ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ. ದ್ಚ. ವೃದ್ದ ವಿಕಲಚೇನನೊಬ್ಬ ಮ್ಯೂಟೇಷನ್ ಪತ್ರಕ್ಕಾಗಾಗಿ ಅಲೆದಾಡಿದರೂ ಸ್ಪಂಧಿಸದ ನಾಡಕಚೇರಿ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಕೈಬರಹ ಮ್ಯೂಏಷನ್ ಪತ್ರ ನೀಡಿದ ನಾಡಕಚೇರಿ ಸಿಬ್ಬಂದಿ.
ಮಾ.22 ಮ್ಯೂಟೇಷನ್ ಪತ್ರಕ್ಕಾಗಿ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೌದು ಇದು ಚಳ್ಳಕೆರೆ ತಾಲೂಕಿನ ಯಲಗಟ್ಟಿ ಗ್ರಾಮದ ಸಮೀಲದ ಯಲಗಟ್ಟೆ ಗೊಲ್ಲರಹಟ್ಟಿಯ ಮಂಜಣ್ಣ ಎಂಬ ವೃದ್ದ ಕಣ್ಣು ವಿಕಲಚೇತನಾಗಿದ್ದು ಪರಶುರಾಂಪುರ ನಾಡ ಕಚೇರಿಗೆ ಹಳೆಯ ಮ್ಯೂಟೇಷನ್ ನೀಡುವಂತೆ ಅರ್ಜಿ ಸಲ್ಲಿಸಿದರೆ ಕಂಪ್ಯೂಟರ್ ಸೆಂಟರ್ ನಲ್ಲಿ ತೆಗೆಸಿ ಎಂದು ನಾಡ ಕಚೇರಿಯ ಸಿಬ್ಬಂದಿ ವೆಂಕಟೇಶ್ ಹೇಳಿತ್ತಾರೆ. ಕಂಪ್ಯೂಟರ್ ಸೆಂಟರ್ ಗೆ ಹೋದರೆ ಪರಶುಪಾಂಪುರ ನಾಡ ಕಚೇರಿಯಲ್ಲಿ ಸಿಗುತ್ತವೆ ಎನ್ನುತ್ತಾರೆ ಮಾರ್ಚ್ 1 ನೇ ತಾರಿಖಿನಿಂದ ಅಲೆದರೂ ಪರಶುರಾಂಪುರ ನಾಡ ಕಚೇರಿಯ ವೆಂಕಟೇಶ್ ಸ್ಪಂದಿಸುತ್ತಿಲ್ಲ ನನಗೆ ತುರ್ತು ಅವಶ್ಯಕತೆ ಇದ್ದು ಇಂದು ಚಳ್ಳಕೆರೆ ತಾಲೂಕು ಕಚೇರಿಯ ದಾಖಲೆ ಕೊಠಡಿತಲ್ಲಿ ಕೇಳಿದರೆ 2000 ಇಸವಿಯ ಹಳೆಯ ಮ್ಯೂಟೇಷನ್ ಪರಶುರಾಂಪುರ ನಾಡ ಕಚೇರಿಯಲ್ಲಿ ದೊರೆಯುತ್ತವೆ ಇತ್ತೀಚಿನ ಹೊಸ ಮ್ಯೂಟೇಷನ್ ಬೇಕಾದರೆ ಕಂಪ್ಯೂಟರ್ ನಲ್ಲಿ ದೊರೆಯುತ್ತವೆ ನೀವು ನಾಡ ಕಚೇರಿಯಲ್ಲೇ ಪಡೆಯ ಬೇಕು ಎನ್ನುತ್ತಾರೆ ಕಣ್ಣು ಕಾಣದ ಕುರುಡನಾಗಿದ್ದು ನಾನುತ್ತೊಬ್ಬರ ಆಸರೆಯಿಂದ ಸುಮಾರು 20 ದಿನಗಳಿಂದ ಪರಶುರಾಂಪುರ ನಾಡ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ನಾಡಕಚೇರಿ ವೆಂಕಟೇಶ್ ಉಢಾಪೆ ಉತ್ತರ ನೀಡುತ್ತಾರೆ ಎಂದು ಕಣ್ಣು ಕಾಣದ ವೃದ್ದ ಮಂಜಣ್ಣ ಶುಕ್ರವಾರ ತಾಲೂಕು ಕಚೇರಿ ಬಳಿ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ನಾಡಕಚೇರಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ಕೈ ಬರಹ ಮ್ಯೂಟೇಷನ್ ಪತ್ರಗಳನ್ನು ನೀಡಿ ಕಳಿಸಿದ್ದಾರೆ.
0 Comments