ಹಿರಿಯೂರು:
ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಶಿವಯೋಗಿ ಸಿದ್ದರಾಮೇಶ್ವರರು ಕಾಯಕವೇ ಕೈಲಾಸವೆಂದು ಭಾವಿಸಿದ್ದ ಮಹಾನ್ ಚೇತನ, ಇವರು ಕೆಳವರ್ಗದವರಲ್ಲಿ ಕಾಯಕದ ಬಗ್ಗೆ ಅರಿವು ಮೂಡಿಸುವಲ್ಲಿ ಶ್ರಮಿಸಿದರು ಎಂಬುದಾಗಿ ತಾಲ್ಲೂಕು ಶಿರಸ್ತೇದಾರರಾದ ತಿಪ್ಪೇಸ್ವಾಮಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭೋವಿ ಸಮಾಜದ ಗೌರವಾಧ್ಯಕ್ಷ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಭೋವಿ ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಈ ಭೋವಿ ಸಮಾಜದ ಮಕ್ಕಳನ್ನು ಹೆಚ್ಚು ಹೆಚ್ಚು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯಿವಾಹಿನಿಗೆ ತರಬೇಕು ಎಂದರಲ್ಲದೆ,
ಭೋವಿ ಸಮಾಜದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ, ನಗರದ ಹರಿಶ್ಚಂದ್ರಘಾಟ್ ಬಳಿಯಿರುವ ಭೋವಿ ಸಮಾಜದ ಹಾಸ್ಟೆಲ್ ಜಾಗದಲ್ಲಿ ಡಿಪ್ಲೋಮೋ ಹಾಗೂ ಜಾಬ್ ಕೋರ್ಸ್ ಗಳಂತಹ ಕಾಲೇಜು ತೆರೆಯಬೇಕಿದ್ದು, ಈ ಮೂಲಕ ಉದ್ಯೋಗಸಿಗುವಂತಹ ಕೋರ್ಸ್ ಗಳ ಸೌಲಭ್ಯ ಸಮಾಜದ ಮಕ್ಕಳಿಗೆ ಒದಗಿಸಿಕೊಡಬೇಕಿದೆ ಎಂಬುದಾಗಿ ಅವರು ಹೇಳಿದರು.
ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ತಿಮ್ಮರಾಜು ಮಾತನಾಡಿ, ಕಾಯಕಯೋಗಿ ಸಿದ್ದರಾಮೇಶ್ವರರು ಭೋವಿ ಸಮುದಾಯಕ್ಕೆ ಮಾತ್ರವಲ್ಲದೆ ಇತರೆ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದು, ಸಿದ್ದರಾಮೇಶ್ವರ ಜಯಂತಿಯನ್ನು ಸಾವಿರಾರು ಜನ ಸೇರಿ ಎಲ್ಲಾ ಜಾತಿಯ ಜನಾಂಗದವರನ್ನು ಕರೆದು ಆಚರಿಸಲು ತಾಲೂಕು ಆಡಳಿತ ಕ್ರಮಕೈಗೊಳ್ಳಬೇಕು ಎಂದರು.
ಭೋವಿ ಸಮಾಜದ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಸಿದ್ದರಾಮೇಶ್ವರರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಮೇಲೂ ಸಮಾಜಕ್ಕೆ ಮಾಡಿದಂತಹ ಉಪಯೋಗಗಳು ಸ್ಮರಣಾರ್ಹ, ಇವರ ತತ್ವ ಹಾಗೂ ಆದರ್ಶಗಳನ್ನು ಇಂದಿನ ಯುವಜನಾಂಗ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಮನೋಹರ್, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಕಚೇರಿಯ ಶ್ರೀನಿವಾಸ ರೆಡ್ಡಿ ಭೋವಿ ಸಮಾಜದ ಮುಖಂಡ ಸೂರಗೊಂಡನಹಳ್ಳಿಕೃಷ್ಣಮೂರ್ತಿ, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಟಿ.ಚಂದ್ರಶೇಖರ್, ಉಪಾಧ್ಯಕ್ಷರಾದ ವೆಂಕಟೇಶ್, ಭೋವಿ ಹಾಸ್ಟೆಲ್ ಕಾರ್ಯದರ್ಶಿ ಭೂತಾಭೋವಿ, ತಾ.ಪಂ.ಮಾಜಿ ಅಧ್ಯಕ್ಷ ಟಿ.ಆರ್.ಗೋಪಾಲ್, ನಗರಸಭೆ ಸದಸ್ಯ ಮಹೇಶ್ ಪಲ್ಲವ, ಸಮುದ್ರದಳ್ಳಿ ರಾಜು, ಈಶ್ವರಪ್ಪ, ಎಂ.ಜಿ.ಗೋಪಾಲಪ್ಪ, ಶಿಕ್ಷಕ ರಮೇಶ್, ಬಳಗಟ್ಟಮೂರ್ತಿ, ನಾರಾಯಣ, ತಿಪ್ಪೇಸ್ವಾಮಿ, ಹನುಮಂತಪ್ಪ, ರಂಗಸ್ವಾಮಿ, ದಾಸಭೋವಿ, ಅಂಜನಮೂರ್ತಿ, ಬಾಲರಾಜು, ಗೋವಿಂದಪ್ಪ, ಕರವೇ ತಿಮ್ಮರಾಜು, ರಮೇಶ್ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments