ಹಿರಿಯೂರು ತಾಲ್ಲೂಕಿನ ಐಮಂಗಲ
ಪೋಲಿಸ್ ಠಾಣೆ, ಗ್ರಾಮಾಂತರ
ಪೋಲಿಸ್ ಠಾಣೆ ಕರ್ತವ್ಯ ನಿರ್ವಹಿಸಿ
ನಂತರ ಬಡ್ತಿ ಪಡೆದು ಅಜ್ಜಂಪುರ
ಪೋಲೀಸ್ ಠಾಣೆಯಲ್ಲಿ ಕರ್ತವ್ಯ
ನಿರ್ವಹಿಸಿದ್ದ ಸಿಪಿಐ ಲಿಂಗರಾಜು (42)
ವರ್ಷ ಇಂದು ಬೆಳಗ್ಗೆ
ಹೃದಯಾಘಾತದಿಂದ ಮೃತಪಟ್ಟಿದ್ದಾರೆ
ಎನ್ನಲಾಗಿದೆ. ಆದರೆ ಹೃದಯಾಘಾತ
ಎಂದರೂ ಸಹ, ವೈಯುಕ್ತಿಕ ಜೀವನದಲ್ಲಿ
ಎಲ್ಲವೂ ಸರಿ ಇಲ್ಲದೆ ಬಹಳಷ್ಟು ನೋವು
ಅನುಭವಿಸುತ್ತಿದ್ದರು ಎಂದು
ಹೇಳಲಾಗುತ್ತಿದೆ. ಅವರ ಸಾವಿನ ಸುತ್ತ
ಅನುಮಾನದ ಹುತ್ತ ಸೃಷ್ಟಿಸಿದ್ದು, ಸಾವಿನ
ರಹಸ್ಯ ಇದೀಗ ಹೊರಬರಬೇಕಿದೆ.
ಬೆಂಗಳೂರಿನಿಂದ ಚಿತ್ರದುರ್ಗ ನಗರಕ್ಕೆ ಬಂದು
ನಗರದ ನವೀನ್ ರೆಸಿಡೆನ್ಸಿಯಲ್ಲಿ ಲಿಂಗರಾಜು
ಅವರು ಲಾಡ್ಜ್ ಮಾಡಿಕೊಂಡು ತಂಗಿದ್ದರು
ಎನ್ನಲಾಗಿದೆ. ಇಂದು ಬೆಳಿಗ್ಗೆ ಎದೆನೋವು
ಕಾಣಿಸಿಕೊಂಡಿತ್ತಂತೆ. ಹೊಟೇಲ್ ನವರು ಮಹಿಳಾ
ಠಾಣೆಗೆ ತಿಳಿಸಿದ್ದು,ಅವರನ್ನು ಹತ್ತಿರದ ಬಸವೇಶ್ವರ
ಆಸ್ಪತ್ರೆಗೆ ತಕ್ಷಣ ಅವರನ್ನು ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಎನ್ನಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments