ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆ ಮತ್ತು ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ಖುಷ್ಕಿ-ನೀರಾವರಿ ಜಮೀನುಗಳುಳ್ಳ ಎಲ್ಲಾ ವರ್ಗದ ರೈತರಿಗೂ ಸರ್ಕಾರ ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆ ಮಂಜೂರು ಮಾಡಬೇಕು ಎಂಬ ಮನವಿ ಪತ್ರವನ್ನು ಚಿತ್ರದುರ್ಗ ಡಿಸಿ ವೆಂಕಟೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹೊಳಲ್ಕೆರೆ ತಾಲೂಕಿನ ರೈತರಿಗೂ ಕೂಡ ತಾಲೂಕನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದರೂ ಕಂದಾಯ ಮತ್ತು ಪಂಚಾಯತ್ ರಾಜ್, ಕೃಷಿ ಇಲಾಖೆಗಳ ನಿರ್ಲಕ್ಯö್ಯವೇ ಕಾರಣ ಕೂಡಲೇ ಈ ಭಾಗದ ಎಲ್ಲಾ ರೈತರಿಗೂ ಹಣ ಮಂಜೂರು ಮಾಡಬೇಕು ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿ ಮತ್ತು ಕ್ಷೇತ್ರಮಟ್ಟದ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆ ಮಂಜೂರಾತಿಯಲ್ಲೂ ವ್ಯತ್ಯಾಸವಾಗಿದೆ ಕೆಲ ರೈತರಿಗೆ ಹೆಚ್ಚು ಕೆಲವರಿಗೆ ಕಡಿಮೆ ಹಣ ಜಮೆಯಾಗಿದೆ ಎಂದು ಆರೋಪಿಸಿದ್ದಾರೆ
ಸರ್ಕಾರವೇ ಸ್ಥಾಪಿಸಿರುವ ಸಹಾಯವಾಣ ಕೇಂದ್ರದ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ದೂರವಾಣ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಗೋಮಾಳ, ಅರಣ್ಯಭೂಮಿ, ಬಗರ್ಹುಕುಂ, ಹುಲ್ಲುಬನ್ನಿ, ಖರಾಬು ಸೇರಿದಂತೆ ಖುಷ್ಕಿ ಮತ್ತು ನೀರಾವರಿ ಜಮೀನುಗಳ ರೈತರು ಮತ್ತು ಪೌತಿ ಖಾತೆದಾರರು ಬಿತ್ತನೆ ಮಾಡಿ ಬೆಳೆನಷ್ಟಕ್ಕೆ ಒಳಗಾಗಿದ್ದಾರೆ ಈ ಹಿನ್ನೆಲೆ ಎಲ್ಲರಿಗೂ ಬೆಳೆನಷ್ಟ ಪರಿಹಾರ ಮಂಜೂರು ಮಾಡಬೇಕು ಎಂದರು
ಸರ್ಕಾರ ಖುಷ್ಕಿ ಮತ್ತು ನೀರಾವರಿ ಜಮೀನುಳ್ಳ ರೈತರಿಗೆ ಉಚಿತವಾಗಿ ಬೀಜ ಗೊಬ್ಬರ ಲಘು ಪೋಷಕಾಂಶಗಳನ್ನು ವಿತರಿಸಲು ಕ್ರಮ ವಹಿಸಲಿ; ಕಳೆದ ಹತ್ತಾರು ವರ್ಷಗಳ ಕಾಲ ಬೆಳೆನಷ್ಟಕ್ಕೆ ಒಳಗಾದ ಚಳ್ಳಕೆರೆ ತಾಲೂಕಿನ ಎಲ್ಲಾ ವರ್ಗದ ರೈತರಿಗೂ ರೈತ ಸಂಪರ್ಕ ಕೇಂದ್ರದಲ್ಲಿ ಆಯಾ ಭಾಗದ ರೈತರಿಗೆ ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ, ಲಘುಪೋಷಕಾಂಶಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಮನವಿ ಸಲ್ಲಿಸಿದರು
ಖುಷ್ಕಿ ಮತ್ತು ನೀರಾವರಿ ಜಮೀನುಗಳಲ್ಲಿನ ಸೂರ್ಯಕಾಂತಿ, ಹೂವು, ಹತ್ತಿ, ಸಜ್ಜೆ, ರಾಗಿ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ತೊಗರಿ ಮತ್ತು ಎಲ್ಲಾ ಬಗೆಯ ತೋಟಗಾರಿಕಾ ಬೆಳೆಗಳಿಗೂ ಬೆಳೆವಿಮೆ ಮತ್ತು ಬೆಳೆ ನಷ್ಟಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಡಾ ವಾಸುದೇವ ಮೇಟಿ ಬಣದ ಪದಾಧಿಕಾರಿಗಳಾದ ಡಾ ವಾಸುದೇವ ಮೇಟಿ, ಈ ಎನ್ ಲಕ್ಷಿö್ಮÃಕಾಂತ್, ಓಂಕಾರಪ್ಪ, ಪಿ ನಾಗರಾಜು, ಎಚ್ ಶಿವಮ್ಮ, ಶ್ರೀಧರರೆಡ್ಡಿ, ಸಿದ್ದೇಶಯಾದವ್, ಕುಮಾರ ಸತ್ಯಪ್ಪ, ಟಿ ಮೋಹನ್ ಎಚ್ಡಿಪುರ, ಕೆರೆಯಾಗಳಹಳ್ಳಿ, ಉಪ್ಪರಿಗೇನಹಳ್ಳಿ, ಮತ್ತು ಹೊಳಲ್ಕೆರೆ ತಾಲೂಕಿನ ರೈತ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ
(
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments