ಚಳ್ಳಕೆರೆ ಜೂ10 ಚಳ್ಳಕೆರೆ ಜೂ10 ಶಾಸಕ ಟಿ ರಘುಮೂರ್ತಿ ಇವರ ಹುಟ್ಟು ಹಬ್ಬದ ಪ್ರಯುಕ್ತ ನೂತನ ನಗರಸಭಾ ನಾಮನಿರ್ದೇಶನ ಸದಸ್ಯರು ಬನಶ್ರೀ ವೃದ್ಧಾಶ್ರಮಕ್ಕೆ ಪಾತ್ರೆ ಹಾಗೂ ದಿನಸಿ ಪದಾರ್ಥಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ,ಬ್ಲಾಕ್ ಅಧ್ಯಕ್ಷ ಶಶಿಧರ್ ,ಕೆಪಿಸಿಸಿ ರಾಜ್ಯ ಕುಶಲಕರ್ಮಿಗಳ ಅಧ್ಯಕ್ಷ ಆರ್ .ಪ್ರಸನ್ನ ಕುಮಾರ್, ಚೇತನ್ ಕುಮಾರ್(ಕುಮ್ಮಿ) ಸಾಮಾಜಿಕ ಹೋರಾಟಗಾರಎಚ್.ಎಸ್ ಸೈಯದ್, ನಗರಸಭಾ ನಾಮ ನಿರ್ದೇಶನ ಸದಸ್ಯರಾದ ಅನ್ವರ್ ಮಾಸ್ಟರ್ ,ಬಡಗಿ ಪಾಪಣ್ಣ, ನಟರಾಜ್, ವೀರಬದ್ರಿ,ನೇತಾಜಿ ಪ್ರಸನ್ನ ಮತ್ತು ರಘುಮೂರ್ತಿ ಅಭಿಮಾನಿ ಬಳಗದ ಸ್ನೇಹಿತರು ಮತ್ತು ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥೆ ಮಂಜುಳಮ್ಮ,ದರ್ಶನ್, ರಘು ಇತರರಿದ್ದರು.
ಇದೇ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ,ಬ್ರೆಡ್, ಹಣ್ಣು ವಿತರಿಸಿ ನಂತರ ಶಾಸಕರ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಶಾಸಕ ಟಿ.ರಘುಮೂರ್ತಿಯವರ ಹುಟ್ಟು ಹಬ್ಬ ಆರಣೆ ನೆರವೇರಿಸಿ ಸಿಹಿ ಹಂಚುವ ಮೂಲಕ ಕಾರ್ಯಕರ್ತರು , ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿ ಅನುಪಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಗೀತಾ ಬಾಯಿ, ಟಿ.ಎ.ಟಿ.ಪ್ರಭುದೇವ್, ಸಿ. ವೀರೇಂದ್ರಬಾಬು, ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
0 Comments