ಜನಧ್ವನಿ ವಾರ್ತೆ ಏ10
ಶಾಲೆಗೆ ಹೋಗುತ್ತಾ, ಸ್ನೇಹಿತೆಯದೊಂದಿಗೆ ಆಡಿ ಬೆಳೆಯಬೇಕಾದ ವಯಸ್ಸು ಆದರೆ ಆ ಪುಟ್ಟ ಬಾಲಕಿಗೆ ವಕ್ಕರಿಸಿದ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿದ್ದ ಬಡ ಪೋಷಕರ ಮಗಳ ಚಿಕಿತ್ಸೆಗೆ ಮಾಜಿ ಮಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು ಇದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಾಪರಹಳ್ಳಿ ಗ್ರಾಮದ ಬಡಕುಟುಂಬದ ಜಿ.ಟಿ.ಕುಮಾರ್.ತಿಮ್ಮಪ್ಪ ಇವರ ೭ ವರ್ಷದ ಪುತ್ರಿ ಪಲ್ಲವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಗುವಿಗಾಗಿ ಈಗಾಗಲೆ ಸಾಕಷ್ಟು ಚಿಕಿತ್ಸೆ ಹಣ ಖರ್ಚು ಮಾಡಿಕೊಂಡು ಹಣವಿಲ್ಲದೆ ಚಿಕಿತ್ಸೆಗಾಗ ಅಲೆದಾಡುತ್ತಿದ್ದರು. ಮಾರಣಾಂತಿಕ ಖಾಯಿಲೆ ಚಿಕಿತ್ಸೆಗೆ ಈಗಾಗಲೆ ಸುಮಾರು 3ರಿಂದ 5 ಲಕ್ಷ ರೂ ಖರ್ಚು ಮಾಡಿ ಚಕಿತ್ಸೆಕೊಡಿಸಿದ್ದು ಮಗಳ ಶಸ್ತçಚಿಕಿತ್ಸೆ ಮಾಡಿಸಲು ಸುಮಾರು 10 ಲಕ್ಷ ರೂಗಳ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದು. ಖಾಯಿಲೆಯಿಂದ ಪುಟ್ಟ ಮಗುವಿನ ಸುಂದರ ಬಾಲ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ.ಭವಿಷ್ಯದ ಮೇಲೆ ಕರಿನೆರಳು ಆವರಿಸುವಂತೆ ಮಾಡಿತ್ತು.
ರಕ್ತ ಸಂಬಂಧಿ ಖಾಯಿಲೆಯಾದ ಥಲೆಸ್ಸೇಮಿಯಾದಿಂದ ರಕ್ತದ ಸಮಸ್ಯೆ, ಮೂಳೆಯ ಸಮಸ್ಯೆ ಉಂಟಾಗಿ ಮಗು ಪರದಾಡುವಂತಾಗಿದೆ. ಮೊದಲೇ ಕೂಲಿ ನಾಲಿ ಮಾಡಿಕೊಂಡು ಬದುಕುವ ಪೋಷಕರು ಇದರಿಂದ ದಿಕ್ಕೇ ತೋಚದಂತಾಗಿತ್ತು ಪ್ರತೀ ತಿಂಗಳು ಎರಡು ಬಾರಿ ರಕ್ತ ಹಾಗೂ ಬಿಳಿ ರಕ್ತ ಕಣಗಳನ್ನು ಹಾಕಿಸಬೇಕು. ಹೀಗಾಗಿ ಕೂಲಿ ನಾಲಿಯಿಂದ ಜೀವನ ಸಾಗಿಸುವ ಬಡಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿತ್ತು ಅವರ ಬಾಳಿನ ನೆರವಿಗೆ ಮಾಜಿ ಮುಖ್ಯಮಂತ್ರಿಗೆ ಎಚ್.ಡಿ.ಕುಮಾರಸ್ವಾಮಿ ಚಿಕಿತ್ಸೆಕೊಡಿಸಲು ಮುಂದಾಗಿದೆ..
ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪಂಚರತ್ನ ಯಾತ್ರೆ ಸಮಾರಂಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ಕುಮಾರ್ ಪರವಾಗಿ ಕ್ಷೇತ್ರದಲ್ಲಿ ಪ್ರವಾಸಗೊಂಡು ರಾತ್ರಿ ಬಹಿರಂಗಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡುವಾಗ ಬಾಲಕಿಯ ಕುಟುಂಬಸ್ಥರು ವೇಧಿಕೆ ಮೇಲೆ ಹೋಗಿ ಮಗಳ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ಅಳಲು ತೋಡಿಕೊಂಡಿದ್ದಾರೆ ತಕ್ಷಣ ಸ್ಪಂದಿಸಿದ ಕುಮಾರಸ್ವಾಮಿಸೋಮವಾರ ಬೆಳಗ್ಗೆ ಜೆಪಿ ನಗರದಲ್ಲಿರುವ ನಿವಾಸಕ್ಕೆ ಬರುವಂತೆ ತಿಳಿಸಿದ್ದಾರೆ.
ಕಾಪರಹಳ್ಳಿ ಗ್ರಾಮದ ಕುಮಾರಸ್ವಾಮಿ ದಂಪತಿಗಳಿಬ್ಬರು ಸೋಮವಾರ ಬೆಳ್ಳಂ ಬೆಳಗ್ಗೆ 6.30 ಕ್ಕೆ ಸರಿಯಾಗಿ ಎಚ್.ಡಿ.ಕೆ ಮನೆ ಬಳಿ ಹೋಗಿದ್ದಾರೆ ಹೋದ ತಕ್ಷಣ ಮಗು ಹಾಗೂ ಕುಟುಂಬಸ್ಥರನ್ನು ಕಂಡು ವೈಯುಕ್ತಿಕವಾಗಿ 50 ಸಾವಿರ ರೂ ಹಣ ನೀಡಿ ಇಂದಿರಾ ಗಾಂಧಿ ಆಸ್ಪತ್ರೆಯ ವೈದ್ಯರಾದ ಸಂಜಯ್. ಡಾ.ಪೂಜಾ ಇವರಿಗೆದೂರವಾಣಿ ಮೂಲಕ ಕರೆ ಮಾಡಿ ಇಂದಿನಿAದಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ ಮೇರೆಗೆ ಮಗುವಿಗೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮಗುವಿಗೆ ತಪಾಸಣೆ ನಡೆಸಿ ಚಿಕಿತ್ಸೆ ಪ್ರಾರಂಭಿಸಿರುವುದು ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದೆ.;
ರಾಜ್ಯ ಸರ್ಕಾರ ಬಿಪಿಎಲ್ ಯೋಜನೆ ಅಡಿಯಲ್ಲಿ ಉಚಿತ ಶಸ್ತç ಚಿಕಿತ್ಸೆ ಬರಿಸುವ ಯೋಜನೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿರುವ ಜೆಡಿಎಸ್ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಡ ಕುಟುಂಬದ ಎಷ್ಟೋ ಮಕ್ಕಳಿಗೆ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments