ಶಿವಮೊಗ್ಗ :
ರೈತರಿಗೆ ಹಾಲಿನ ದರ ಇಳಿಕೆ ಮಾಡಿ ಅನ್ಯಾಯ ಮಾಡಿರುವ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಉತ್ಪಾದಕರ ಒಕ್ಕೂಟವಾದ ಶಿಮುಲ್ ಒಂದು ಲೀಟರ್ ಹಾಲಿಗೆ ರೂ. 3.75 ಪೈಸೆಗಳನ್ನು ಕಡಿಮೆ ಮಾಡಿದ್ದು, ಇದು ನಿಜಕ್ಕೂ ಖಂಡನೀಯ ಎಂಬುದಾಗಿ ಭಾರತೀಯ ಕಿಸಾನ್ ಸಂಘದ ಗೌರವಾಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಶಿವಮೊಗ್ಗ ಹಾಲು ಒಕ್ಕೂಟ ಕೇಂದ್ರದ ಮುಂಭಾಗದಲ್ಲಿ ಕಿಸಾನ್ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಾಲು ಒಕ್ಕೂಟ ಕೇಂದ್ರದ ಘನಘೋರ ಅನ್ಯಾಯವನ್ನು ಖಂಡಿಸಿ, ಭಾರತೀಯ ಕಿಸಾನ್ ಸಂಘದಿಂದ ಮೂರು ಜಿಲ್ಲೆಗಳ ಹಾಲು ಉತ್ಪಾದಕರು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ಶಿಮುಲ್ ಮುಂಭಾಗದಲ್ಲಿ ಹೈನುಗಾರಿಕೆ ಮುಖ್ಯ ಕಸುಬು ಮಾಡುವ ಹಾಲು ಉತ್ಪಾದಕ ರೈತರು ಮುಂದಾಗಿದ್ದಾರೆ ಎಂದರಲ್ಲದೆ,
ನಮ್ಮ ರೈತರಿಗೆ ನ್ಯಾಯ ಸಿಗುವ ತನಕ ನಿರಂತರ ಹೋರಾಟ ಮಾಡಲಾಗುವುದು ಎಂದರಲ್ಲದೆ, ಶಿಮುಲ್ ಕಚೇರಿ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಹೋರಾಟಕ್ಕೆ ಬೆಂಬಲಿಸುವ ಮೂಲಕ ರೈತರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಅವರು ರೈತರಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ದೊಡ್ಡಘಟ್ಟ ಕುಮಾರ್, ಕಾತ್ರಿಕೆನ ಹಳ್ಳಿ ಮಂಜುನಾಥ್, ಲಕ್ಕವನಹಳ್ಳಿ ಸುಬ್ರಮಣಿ, ಪುಟ್ಟರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments