ಚಿತ್ರದುರ್ಗ ಮೇ.29:
ಭರಮಸಾಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳ ಅಡಿ ವ್ಯಕ್ತಿಗಳು ಕಾಣೆಯಾದ ಕುರಿತು ದೂರ ದಾಖಲಾಗಿವೆ.
ಫೆಬ್ರವರಿ 8 ರಂದು ಚಿಕ್ಕೇನಹಳ್ಳಿ ಗ್ರಾಮದ ನಿವಾಸಿ ನಾಗರಾಜ (40 ವರ್ಷ) ತಂದೆ ತಿಪ್ಪೇಸ್ವಾಮಿ ಕಾಣೆಯಾಗಿದ್ದಾರೆ. 5.5 ಅಡಿ ಎತ್ತರ, ಕೋಲು ಮುಖ, ತಳ್ಳನೆ ಶರೀರ, ಕಪ್ಪು ಮೈಬಣ್ಣ ಹೊಂದಿರುವ ನಾಗರಾಜ ಮುಂದಲೆಯಲ್ಲಿ ಕೂದಲು ಇರುವುದಿಲ್ಲ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ನೀಲಿ ಬಣ್ಣದ ಅರ್ಧ ತೋಳಿನ ಟೀ ಶರ್ಟ್, ನೀಲಿ ಪಟೆ ಪಟೆ ಲುಂಗಿ ಧರಿಸಿರುತ್ತಾರೆ.
ಮಾರ್ಚ್ 8 ರಂದು ಕಾಲಗೆರೆ ಗ್ರಾಮದ ನಿವಾಸಿ ಪ್ರಸನ್ನಕುಮಾರ (27 ವರ್ಷ) ತಂದೆ ಬಸಪ್ಪ ಕಾಣೆಯಾಗಿದ್ದಾರೆ. 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣಾ ಮೈಕಟ್ಟು, ಎಣ್ಣೆಗೆಂಪು ಬಣ್ಣ ಹೊಂದಿರುವ ಪ್ರಸನ್ನಕುಮಾರ ಎಡಗೈ ಮೇಲೆ ಎಸ್ ಮತ್ತು ಚಿನ್ನು ಎಂದು ಹಚ್ಚೆ ಗುರುತು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮಾರ್ಚ್ 27 ರಂದು ಹಿರೆಬೆನ್ನೂರು ಗ್ರಾಮದ ನಿವಾಸಿ ಹನುಮಂತಪ್ಪ (68 ವರ್ಷ) ತಂದೆ ಮಾರಪ್ಪ ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಕೋಲು ಮುಖ, ಸಾಧಾರಣಾ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುವ ಹನುಮಂತಪ್ಪ ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಬಿಳಿ ಬಣ್ಣದ ಶರ್ಟ್, ಬಿಳಿಬಣ್ಣದ ಪಂಚೆ, ಹಾಗೂ ಕೆಂಪು ಬಣ್ಣದ ಟವಲ್ ಧರಿಸಿರುತ್ತಾರೆ.
ಈ ಮೇಲ್ಕಂಡ ವ್ಯಕ್ತಿಗಳ ಕುರಿತು ಮಾಹಿತಿ ತಿಳಿದು ಬಂದಲ್ಲಿ ಭರಮಸಾಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕೆಂದು ಪೊಲೀಸ್ ಠಾಣಾಧಿಕಾರಿ ಕೋರಿದ್ದಾರೆ.
0 Comments