ಚಳ್ಳಕೆರೆ ಸೆ.20.ನಗರದ ಇಂದಿರಾ ದಿನವಹಿ ತರಕಾರಿ ಮಾರುಕಟ್ಟೆ ದಿನಸಿ ಅಂಗಡಿ ಹೋಟೆಲ್ ಫುಟ್ಪಾತ್ ವ್ಯಾಪಾರ ಆಯಿಲ್ ಮಿಲ್ ಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಜಿಲ್ಲಾ ಆಹಾರ ಅಂಕಿತ ಅಧಿಕಾರಿ ಡಾ ಪಾಲಾಕ್ಷ ನೇತೃತ್ವದ ತಂಡ ಭೇಟಿ ನೀಡಿ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾದಿಕಾರದ ನಿಯಮಗಳನುಸಾರ ವ್ಯಾಪಾರ ಪರವಾಗಿ ಪತ್ರ ಮತ್ತು ನೊಂದಣಿ ಮಾಡಿಸುವಂತೆ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆಹಾರ ಅಂಕಿತ ಅಧಿಕಾರಿ ಡಾ ಪಾಲಾಕ್ಷ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ಅಂದಾಜು ಮೌಲ್ಯದ ಪ್ರಕಾರ ಶುಲ್ಕವನ್ನು ಕಟ್ಟಿ ವ್ಯಾಪಾರ ಪರವಾನಿಗೆ ಪಡೆಯಬೇಕು ಸಾರ್ವಜನಿಕರು ದಿನನಿತ್ಯ ಬಳಸುವ ತರಕಾರಿ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಈ ಕ್ರಮಗಳನ್ನು ಅನುಸರಿಸಬೇಕು ಈಗಾಗಲೇ ಮೂರು ತಿಂಗಳ ಹಿಂದೆಯೇ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದರು ವ್ಯಾಪಾರಸ್ದರು ಎಚ್ಚೆತ್ತುಕೊಂಡಿಲ್ಲ ಹಾಗಾಗಿ ಇಂದು ಎಲ್ಲಾ ಅಂಗಡಿ ಹೋಟೆಲ್ ಗಳಿಗೆ ಭೇಟಿ ನೀಡಿ ಮತ್ತೊಮ್ಮೆ ತಿಳಿಸಿದ್ದೇವೆ ಈ ಪರವಾನಿಗೆ ಪತ್ರವನ್ನು ಪಡೆಯಲು ವ್ಯಾಪಾರಸ್ಥರು ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಫೋಟೋ ಪ್ರತಿಯನ್ನು ಪಡೆದು ಸ್ಥಳದಲ್ಲಿಯೇ ನೋಂದಾಯಿಸಲಾಗುವುದು ನಂತರ ಪರವಾನಗಿ ಪತ್ರವನ್ನು ನೀಡಲಾಗುವುದು ಈ ಪರವಾನಗಿ ಪತ್ರವನ್ನು ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಬಿತ್ತರಿಸಬೇಕು ಮುಂದಿನ ದಿನಗಳಲ್ಲಿ ಕಾನೂನು ಮೀರಿ ವ್ಯಾಪಾರಸ್ಥರು ಪರವಾನಗಿ ಪತ್ರವನ್ನು ಮಾಡಿಸದೆ ಇದ್ದಲ್ಲಿ ಅಂತಹವರ ವಿರುದ್ಧ ಇಲಾಖೆಯು ದಂಡವನ್ನು ವಿಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಜಿಲ್ಲಾ ಅಂಕಿತ ಅಧಿಕಾರಿ ಡಾ. ಪಾಲಾಕ್ಷ ಆಹಾರ ಸುರಕ್ಷತಾ ಅಧಿಕಾರಿಗಳಾದ ಚಿದಾನಂದಪ್ಪ ಮಂಜುನಾಥ ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments