ಚಿತ್ರದುರ್ಗ ಮೇ.30:
ಸಂಶೋಧನೆಗಳ ಪ್ರಕಾರ ದೇಶದಲ್ಲಿ ನೂರಕ್ಕೆ ಶೇ.13.4 ರಷ್ಟು ಜನರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಸ್ಕಿಜೋಫ್ರೇನಿಯಾ ಶೇ.1 ರಷ್ಟು ಜನರಲ್ಲಿ ಕಂಡುಬಂದಿದೆ. ಮಾನಸಿಕ ಖಾಯಿಲೆಗಳನ್ನು ಸಹ ಸಂಪೂರ್ಣವಾಗಿ ಗುಣ ಪಡಿಸಬಹುದಾಗಿದೆ. ಮಾನಸಿಕ ರೋಗಿಗಳನ್ನು ಪ್ರೀತಿ ಹಾಗೂ ಸಹಾನುಭೂತಿಯಿಂದ ಕಾಣಬೇಕು ಎಂದು ಮನೋವೈದ್ಯ ಡಾ.ಆರ್.ಮಂಜುನಾಥ ಹೇಳಿದರು.
ನಗರದ ಶ್ರೀ.ಕಬೀರಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಕಿಜೋಫ್ರೇನಿಯಾ ಎನ್ನುವುದು ತೀವ್ರತರವಾದ ಮಾನಸಿಕ ಕಾಯಿಲೆಯಾಗಿದೆ. ಇದರಲ್ಲಿ ರೋಗಿಯು ನೈಜ ಜಗತ್ತಿನ ಜೊತೆಗೆ ಸಂಪರ್ಕದಲ್ಲಿ ಇರುವುದಿಲ್ಲ. ಯೋಚನೆ ಮಾಡುವ ರೀತಿ, ಮಾತನಾಡುವ ರೀತಿಯಲ್ಲಿ ವ್ಯತ್ಯಾಸ ಕಂಡುಬುರತ್ತದೆ. ಸ್ಕಿಜೋಪ್ರೇನಿಯಾದಿಂದ ಬಳಲುವರು ದೈನಂದಿನ ಕಾರ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಸ್ಕಿಜೋಫ್ರೇನಿಯಾ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾದ ಚಿಕಿತ್ಸೆ ದೊರೆಯುತ್ತದೆ. ಉತ್ತಮ ಸಮಾಲೋಚನೆ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು. ನಂತರ ಸಾಮಾನ್ಯರಂತೆ ಜೀವಿಸಬಹುದು. ಈ ಕಾಯಿಲೆ ಇರುವ ವ್ಯಕ್ತಿಗಳನ್ನು ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಕಾಣಬಾರದು. ಇವರ ಬಗ್ಗೆ ಹೆಚ್ಚಿನ ಸಹಾನೂಭೂತಿ ತೋರಬೇಕು. ಇವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು.
ಸ್ಪ್ಲಿಟ್ ಪರ್ಸನಾಲಿಟಿ ಮತ್ತು ಸ್ಕಿಜೋಫ್ರೇನಿಯಾ ಎರಡು ಕೂಡ ಬೇರೆ ಬೇರೆ. ಮೆದುಳಲ್ಲಿ ರಸಾಯನಿಕ ಬದಲಾವಣೆಗಳಿಂದ ಒಂದು ನಿರ್ದಿಷ್ಟವಾದ ವಯಸ್ಸಿನಲ್ಲಿ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಕಾಯಿಲೆ ಶುರುವಾಗುತ್ತದೆ. ವಿಶೇಷವಾಗಿ ಹದಿ ಹರಿಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅವಳಿ ಜವಳಿ ಮಕ್ಕಳಲ್ಲಿ ಒಂದು ಮಗು ಸ್ಕಿಜೋಪ್ರೇನಿಯಾಗಿ ತುತ್ತಾದರೆ ಇನ್ನೊಂದು ಮಗುವುದ ರೋಗಕ್ಕೆ ಒಳಗಾಗುವ ಸಂಭವ ಇರುತ್ತದೆ. ಸರ್ಕಾರದಿಂದ ಮಾನಸಿಕ ಖಾಯಿಲೆಯಿಂದ ಬಳಲುವವರಿಗಾಗಿ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416 ಆರಂಭಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದು ಡಾ.ಆರ್.ಮಂಜುನಾಥ ಹೇಳಿದರು.
ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಮಹಾಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆದಿ ಋಷಿಗಳು ಹೇಳಿದಂತೆ ಮನಸ್ಸೆ ದೇಹದಲ್ಲಿ ಅತಿ ಮುಖ್ಯವಾದ ಭಾಗ, ತಾಯಿಬೇರಿನಂತೆ ಮನಸ್ದು ಎಲ್ಲದಕ್ಕೂ ಮೂಲ. ಮನ್ಸು ಹುಟ್ಟಿದ್ದು ಅರ್ಧ ಗಾಳಿ ಇನ್ನರ್ಧ ಆಕಾಶ, ಆಕಾಶ ಗಾಳಿ ಸೇರಿ ಮನಸ್ಸು ಸೃಷ್ಟಿಯಾಗಿದೆ. ವಾಯುವಿನಂತೆ ಮನಸ್ಸು ಸಂಚರಿಸುತ್ತದೆ, ಆದರಿಂದ ಮನಸ್ಸು ಚಂಚಲವಾಗಿರುತ್ತದೆ, ಕಣ್ಣಿಗೆ ಕಾಣದ ಮನಸ್ಸು. ಮಾನಸಿಕವಾದಂತಹ ವಸ್ತುಗಳು ಸಿಗಲ್ಲ ಮಾನಸಿಕ ಕಾಯಿಲೆಯಿಂದ ಬಳಲುವವರು ಬಹಳಷ್ಟು ಜನರಿದ್ದಾರೆ. ಮಾನಸಿಕ ಕಾಯಿಲೆಯ ಪರಿಹಾರಕ್ಕೆ ಅನೇಕ ಚಿಕಿತ್ಸೆಗಳಿವೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ನಾಗರಾಜ್.ಜಿ.ಓ ಪ್ರಾಸ್ತವಿಕವಾಗಿ ಮಾತನಾಡಿ, ಸ್ಕಿಜೋಫ್ರೇನಿಯಾ ಎನ್ನುವುದನ್ನು ಕನ್ನಡದಲ್ಲಿ ಚಿತ್ತ ಚಂಚಲತೆ ಅಥವಾ ಚಿತ್ತ ವಿಕಲತೆ ಎಂದು ಕರೆಯುತ್ತೇವೆ. ಕಾಯಿಲೆ ಇರುವ ವ್ಯಕ್ತಿಗೆ ಕಾಯಿಲೆಯ ಬಗ್ಗೆ ಅರಿವು ಇರುವುದಿಲ್ಲ, ಭ್ರಮೆ ಮತ್ತು ಭ್ರಾಂತಿಗಳು ಇರುತ್ತವೆ. ಯಾರಿಗೂ ಕಾಣದ ವಸ್ತುಗಳು ದೃಶ್ಯವನ್ನು ಕಾಣುವುದು, ಯಾರಿಗೂ ಕೇಳಿಸದ ಧ್ವನಿಗಳು ಕೇಳುವುದು, ಅನುಮಾನ ಅಥವಾ ಯತ್ತೇಚ್ಚವಾಗಿ ಸಂಶಯಪಡುವುದು, ವಿಚಿತ್ರವಾಗಿ ವರ್ತಿಸುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಈ ರೀತಿಯ ಕಾಯಿಲೆ ಇರುವವರನ್ನು ಪ್ರೀತಿಯಿಂದ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್.ಡಿ.ಎಂ, ತಾಲೂಕು ಆರೋಗ್ಯ ಅಧಿಕಾರಿ ಡಾ.ಗಿರೀಶ್.ಬಿ.ವಿ, ಕಬೀರಾನಂದ ಡಿಪಿಇಡಿ ಕಾಲೇಜಿನ ಪ್ರಾಂಶುಪಾಲ ನಿರಂಜನ ಮೂರ್ತಿ.ಸಿ.ಎಲ್, ಬಿ.ಇಡಿ ಪ್ರಾಂಶುಪಾಲ ಗಿರೀಶ್.ಟಿ, ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ವಿಶಾಲ.ಎಸ್ ಭಾಗವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಚಿಕಿತ್ಸಕ ಮನೊವೈದ್ಯ ಶ್ರೀಧರ.ಟಿ, ಸಾಮಾಜಿಕ ಮಾನಸಿಕ ಕಾರ್ಯಕರ್ತೆ ಸುನೀತಾ.ಎನ್, ಶೂಷ್ರಷಕಿ ರಶ್ಮಿ.ಕೆ.ಎಂ, ರೂಪ.ಆರ್,ಅರುಣ ಕೀರ್ತಿ, ಶಿವರಾಜ್ .ಟಿ, ಮಂಜುನಾಥ.ಟಿ ಮತ್ತು ಮಂಜುನಾಥ್.ಎಂ.ಓ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments