ಚಳ್ಳಕೆರೆ: ನಗರದ ಹಳೆ ಟೌನ್ ನಿವಾಸಿಯಾದ ಸ್ವಾಮಿ ಎಂಬ ಯುವಕ ಅಯ್ಯಪ್ಪ ಮಾಲೆ ಧರಿಸಿ ಇರುಮುಡಿಯೊಂದಿಗೆ ಸೈಕಲ್ ನಲ್ಲಿ ಶಬರಿಮಲೆಗೆ ಇಂದು ಮುಂಜಾನೆ ತೆರಳಿದರು.
ಈ ವೇಳೆ ಮಾತನಾಡಿ ಈ ಹಿಂದೆ 2022ರಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ತೆರಳಿದ್ದೇ ನನ್ನ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳು ಆದ ಕಾರಣ ಈ ಬಾರಿ ಸೈಕಲ್ ನಲ್ಲಿ ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆಯಬೇಕು ಎಂಬ ಮಹದಾಸೆಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಮೈಸೂರು ಮಾರ್ಗವಾಗಿ 15 ದಿನಗಳ ಕಾಲ ಸಂಚಾರ ನಡೆಸಲಿದ್ದು ಸಂಜೆಯ ವೇಳೆ ದೇವಾಲಯಗಳಲ್ಲಿ ಉಳಿದುಕೊಂಡು ಅಯ್ಯಪ್ಪ ಸ್ವಾಮಿಯ ವ್ರತವನ್ನು ಆಚರಿಸಿ ದರ್ಶನ ಪಡೆಯಬೇಕು ಎಂಬ ಇಚ್ಛೆಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ ಸ್ನೇಹಿತರಾದ ಅಭಿಷೇಕ್ ಗುರು, ಕುಮಾರ ವೀರೇಶ್ ಬಸವರಾಜ್ ಗೋವಿಂದ ಸೇರಿದಂತೆ ಕುಟುಂಬಸ್ಥರು ಹಾಗೂ ನಗರದ ನಿವಾಸಿಗಳು ಶುಭ ಹಾರೈಸಿ ಬೀಳ್ಕೊಟ್ಟರು
![](https://janadhwani.in/wp-content/uploads/2023/12/IMG-20231227-WA0090.jpg)
0 Comments