ಚಳ್ಳಕೆರೆ ಆ 27. ವ್ಯಾಪಾರದ ಸೋಗಿನಲ್ಲಿ ಬಂದು ಚಿನ್ನದ ಸರ ಕದ್ದೊಯ್ದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಹೌದು ಇದು ಚಳ್ಳಕೆರೆ ನಗರದ ಪಾವಗಡರಸ್ತೆಯ ಮಹಾಲಕ್ಷ್ಮಿ ಟ್ಯಾಕೀಸ್ ಮುಂಭಾಗದ ದವನಂ ಬಟ್ಟೆ ಅಂಗಡಿಯ ಮಾಲಿಕ ಗೋವಿಂದರಾಜ್ ಅಂಗಡಿಯಲ್ಲಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಬೆಳಿಗ್ಗೆ ಸುಮಾರು 9:30 ಸಮಯದಲ್ಲಿ
ಮೂರು ಜನ ವ್ಯಕ್ತಿಗಳು ಬಂದು ವ್ಯಾಪಾರ ಮಾಡುವ ಸೋಗಿನಲ್ಲಿ ಮಾಲೀಕನಿಗೆ ಕಾರದಪುಡಿ ಕಣ್ಣಿಗೆ ಎರಚಿ ಕೊರಳಲ್ಲಿ ಇದ್ದ 45 ಗ್ರಾಂ 2.80 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಇಂದು ಭಾನುವಾರ ಸಂತೆ ಜನದಟ್ಟಣೆ ಪ್ರದೇಶ ಯಾವಾಗಲೂ ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ಹಾಡು ಅಗಲಿನಲ್ಲೇ ಕಳ್ಳತನವಾಗಿರುವುದು ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ತಕ್ಷಣ ಚಳ್ಳಕೆರೆ ಪೋಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಚಳ್ಳಕೆರೆ ಠಾಣೆಯ ಪಿ ಐ ಆರ್.ಎಫ್.ದೇಸಾಯಿ. ಪಿಎಸ್ ಐ ಗಳಾದ ಸತೀಶ್ ನಾಯ್ಕ. ಧರೆಪ್ಪ. ಹಾಗೂ ಕ್ರೈ ಸಿಬ್ಬಂದಿಗಳ ಭೇಟಿ ನೀಡಿ ಕಳವು ಘಟನೆಯ ಅಕ್ಕಪಕ್ಕದ ಅಂಗಡಿಗಳಲ್ಲಿನ ಸಿ.ಸಿ ಕ್ಯಾಮರ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments