ಚಳ್ಳಕೆರೆ ಮೇ.22 ಇದು ಜ್ಞಾನ ದೇಗುಲ ಕೈ ಮುಗಿದು ಒಳಗೆ ಬನ್ನಿ ಎಂಬ ಬದಲಾಗಿ ಇದು ಕುಡುಕರ ಅಡ್ಡೆ ಕೇಂದ್ರನಾ ಎಂಬ ಅನುಮಾನೆ ಎಡೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಮದ್ಯದ ಬಾಟಲು. ಕಸದ ತ್ಯಾಜ್ಯದಿಂದ ತುಂಬಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಳ ಉತ್ಪತ್ತಿ ಕೇಂದ್ರವಾಗಿದೆ.
ಶಾಲಾ ಆವರದಲ್ಲಿ ಬಳಕೆಗಾಗಿ ನಿರ್ಮಿಸಿದ ನೀರಿನ ತೊಟ್ಟಿ ತುಂಬಿ ಹರಿಯುತ್ತಿದ್ದು ನೀರೂ ಸಹ ಮಲಿನಗೊಂಡಿದ್ದು ಸೊಳ್ಳೆಗಳ ತಾಣವಾಗಿದೆ ಇನ್ನೇನು ಶಾಲೆ ಪ್ರಾರಂಭವಾಗಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇಂತಹ ಮಲೀನವಾದ ಸ್ಥಳ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ. ಗ್ರಾಮೀಣ ಭಗಾದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಶಾಲಾ ಆವರಣಗಳು ಕುಡುಕರ ಅಡ್ಡೆಗಳಗಾಗಿವೆ .
ಶಾಲಾ ಆವರಣದಲ್ಲಿ ಮದ್ಯದ ಬಾಟಲಿ ಹಾಗೂ ಕಸದ ರಾಶಿಯನ್ನು ಸ್ವಚ್ಚತೆ ಮಾಡುವವರು ಯಾರು ..? ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ. ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.
0 Comments