ಮೃತ ಯುವಕ ಭರತ್ ಕುಮಾರ್
ಚಳ್ಳಕೆರೆ ಜನಧ್ವನಿ ವಾರ್ತೆ ನ.5 ವಿದ್ಯುತ್ ಅವಘಟಕ್ಕೆ ಯುವಕನೋರ್ವ ಬಲಿಯಾದ ಘಟನೆ ನಗರದ ಸೋಮಗುದ್ದು ರಸ್ತೆಯಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿರುವ ಮಾಜಿ ನಗರಸಭೆ ಸದಸ್ಯ ರವಿಕುಮಾರ್ ಹೋಟೆಲ್ ನಲ್ಲಿ ಈ ಘಟನೆ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ನಡೆದಿದ್ದು ವಿದ್ಯುತ್ ಅವಘಟಕ್ಕೆ ಸಿಲುಕಿ ಬಲಿಯಾದ ಯುವಕ ಭರತ್ ಕುಮಾರ್(24) ಮೃತ ಯುವಕ ಎಂದು ಗುರುತಿಸಲಾಗಿದೆ.
ಹೋಟಲ್ ನ್ನು ಸುಮಾರು 3 ತಿಂಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು ಭಾನುವಾರ ಹೋಟೆಲ್ ಸ್ವಚ್ಚತೆಗಾಗಿ ಭರತ್ ಕುಮಾರ್ ಹೋಟೆಲ್ ಸ್ವಚ್ಚತೆಗೆ ಮುಂದಾಗಿದ್ದಾಗೆ. ನೀರು ಹಾಕಿ ತೊಳೆದು ನಂತರ ವಿದ್ಯುತ್ ಪ್ಲೆಗ್ ತೆಗೆಯಲು ಹೋದಾಗ ಕಬ್ಬಿಣದ ಮಳೆಗಳು ಸಮೇತ ಬೋರ್ಡ್ ಕಿತ್ತು ಬಂದು ಕೈ ಬೆರಳುಗಳಿಗೆ ವಿದ್ಯುತ್ ಸ್ಮರ್ಶದಿಂದಾಗಿ ನೆಲದಲ್ಲಿ ನೀರು ಇದ್ದ ಕಾರಣ ವಿದ್ಯುತ್ ಅವಘಡಕ್ಕೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಸಿಯು ನೀಗಿಸುವ ಯುವಕ.
ಮೃತನ ಸುದ್ದಿ ತಿಳಿದ ತಕ್ಷಣ ನಗರದ ವಿವಿಧ ಮೂಲೆಗಳಿಂದ ಕಾರ್ಮಿಕರು, ಸ್ನೇಹಿತರು, ಸಂಬಂಧಿಕರು ಜಾತ್ರೋಪಾದಿಯಲ್ಲಿ ಜನಸೇರಿ ಮೃತನ ಅಂತಿ ದರ್ಶನ ಪಡೆಯಲು ಸಾರ್ವಜನಿಕ ಆಸ್ಪತ್ರೆಯ ಶವಗಾರ ಹಾಗೂ ಆಸ್ಪತ್ರೆ ಆವರಣದಲ್ಲಿ ಜನ ಸೇರಿದ್ದು ಜವರಾಯಜನಿಗೆ ಹಿಡಿ ಶಾಪ ಕುತ್ತಿದ್ದು ದೃಶ್ಯ ಕಂಡು ಬಂದು.
ಮೃತ ಬಾಲಕನ ತಂದೆ ಶ್ರೀನಿವಾಸ್ ಗೆ ಒಂದು ಹೆಣ್ಣು, ಒಂದು ಗಂಡು ಅದರಲ್ಲಿ ಭತರ್ ಕುಮಾರ್ ದೊಡ್ಡವನು 21 ವರ್ಷದ ಹೆಣ್ಣುಮಗಳಿದ್ದಾಳೆ ತಂದೆ ಶ್ರೀನಿವಾಸ್ ಮೃತನಾಡದ ಮೇಲೆ ಶ್ರೀನಿವಾಸ್ ತಮ್ಮ ರವಿಕುಮಾರ್ ಹೆಗಲಿಗೆ ಇಬ್ಬರ ಮಕ್ಕಳ ಜವಾಬ್ದಾರ್ ಬೀಳುತ್ತದೆ ರವಿಕುಮಾರ್ ಇಬ್ಬರು ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಪಾಲನೆ ಪೋಷಣೆ ಮಾಡುತ್ತಾನೆ ಜತೆಗೆ ಹೋಟೆಲ್ ನಡೆಸುವ ಜವಾಬ್ದಾರ್ ಭರತ್ ಕುಮಾರನಿಗೆ ನೀಡುತ್ತಾರ.
ಹೋಟೆಲ್ ಕೂಲಿ ಕಾರ್ಮಿಕರು ಅಥವಾ ಯಾರಾದರೂ ಹೊಟ್ಟೆ ಹಸಿವಿದೆ ಹಣವಿಲ್ಲ ಎಂದರೆ ಸಾಕು ಹೊಟ್ಟೆ ತುಂಬಿ ತಿಂಡಿ ನೀಡಿ ಕಳಿಸುತ್ತಿದ್ದರು ಹಣ ಇರಲಿಬಿಡಲಿ ಗ್ರಾಹಕರೊಂದಿಗೆ ಸೌಜನ್ಯದಿಂದ ಸ್ಪಂಧಿಸಿ ಜನರನ್ನು ಸಂಪಾದನೆ ಮಾಡಿದ್ದರು ಇಂದು ಬೆಳಗ್ಗೆ ಹೋಟೆಲ್ ನಲ್ಲಿ ಜವರಾಯ ಅಡಗಿ ಕುಳಿತು ವಿದ್ಯುತ್ ಪ್ಲೆಗ್ ಕೀಳಲು ಹೋದಾಗಿ ವಿದ್ಯುತ್ ಶಾಖ್ ನಿಂದ ಸ್ಥಳದಲ್ಲೇ ಭರತ್ ಕುಮಾರ್ ಮೃತಪಟ್ಟಿದ್ದಕ್ಕೆ ಗೆರೆಯರು, ಕುಟುಂಬಸ್ಥರು ಹಾಗೂ ಹೋಟೆಲ್ ಗ್ರಾಹಕರು ಕಣ್ಣೀರು ಹರಿಸಿದ ದೃಶ್ಯಗಳು ಕಂದು ಬಂದವು.
0 Comments