![](https://janadhwani.in/wp-content/uploads/2024/01/IMG-20240105-WA0109-1.jpg)
ಹಿರಿಯೂರು ದಿನಾಂಕ 051 24ರಂದು ವಿವಿಸಾಗರ ಹಾಗೂ ಬದ್ರ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣ ಸಮಿತಿ ಸಭೆ ಹಿರಿಯೂರ್ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಜಾಂಚಿ ಸುರೇಶ್ ಅವರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಕುಡಿಯುವ ನೀರಿನ ಅವಶ್ಯಕತೆ 9 ಟಿಎಂಸಿ ಇದ್ದು ಆದರೆ ವಾಣಿವಿಲಾಸ ಸಾಗರಕ್ಕೆ ಕೇವಲ ಎರಡು ಟಿಎಂಸಿ ಮಂಜೂರಾಗಿರುವುದರಿಂದ. ಯಾವಾಗೆಲ್ಲ ಭದ್ರ ಜಲಾಶಯ ತುಂಬುತ್ತದೆಯೋ ಅವಾಗೆಲ್ಲ ವಿ. ವಿ.ಸಾಗರ ಜಲಾಶಯಕ್ಕೆ ನೀರು ಹರಿಸಿ ಬರ್ತಿಯಾಗಿರುವಂತೆ ನೋಡಿಕೊಳ್ಳಬೇಕಾದ ತುರ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಹೋರಾಟಗಾರರಿಗೆ ಇರಬೇಕಾಗುತ್ತದೆ ಎಂದು ತಿಳಿಸಿದರು.
![](https://janadhwani.in/wp-content/uploads/2024/01/IMG-20240105-WA0108.jpg)
ಕಸವನಹಳ್ಳಿ ರಮೇಶ್ ಮಾತನಾಡಿ ತುಂಗಾ ದಿಂದ ಭದ್ರಾ ಜಲಾಶಯಕ್ಕೆ ಇರುವ ಹನ್ನೆರಡು ಕಿಲೋಮೀಟರ್ ಕಾಲುವೆಯನ್ನು ತುರ್ತಾಗಿ ಮುಗಿಸಬೇಕು, ಜನವರಿಯಿಂದ ಏಪ್ರಿಲ್ ತಿಂಗಳ ನವರಿಗೆ ಮಾತ್ರ ತುಂಗಾ ದಿಂದ ಭದ್ರಾ ಜಲಾಶಯಕ್ಕೆ ಕಾಮಗಾರಿ ಮಾಡಬಹುದು ಉಳಿದಂತೆ ಮಳೆಗಾಲ ಪ್ರಾರಂಭವಾಗುತ್ತದೆ,. 13 ವರ್ಷಗಳಿಂದ ಹನ್ನೆರಡು ಕಿಲೋಮೀಟರ್ ಕಾಲುವೆಯನ್ನು,, ಪಂಪ ಹೌಸ್ ಗಳನ್ನು ಹಾಗು ಟನಲ್ ಕಾಮಗಾರಿಗಳನ್ನು ಮುಗಿಸದೆ ಯೋಜನಾ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದೆ ಇದಕ್ಕಾಗಿ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಾಧ್ಯಕ್ಷ ಎಚ್ಆರ್ ತಿಮ್ಮಯ್ಯ ಮಾತನಾಡಿ ಮುಂದಿನ ವಾರ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಭದ್ರಾ ಮೇಲ್ದಂಡೆ ವೀಕ್ಷಣೆಗೆ ಬರುತ್ತಿದ್ದು ಅಂದು ಹೋರಾಟ ಸಮಿತಿ ಜೊತೆ ಸಭೆ ನಡೆಸಿ ಅಹವಾಲುಗಳನ್ನು ಕೇಳಬೇಕು ಇದಕ್ಕಾಗಿ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಬೇಕು, ಕೇಂದ್ರ ಸಚಿವ ನಾರಾಯಣಸ್ವಾಮಿ ಭದ್ರಾ ಮೇಲ್ದಂಡೆಗೆ 5300 ಕೋಟಿ ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಕಾರ್ಯದರ್ಶಿ ಸಿದ್ದರಾಮಯ್ಯ ಹೋರಾಟದ ಅನಿವಾರ್ಯತೆ ಮತ್ತೊಮ್ಮೆ 2008 ರಲ್ಲಿ ನಡೆದ ನೀರಾವರಿ ಹೋರಾಟದ ರೀತಿಯಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಆರ್ ಕೆ ಗೌಡ್ರು ಮೂಡಲಗಿರಿಯಪ್ಪ, ರಾಜಶೇಖರ್,ಬೀರೇನಳ್ಳಿ ಶಿವಣ್ಣ , ಪಿಟ್ಲಾಲಿ ಶ್ರೀನಿವಾಸ್,
ಮಂಜುನಾಥ್ ಮಾಳಿಗೆ, ಉದ್ಯಮಿ ಆನಂದ ಶೆಟ್ರು, ಗಂಗಾಧರಪ್ಪ,, ನಾರಾಯಣ ಆಚಾರ್, ಆಲೂರ್ ಗೀತಮ್ಮ, ದೇವರಾಜ್ ನಾಗಣ್ಣ ರಾಮಚಂದ್ರ ಕಸವನಹಳ್ಳಿ ಶ್ರೀವಾರು ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ಕೊಟ್ಟರು.
0 Comments