ಹಿರಿಯೂರು :
ಶಾಲಾ ದಾಖಲೆಯಲ್ಲಿ ‘ಕುಂಚಿಟಿಗ’ ಜಾತಿ ಬದಲಿಗೆ ಒಕ್ಕಲಿಗ, ಲಿಂಗಾಯತ,ಅಥವಾ ನಾಮಾಧಾರಿ ಎಂದು ತಪ್ಪಾಗಿ ನಮೂದಾಗಿದ್ದಲ್ಲಿ ನಿಜವಾದ ಜಾತಿ ನಮೂದಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿ, ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.
ಶಾಲಾ ದಾಖಲಾತಿಯ ಜಾತಿ ಕಾಲಂನಲ್ಲಿ ಜಾತಿಯ ವಿವರ ತಪ್ಪಾಗಿ ನಮೂದಾಗಿದ್ದರೆ ಅಥವಾ ತಿಳಿಯದೇ ಬೇರೊಂದು ಜಾತಿಯನ್ನು ನೀಡಿದ್ದರೆ ಪಾಲಕರು, ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ.ಶಿಕ್ಷಣ ಇಲಾಖೆ ಆಯುಕ್ತರು ಜಾತಿ ತಿದ್ದುಪಡಿ ಕುರಿತು ಆದೇಶ ಹೊರಡಿಸಿದ್ದು,ರಾಜ್ಯದ ಎಲ್ಲಾ ಡಿಡಿಪಿಐ ಕಚೇರಿಗಳಿಗೆ ಆದೇಶದ ಪ್ರತಿ ರವಾನಿಸಿದ್ದಾರೆ.
ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಾಗ ಅನಿವಾರ್ಯ ಕಾರಣಗಳಿಂದ ಮಕ್ಕಳ ಪೋಷಕರು ಮಕ್ಕಳ ಜಾತಿಯನ್ನು ತಪ್ಪಾಗಿ ನಮೂದಿಸಿದ್ದಲ್ಲಿ ಅದನ್ನು ಸರಿಪಡಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಪಾಲಕರು ತಮ್ಮ ತಮ್ಮ ಮೂಲ ಜಾತಿಯನ್ನು ಶಾಲಾ ದಾಖಲಾತಿಯಲ್ಲಿ ನಮೂದಿಸಬಹುದಾಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ್ ಅವರು ನೀಡಿರುವ ಜಾತಿ ಪ್ರಮಾಣ ಪತ್ರದಲ್ಲಿ ಸಂಶಯಗಳಿದ್ದರೆ ಅಥವಾ ಅದರಿಂದ ಬಾಧಿತರಾದವರಿದ್ದರೆ ಮೀಸಲಾತಿ ಕಾಯ್ದೆ 1990 ಕಲಂ 4 (ಬಿ) ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.ಶಾಲಾ ದಾಖಲೆಗಳಲ್ಲಿ ಮುಖ್ಯ ಶಿಕ್ಷಕರು ಯಾವುದೇ ವಿಚಾರಣೆ ಇಲ್ಲದೆ ಪಾಲಕರು ನೀಡಿದ ಮಾಹಿತಿ ಆಧಾರದ ಮೇಲೆ ಜಾತಿ ನಮೂದು ಮಾಡಿರುತ್ತಾರೆ.
ಆದ್ದರಿಂದ ಶಾಲಾ ದಾಖಲೆಗಳಲ್ಲಿ ನಮೂದಾದ ಜಾತಿಯೇ ನೈಜ ಜಾತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ ಕಾರಣ ಶಾಲಾ ದಾಖಲಾತಿಗಳಲ್ಲಿ ಜಾತಿ ತಪ್ಪಾಗಿ ನಮೂದಾಗಿದ್ದರೆ ಸಂಬಂಧಪಟ್ಟ ಅರ್ಜಿದಾರರು ಮೊದಲು ಜಾತಿ ಪ್ರಮಾಣಪತ್ರ ಪಡೆದು ಸಂಬಂಧಸಿದ ಶಾಲಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿ, ಶಿಕ್ಷಣ ಇಲಾಖೆಯ ಅನುಮತಿ ಪಡೆದು ತಿದ್ದುಪಡಿಮಾಡಿಕೊಳ್ಳಬಹುದಾಗಿದೆ.
ಸದರಿ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಮಾಡಲು ಮುಖ್ಯ ಶಿಕ್ಷಕರು ಸಂಬಂಧಿಸಿದ ಬಿಇಒಗಳ ಮುಖಾಂತರ ಡಿಡಿಪಿಐಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅವರು ಸರ್ಕಾರದ ಸುತ್ತೋಲೆಯಂತೆ ಪರಿಶೀಲನೆ ನಡೆಸಿ ದಾಖಲಾತಿಗಳು ಸರಿ ಇದ್ದರೆ ಜಾತಿ ತಿದ್ದುಪಡಿ ಮಾಡಲು ಆದೇಶ ನೀಡುವರು ಎಂಬುದಾಗಿ ರಂಗನಾಥ್ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments