ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31.ವಿವಿಧಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ತಾಜ್ಯ ರೈತರ ಸಂಘದವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡಿಸಿ ಮನವಿ ಸಲ್ಲಿಸಿದರು.
ಬರಗಾಲದಿ೦ದ ಬೆಳೆ ನಷ್ಟ ಸಮೀಕ್ಷೆಯಲ್ಲಿ ಹಾಗೂ ಫಲಹಾರ ಮೊತ್ತ ವಿತರಣೆಯಲ್ಲೂ ಲೋಪದೋಷಗಳಾಗಿದ್ದು, ಅನೇಕ ಪಂಚಾಯ್ತಿಗಳ ವ್ಯಾಪ್ತಿಗಳನ್ನು ಬೆಳೆ ವಿಮೆ ರೈತರ ಕೈತಪ್ಪಿ ಹೋಗಿದ್ದು ಈವರೆವಿಗೂ ಬೆಳೆ ವಿಮೆ ವಿತರಣೆಯಾಗಿಲ್ಲ ಇದಕ್ಕೆಲ್ಲಾ ಕಾರಣ ಸಂಬಂಧ ಪಟ್ಟ ಕೃಷಿ ಕಂದಾಯವಿಮಾ ಅಧಿಕಾರಿಗಳೇ ನೇರ ಹೊಣೆಯಾಗಿದ್ದು ಈ ಬಗ್ಗೆ ತಕ್ಷಣವೇ ಪರಿಶೀಸಿ ಜಿಲ್ಲೆಯ ಎಲ್ಲಾ ರೈತಲಿಗೂ ಸಮಾನ ಬೆಳೆ ನಷ್ಟ ವಿತರಿಸಬೇಕು ಬೆಳೆ ನಷ್ಟ ಪರಿಹಾರವನ್ನು ಮರುಪರಿಸುವಂತೆ ಒತ್ತಾಯಿಸಿದ್ದಾರೆ.
2024-25 ರ ಬೆಳೆ ವಿಮೆಗೆ ರೈತರಿಗೆ ಅನುಕೂಲವಾಗುವಂತೆ ಈ ಕೆಳಕಂಡ ಮಾನದಂಡವನ್ನು ಅನುಸರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದೇವೆ.
ರೈತರ ಬೆಳೆ ಏಮೆ ಹಕ್ಕೊತ್ತಾಯಗಳು :
ಬೆಳೆ ವಿಮೆಯನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ನೀಡಬೇಕು.
ರೈತರು ಬೆಳೆ ಬಿಮೆ ಕಂತು ಪಾವತಿಸಿದ ಮೇಲೆ ಎಲ್.ಐ.ಸಿ. ಕಂಪನಿ ಬಾಂಡ್ ನೀಡಿದಂತೆಬೆಳೆ ವಿಮೆ ಬಾಂಡ್ ನೀಡಬೇಕು.
ಬೆಳೆ ವಿಮೆ ನಷ್ಟದ ಪರಿಹಾರಕ್ಕೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ನಷ್ಟವನ್ನು ಪಲಿಗಣಿಸಿ ಪರಿಹಾರ ನೀಡಲಾಗುತ್ತಿದ್ದು ಇದನ್ನು ಪ್ರತಿ ರೈತನ ಸರ್ವೆ ನಂಬರ್ ಹೊಲದಲ್ಲಿ ಆಗಿರುವ ಬೆಳೆ ನಷ್ಟವನ್ನು ಪಲಶೀಅಸಿ ನಷ್ಟಕ್ಕೆ ಪರಿಗಣಿಸಬೇಕು.
ರೈತರ ಹೊಲಗಳಿಗೆ ಮಳೆ ಬರುವುದು ಪಂಚಾಯ್ತಿ ವ್ಯಾಪ್ತಿಯ ಲೆಕ್ಕಕ್ಕೆ ಮಳೆ ಬರುವುದಿಲ್ಲ ರೈತರ ಬದು–ಬದುವಿನ ಅಂತರದಲ್ಲಿ ಮಳೆ ಬರುವುದಿಲ್ಲ ಆದ್ದರಿಂದ ಸರ್ವೆ ನಂಬರ್ ಬೆಳೆ ನಷ್ಟಕ್ಕೆ ಪರಿಗಣಿಸಬೇಕು.
ಬೆಳೆ ನಷ್ಟ ನೀಡುವಾಗ 7 ವರ್ಷದ ಬೆಳೆ ಸಮೀಕ್ಷೆ ಮಾನದಂಡ ತೆಗೆದು ಕೊಂಡು ಬೆಳೆ ವಿಮೆನೀಡುವುದು ಅವೈಜ್ಞಾನಿಕ ಪ್ರತಿ ವರ್ಷದ ಬೆಳೆ ನಷ್ಟ ಪರಿಗಣಿಸಿ ವಿಮೆ ನೀಡಬೇಕು ಯಾವವರ್ಷ ಬೆಳೆ ನಷ್ಟವಾಗಿದೆ ಅದೇ ವರ್ಷದ ನಷ್ಟ ಪಲಗಣಿಸಿ ವಿಮೆ ಕೊಡಬೇಕು.
ರೈತರ ಬೆಳೆ ನಷ್ಟ ಸಮೀಕ್ಷೆಗೆ ಸರ್ಕಾರ ಕಾಲ ನಿಗದಿಯನ್ನು ಆಯಾ-ಯಾ ತಾಲ್ಲೂಕು ಬೆಳೆಹಾಕುವ ಕೇಳುವ ಸಮಯವನ್ನು ತೆಗೆದು ಕೊಳ್ಳಬೇಕು ಇಂತಹ ತಿಂಗಳಲ್ಲಿಯೇ ಬೆಳೆ ಕಟಾವುಮಾಡಬೇಕೆಂದು ಕಂಪನಿಗಳು ತಾಕೀತು ಮಾಡಬಾರದೆಂದು ಆಯಾ-ಯಾ ಕಾಲಕ್ಕೆ ತಕ್ಕಂತೆಬೆಳೆ ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರ ವಿತಲಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments