ವೃದ್ದಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು.

by | 03/09/23 | ಸಾಮಾಜಿಕ


ಹಿರಿಯೂರು ಸೆ.,3 ತಾಲೂಕು ಬೀಮನ ಬಂಡೆ ಶುಭೋದಯ ವೃದ್ಧಾಶ್ರಮದಲ್ಲಿ ಡಾ. ಸಂಪತ್ ಕುಮಾರ್ ಮತ್ತು ಡಾ. ವಾಸಂತಿ ಸಂಪತ್ ಕುಮಾರ್ ವೈದ್ಯ ದಂಪತಿಗಳು ತಮ್ಮ 27ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ವೃದ್ಧಾಶ್ರಮದ ಆಶ್ರಮ ವಾಸಿಗಳೊಂದಿಗೆ ಊಟ ಮಾಡಿ , ಕೇಕ್ ಕಟ್ ಮಾಡಿ ಹಣ್ಣು ತಿಂದು ಸಂಭ್ರಮ ಪಟ್ಟು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ ಕುಟುಂಬಗಳಲ್ಲಿ ಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಕೆಲಸವಾಗಬೇಕು.. ಇಲ್ಲವಾದಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗುತ್ತದೆ ಇಲ್ಲಿರುವ ವೃದ್ಧರಿಗೆ ಎಲ್ಲರೂ ಸಂಬಂಧಿಕರೇ… ಆದ್ದರಿಂದಲೆ ಎಲ್ಲಾ ಕಡೆಯಿಂದ ನಾಗರಿಕ ಬಂಧುಗಳು ವೃದ್ಧಾಶ್ರಮಗಳಲ್ಲಿ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಿದ್ದಾರೆ.. ನೀವ್ಯಾರು ಒಂಟಿಗಳಲ್ಲ ನಿಮ್ಮೊಂದಿಗೆ ಸಮಾಜವನ್ನು ಬೆಸೆಯಲಾಗಿದೆ. ಆದ್ದರಿಂದ ನೀವು ಇರುವಷ್ಟು ದಿನ ಸಂತೋಷದಿಂದ ಸಂಭ್ರಮದಿಂದ ಆರೋಗ್ಯದಿಂದ ಇರಬೇಕು ರಾಗ ದ್ವೇಷ ಅಸೂಯಗಳನ್ನು ಮೂಲೆಗೆ ತಳ್ಳಿ ನಗುನಗುತ ನೂರಾರು ವರ್ಷ ಸುಖವಾಗಿ ಬಾಳಿರಿ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಡಾ. ಸಂಪತ್ ಕುಮಾರ್ ಅವರ ಕುಟುಂಬ ವರ್ಗದವರು ಹಾಗು ಆಶ್ರಮದ ಮಹಾಂತೇಶ್,, ನಂದಕುಮಾರ್, ಗಿರೀಶ್ ಬಾಬು ತಾವರೆಕೆರೆ ಹಾಗೂ ಇತರರು ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *