ಚಳ್ಳಕೆರೆ ಜನಧ್ವನಿ ವಾರ್ತೆ ಜೂ.5 ವಿಶ್ವ ಪರಿಸರ ದಿನ ಎಂದರೆ ಅದುಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ತಾಪಂ ಇಒ ಲಕ್ಷ್ಮಣ್ ಹೇಳಿದರು.
ನಗರದ ತಾಲೂಕುಪಂಚಾಯತ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಬೀಸಿಲಿನ ತಾಪಮಾನ ಹೆಚ್ಚಿರುವತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಬೆಳೆಸಬೇಕು. ಬಿಸಿಲಿನ ತಾಪಮಾನದಿಂದ ಮುಕ್ತಿ ಕಾಣಬೇಕುಎಂದರೆಗಿಡ-ಮರಗಳನ್ನು ಬೆಳೆಸಬೇಕು ಗಿಡಗಳನ್ನು ನಡುವಾಗಿ ಅವುಗಳ ಬೆಳೆಯಲು ಗಿಡದಿಂದಗಿಡಕ್ಕೆಅಂತರಕಾಯ್ಕಕೊಂಡು ನಡಬೇಕು ಪರಿಸರ ದಿನಾಚಣೆಗೆ ಸೀಮತವಾಗದೆ ಅವುಗಳಿಗೆ ದಿನಲೂ ನೀರುಗೊಬ್ಬರ ನೀಡಿ ಪಾಲನೆ ಫೋಷಣೆ ಮಾಡಬೇಕು. ಪ್ರತಿ ಸರಕಾರಿಕಚೇರಿ, ಸಾರ್ವಜಿನಿಕ ಖಾಲಿ ಜಾಗ, ರಸ್ತೆಗಳ ಬದಿ ನೆಟ್ಟಿರುವಗಿಡಗಳ ರಕ್ಷಣೆ ಕೇವಲ ಇಲಾಖೆಯ ಹೊಣೆಯಾಗಬಾರದು ಸಾರ್ವಜನಿಕರ ಕಾಳಜಿ ಇದ್ದರೆ ಮಾತ್ರ ಗಿಡ ಮರಗಳು ಬೆಳೆಯಲು ಸಾಧ್ಯ ಎಂದು ತಿಳಿದರು.
ನರೇಗಾ ಸಹಾಯಕ ನಿರ್ದೇಶಕ ಸಂತೋಷ್, ಸಹಾಯಕ ಲೆಕ್ಕಾಧಿಕಾರಿ ಕೆಂಚಪ್ಪ ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.
ನಗರದ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಎನ್ ಎಸ್ ಎಸ್ ಘಟಕದವತಿಯಿಂದ ಕಾಲೇಜ್ ವಿದ್ಯಾರ್ಥಿಗಳಿಂದ 350 ಸಸಿ ನಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎನ್ ಎಸ್ ಎಸ್ ಘಟಕಾಧಿಕಾರಿ ಬಿ.ಶಾಂತಕುಮಾರಿ,ಉಪನ್ಯಾಸಕರಾದ ಪುಟ್ಟರಂಗಪ್ಪ, ಪುಷ್ಪಲತ, ಹಬೀವುಲ್ಲಾ, ಹೀನಾಕೌಸರ್,ಜಾನಕಮ್ಮ, ರೇಖಾ, ಶ್ರೀನಿವಾಸ್, ರಾಜಶೇಖರಪ್ಪ,ಮಹಂತೇಶ್, ಅನುಷಾ, ಪಲ್ಲವಿ, ಇತರರಿದ್ದರು.
0 Comments