ಚಳ್ಳಕೆರೆ ಜನಧ್ವನಿ ವಾರ್ತೆ ಮೇ 12. ಜಮೀನಿನಲ್ಲಿ ಕೆಲಸ ಮಾಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ರೈತರ ಮೃತ ಪಟ್ಟ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ತಿಮ್ಮಣ್ಣ (28) ವಿದ್ಯುತ್ ಅವಘಟಕ್ಕೆ ತುತ್ತಾಗಿ ಜಮೀನಲ್ಲೇ ಮೃತ ಪಟ್ಟಿದ್ದಾನೆ.
ಜಮೀನಿನಲ್ಲಿರುವ ಗಿಡಗೆಂಟೆಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರ ಬರುತ್ತದೆ ಎಂಬ ಉದ್ದೇಶದಿಂದ ಜಮೀನಲ್ಲಿ ನೇತಾಡುವ ವೈರ್ ಗಳನ್ನು ತೆರವುಗೊಳಿಸುವ ಆಕಸ್ಮಿಕ ವಿದ್ಯತ್ ಸ್ಪರ್ಶದಿಂದ ರೈತ ಮೃತಪಟ್ಟಿದ್ದಾನೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಲಾಗಿದೆ.
ಬೆಸ್ಕಂ ವಿರುದ್ದ ಅಕ್ರೋಶ
ರೈತರ ಜಮೀನಿಲ್ಲಿ ಹಾಗೂ ಮನೆಗಳ ಮೇಲೆ ವಿದ್ಯುತ್ ತಂತಿಗಳು ನೇತಾಡುವ ಬಗ್ಗೆ ಬೆಸ್ಕಾಂ ಸಿಬ್ಬಂದಿಗಳಿಗೆ ಅನೇಕ ಬಾರಿ ಹೇಳಿದರೂ ಸಹ ನೇತಾಡುವ ವಿದ್ಯುತ್ ತಂತಿಗಳ ಬಗ್ಗೆ ಬೆಸ್ಕಾಂ ಇಲಾಖೆ ನಿರ್ಲಕ್ಷವಹಿಸುತ್ತದೆ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಇಬ್ಬರು ಬೆಸ್ಕಾಂ ಲೈನ್ ಮ್ಯಾನ್ ಇದ್ದರೂ ಎಂದೂ ಇಲಾಖೆಯ ಸಮವಸ್ತ್ರ ಧರಿಸುವುದಿಲ್ಲ ಕಾಲೇಜ್ ವಿದ್ಯಾರ್ಥಿಗಳಂತೆ ವರ್ತಿಸುತ್ತಾರೆ.
ಗ್ರಾಮಗಳಲ್ಲಿ ನೇತಾಡುವ ವಿದ್ಯುತ್ ತಂತಿಗಳ ಸರಿಪಡಿಸಿದ್ದರೆ ರೈತರ ಮಸ್ಯೆಗಳಿಗೆ ಸ್ಪಂಧಿಸಿ ಕರ್ತವ್ಯ ನಿರ್ವಹಿಸಿದ್ದರೆ ಇಂದು ತಿಮ್ಮಣ್ಣ ಸಾವು ಸಂಭವಿಸುತ್ತಿರಲಿಲ್ಲ ಎಂದು ಗ್ರಾಮಸ್ಥರೊಬ್ಬರು ಜನಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈಗಲಾದರೂ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ತಾಲೂಕಿನಾದ್ಯಂತ ರೈತರ ಜಮೀನು, ಗ್ರಾಮಗಳಲ್ಲಿ ನೇತಾಡುವ ವಿದ್ಯುತ್ ವೈರ್ ಗಳನ್ನು ದುರಸ್ಥಿ ಪಡಿಸುವುದು ಹಾಗೂ ರೈತರ ಜಮೀನಿನಲ್ಲಿ ವಿದ್ಯುತ್ ಕಂಬದ ಕೊರತೆಯಿಂದ ನೆಲಾದ ಮೇಲೆ ಎಳೆದುಕೊಂಡು ಹೋಗಿದ್ದರೆ ಅಂತಹ ರೈತರಿಗೆ ತಿಳುವಳಿಗೆ ಹೇಳುವ ಮೂಲಕ ವಿದ್ಯುತ್ ಕಂಬಳ ವ್ಯವಸ್ಥೆ ಮಾಡಿ ಇಂತಹ ವಿದ್ಯುತ್ ಅವಘಡಗಳಿಂದ ಹಾಗೂ ಸಾವು ನೋವುಗಳ ಬಗ್ಗೆ ಇಲಾಖೆ ಮುಂದಾಗ ಬೇಕಿದೆ.
0 Comments