ಚಳ್ಳಕೆರೆ.ಜ.26
ಶಿಕ್ಷಣ, ಹೋರಾಟ, ಸಮಾನತೆ, ಶಾಂತಿ ಡಾ.ಬಿ.ಅಂಬೇಡ್ಕರ್ ಆಶಯಗಳನ್ನು ಪ್ರತಿಯೊಬ್ಬ ಪ್ರಜೆಯೂ ಗಣತಂತ್ರದ ಮೂಲಮಂತ್ರವನ್ನು ಮರೆಯದೆ, ಸಂವಿಧಾನದ ಮೂಲ ಆಶಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ರಾಷ್ಟಿçÃಯ ಹಬ್ಬಗಳ ಸಮಿತಿವಯಿಯಿಂದ ಹಮ್ಮಿಕೊಂಡಿದ್ದ ೭೫ ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿAದ ಇಂದು ಎಲ್ಲರಿಗೂ ಸಮಾನತೆ ಸಿಕ್ಕಿದೆ. ಕ್ಷೇತ್ರಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ, ಚುನಾವಣೆ ಮುನ್ನ ನೀಡಿದ ಪಂಚ ಗ್ಯಾರೆಂಟಿಗಳನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಾರಿಗೊಳಿಸಲಾಗಿದೆ.
ಬರಗಾರದ ಹಿನ್ನೆಲೆಯಲ್ಲಿ ಹೋಬಳಿಗೊಂದು ಗೋಶಾಲೆ ಹಾಗೂ ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡಲು ಹೋಬಳಿಗೊಂದು ಗೋಶಾಲೆ ತೆರೆಯಲಾಗಿದೆ, ಸರಕಾರದಿಂದ ಬಂದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಮೂಂದಾಗ ಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಣ ಕಲಿಯುವ ಜತೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡಿದ ರೈತರ, ಸೈನಿಕರ ಹಾಗೂ ದಾರ್ಶನಿಕರ ಆದರ್ಶಗಳನ್ನು ಪ್ರದರ್ಶನ ಮಾಡಿರುವು ಶ್ಲಾಘನೀಯ ಎಂದರು.
ತಹಶೀಲ್ದಾರ್ ರೆಹಾನ್ ಪಾಷ ಪಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಜೆ.ರಾಘವೇAದ್ರ ಸದಸ್ಯರಾದ ಸುಮಕ್ಕ. ಆರ್.ಮಂಜುಳ, ರಮೇಶ್ ಗೌಡ, ಮಲ್ಲಿಕಾರ್ಜುನ ವೀರಭದ್ರಯ್ಯ, ಸುಮ, ಜಯಲಕ್ಷಿö್ಮÃ, ಕವಿತಾ, ನಾವೇಣಿ, ನಿರ್ಮಲ, ಜೈತುಂಬಿ,ಓ.ಸುಜಾತ, ತಾಪಂ ಇಒ ಶಶಿಧರ್, ಡಿವೈಎಸ್ ರಾಜಣ್ಣ, ವೃತ್ತನಿರೀಕ್ಷಕರಾದ ದೇಸಾಯಿ. ಸಮೀವುಲ್ಲ, ಬಿಇಓ ಕೆ.ಎಸ್. ಸುರೇಶ್, ಪೌರಾಯುಕ್ತ ಚಂದ್ರಪ್ಪ, ಎಇಇ ಕಾವ್ಯ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಕೃಷಿ ಸಹಾಯಕ ನಿರ್ದೇಶಕ ಡಾ.ಅಶೋಕ್, ಎಸ್ಟಿ ಇಲಾಖೆ ಶಿವರಾಜ್, ಅಕ್ಷರದಾಸೋಹ ತಿಪ್ಪೇಸ್ವಾಮಿ ಇತರರಿದ್ದು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments