ಚಳ್ಳಕೆರೆ:ಭಗವಾನ್ ಶ್ರೀ ರಾಮಕೃಷ್ಣಪರಮಹಂಸರ ಪತ್ನಿ ಶ್ರೀ ಶಾರದಾದೇವಿ ಅವರ ಜನ್ಮದಿನಾಚರಣೆ ನಗರದ ವಾಸವಿ ಕಾಲೋನಿಯಲ್ಲಿರುವ ಶಾರದಾಶ್ರಮದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಜನ್ಮದಿನದ ಅಂಗವಾಗಿ ಬೆಳಗ್ಗೆ ಶಾರದಾದೇವಿ ಅರ್ಚನೆ ಹೋಮ ಭಜನೆ ವೇದಘೋಷ, ವಿಶೇಷ ಪೂಜೆ,. ಶ್ರೀ ಶಾರದಾ ಮೂಲ ಮಂತ್ರ ಹೋಮ ಜರುಗಿತು.
ಭಕ್ತರಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ನಾಮ ಸಂಕೀರ್ತನೆ ನಡೆದವು. ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯೂರಿನ ಶಾರದಾಶ್ರಮ ಮಠದ ಚೈತನ್ಯ ಮಯೀ ಮಾತಾಜಿ ಮಾತನಾಡಿ, ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀಶಾರದಾದೇವಿಯವರದು ಇಂದಿನ ಪೀಳಿಗೆಗೆ ಶ್ರೀಮಾತೆ ಶ್ರೀ ಶಾರದಾದೇವಿ ಯವರ ಬದುಕು, ತತ್ವ, ಸಂದೇಶ ಮತ್ತು ಆದರ್ಶಗಳು ದಾರಿ ದೀಪವಾಗಬೇಕು. ಎಲ್ಲರೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರದ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ತ್ಯಾಗಮಯಿ ಮಾತಾಜಿ ಮಾತನಾಡಿ ಶಾರದಾದೇವಿಯವರ ವ್ಯಕ್ತಿತ್ವ ಗಂಗಾ ನದಿಯ ಪಾವಿತ್ರತೆಯನ್ನು ಹೊಲುತ್ತಿತ್ತು ಶಾರದಾದೇವಿಯವರ ಜೀವನ ಗಾಂಭೀರ್ಯ ಚಾರಿತ್ರ್ಯ ತೇಜಸ್ಸು ಹೊಂದಿತ್ತು ಶಾರದ ದೇವಿಯವರ ಕೀರ್ತನೆಗಳನ್ನು ಹಾಗೂ ಪುಸ್ತಕಗಳನ್ನು ಹೆಚ್ಚು ಓದಿದಷ್ಟು ಅವರ ಆದರ್ಶಗಳ ಮಹತ್ವ ತಿಳಿಯುತ್ತ ಹೋಗುತ್ತದೆ ಕೇವಲ ಓದಿದರೆ ಸಾಲದು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ತಮ್ಮ ಜೀವನ ಉತ್ತಮ ಸ್ಥಿತಿಯಲ್ಲಿ ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾದೇವಿ ಜೀವನ ಗಂಗಾ ಪರೀಕ್ಷೆಯ ವಿಜೇತ ಬಹುಮಾನವನ್ನು ಸುಷ್ಮಾ, ಶುಭ ಮುಕುಂದ, ನಯನರವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಶಾರದಾಶ್ರಮದ ಭಕ್ತವೃಂದ ಭಾಗವಹಿಸಿತ್ತು.
0 Comments