ಚಳ್ಳಕೆರೆ ಜನಧ್ವನಿ ವಾರ್ಯೆ ಮೇ20 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪರಶುರಾಂಪುರ ನಾಡಕಚೇರಿ ಮುಂದೆ ಅಖಂಡ ಕರ್ನಾಟಕ. ರಾಜ್ಯ ರೈತ ಸಂಘ ಪ್ರತಿಭಟನೆ ಮಾಡಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಸರಕಾರ ಬರಗಾಲ ಎಂದು ಘೋಷಣೆ ಮಾಡಿ ಬೆಳೆ ಪರಿಹಾರ.ಬೆಳೆವಿಮೆ ಸರ್ಕಾರ ಪ್ರೋತ್ಸಾಹ ಧನ ಅಥವಾ ಸಹಾಯ
ಧನವನ್ನು ರೈತರ, ಜನರ ಜೀವನೋಪಾಯಕ್ಕೆ
ನೀಡುತ್ತದೆ. ಹೀಗಾಗಿ ಬರ ಪರಿಹಾರ ಹಣ ಸೇರಿ
ಸರ್ಕಾರದ ಯಾವುದೇ ಪ್ರೋತ್ಸಾಹ ಧನ,
ಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ)
ಸಂದಾಯ ಮಾಡುವ ಹಣವನ್ನು ಬ್ಯಾಂಕ್ ಸಾಲದ
ಖಾತೆಗೆ ಜಮೆ ಮಾಡಬಾರದು ಎಂದು ಈಗಾಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ಮಾತ್ರ ಇವರ ಮಾತಿಗೆ ಕವಡೆಕಾಸು ಬೆಲೆ ಕೊಡದೆ ರೈತರ ಖಾತೆಗಳಲ್ಲಿ ಹಣವನ್ನು ಮುಟ್ಟುಗೋಲು ಹಾಕಿ ಬ್ಯಾಕ್ ಖಾತೆಯನ್ನು ಲಾಕ್ ಮಾಡಲಾಗಿದೆ ಕೂಡಲೆ ರೈತರ ಬ್ಯಾಕ್ ಖಾತೆ ಓಪನ್ ಮಾಡಬೇಕು ಬ್ಯಾಂಕ್ ಸಾಲಕ್ಕೆ ಜಮ ಮಾಡಿಕೊಳ್ಳದಂತೆ ಸೂಚನೆ ನೀಡಬೇಕು. ಇನ್ನು ಸಾಕಷ್ಟು ರೈತರು ಬೆಳೆ ವಿಮೆ.ಬೆಳೆ ಪರಿಹಾರ ಬಾರದ ರೈತರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ ಬೆಳೆ ವಿಮೆ ಬೆಳೆ ಪರಿಹಾರ ಬಾರದ ರೈತರ ಖಾತೆಗೆ ಹಣ ಜಮೆ ಮಾಡಬೇಕು.ಗ್ರಾಮ ಲೆಕ್ಕ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಬಾರದೆ ನಾಡ ಕಚೇರಿಯಲ್ಲಿರುತ್ತಾರೆ ದಿನಕ್ಕೆ ಎರಡು ಗಂಟೆಯಾದರೂ ಹಳ್ಳಿಯಲ್ಲಿರ ಬೇಕು. ರೈತರ ದಾಖಲೆ ಸಂಗ್ರಹ ಮಾಡಿರು ನಾಡ ಕಚೇರಿ ಶಿಥಿಲವಾಗಿದ್ದು ಸೋರುತ್ತಿದೆ ಸೋರುವುದನ್ನು ತಡೆಯಲು ತಾಡಪಾಲ್ ಹಾಕಲಾಗಿದೆ ಕೂಡಲೆ ನೂತನಕಚೇರಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ರೇಹಾನ್ ಪಾಷ ಮನವಿ ಸ್ವೀಕರಿಸಿ ಮಾತನಾಡಿ ನಾಳೆಯಿಂದಲೇ ಗ್ರಾಮಳಲ್ಲಿ ಕರ್ತವ್ಯ ನಿರ್ವಹಿಸುವಂತೆ ನೋಟಿಸ್ ಜಾರಿಮಾಡಲಾಗುವುದು. ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸಿ ಬೆಳೆ ಪರಿಹಾರ ಬೆಳೆವಿಮೆ.ಸಾಮಾಜಿಕ ಭದ್ರತಾಪಿಂಚಿಣಿ ಹಣವನ್ನು ರೈತರ ಖಾತೆಗೆ ಜಮ ಮಾಡಿಕೊಳ್ಳದಂತೆ ಸೂಚನೆ ನೀಡಿದರು ಬೆಳೆ ವಿಮೆ ಬೆಳೆ ಪರಿಹಾರ ಬಾರದ ರೈತರ ಮಾಹಿತಿಯನ್ನು ಸಂಬಂದ ಪಟ್ಟ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಅದ್ಯಕ್ಷ ಚಿಕ್ಕಣ್ಣ.ಚೌಳೂರು
ಪ್ರಕಾಶ್.ಜಂಪಣ್ಣ.ಹನುಮಂತರಾಯ.ವೆಂಕರಮಣ್ಣಪ್ಪ.ಖಾದರ್ ಬಾಷ.ನಾಗೇಂದ್ರಪ್ಪ.ನವೀನ್ ಗೌಡ.ತಿಮ್ಮಣ್ಣ.ಪರಮೇಶ್ವರಪ್ಪ ಇತರರು ಉಪಸ್ಥಿತರಿದ್ದರು.
0 Comments