೆಲ್ಲಿದ ಬೆನ್ನಲೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಿ ಜನರಿಗೆ ಶುದ್ದ ಕುಡಿಯುವ ನೀರು ಕುಡಿಸುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ ಇದಕ್ಕೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಕಾಮಸಮುದ್ರಮಲ್ಲಿ ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಎರಡು ಘಟಗಳನ್ನು ದುರಸ್ಥಿ ಪಡಿಸಿ ಜನರಿಗೆ ಶುದ್ದ ಕುಡಿಯುವ ನೀರು ಬಿಟ್ಟಿರುವುದು.
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಮಸಮದ್ರ ಗ್ರಾದಲ್ಲಿ ಅಂಜನೇಯ ದೇವಸ್ಥಾನ ಹಾಗೂ ಅಂಗನವಾಡಿ ಕೇಂದ್ರದ ಆವರಣದಲ್ಲಿರುವ ಎರಡು ಶುದ್ದ ಕುಡಿಯುವ ನೀರಿನ ಘಟಕಗಳು ಕಟ್ಟು ನಿಂತರೆ ಬೆಳಗೆರೆ ಗ್ರಾಪಂ ವ್ಯಾಪ್ತಿಯ ಹುಲಿಕುಂಟೆ ಬೋವಿ ಕಾಲೋನಿಯಲ್ಲೂ ಸಹ ಕೆಟ್ಟು ನಿಂತು ಸುಮಾರು ಮೂರು ತಿಂಗಳು ಕಳೆದರೂ ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಬಂದು ನೋಡಿ ಹೋಗುತ್ತಾರೆ ದುರಸ್ಥಿ ಮಾತ್ರ ಮಾಡಿಲ್ಲ ಎಂದು ಸಂಯುಕ್ತ ಕರ್ನಾಟಕ ಸುದ್ದಿ ಬಿತ್ತರಿಸಿತ್ತು
ಕುಡಿಯುವ ನೀರು ಸರಬರಾಜು ಇಲಾಖೆ ಜೆಇ ತಿಪ್ಪೇಸ್ವಾಮಿ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ೫ ವರ್ಷಗಳ ಅವಧಿಗೆ ಗುತ್ತಿಗೆಯಾಗಿದೆ ಹಣ ಅವರೆ ಪಡೆಯುವುದಿರಿಂದ ಅವರೇ ದುರಸ್ಥಿ ಪಡಿಸ ಬೇಕು ಆದರೆ ಅವರು ದುರಸ್ಥಿ ಮಾಡಲು ವಿಳಂಬ ದೋರಣೆಯಾಗುತ್ತಿರುವುದಿಂದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗ ಬಾರದು ಎಂದು ನಮ್ಮ ಇಲಾಖೆಯಿಂದ ದುರಸ್ಥಿ ಪಡಿಸಿದ್ದೇವೆ ಈಗ ಗುತ್ತಿಗೆ ೫ ವರ್ಷದ ಅವಧಿ ಮುಗಿಯಲು ಬಂದಿದ್ದು ಕೆಟ್ಟಿರುವ ಎಲ್ಲಾ ಶುದ್ದಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಿ ಬಾರಿ ಇರುವ ವಿದ್ಯುತ್ ಬಿಲ್ ಕಟ್ಟಿದರೆ ಮಾತ್ರ ಗ್ರಾಮಪಂಚಾಯಿತಿ ಸುಬರ್ಧಿಗೆ ಪಡೆಯಲಾಗುತ್ತದೆ.
ವರದಿ ಬಿತ್ತರಿವು ಮುನ್ನ
ಬೆಳಗೆರೆ ಗ್ರಾಪಂ ವ್ಯಾಪ್ತಿಯ ಹುಲಿಕುಂಟೆ ಬೋವಿಕಾಲೋನಿಯ ಶುದ್ದ ಕುಡಿಯುವ ನೀರಿನ ಘಟಕದ ಮೋಟ್ ಸುಟ್ಟಿದೆ ಅದನ್ನು ತರಿಸಿ ಗುರುವಾರ ದುಸ್ಥಿ ಪಡಿಸಲಾಗುವುದು ಎಂದು ತಿಳಿಸಿದರು.
0 Comments