ವಿದ್ಯುತ್ ಅವಘಡಕ್ಕೆ ಯುವನೋರ್ವ ಬಲಿ ಚಳ್ಳಕೆರೆ ನಗರದ ಘಟನೆ.

by | 05/11/23 | Uncategorized

ಮೃತ ಯುವಕ ಭರತ್ ಕುಮಾರ್
ಚಳ್ಳಕೆರೆ ಜನಧ್ವನಿ ವಾರ್ತೆ ನ.5 ವಿದ್ಯುತ್ ಅವಘಟಕ್ಕೆ ಯುವಕನೋರ್ವ ಬಲಿಯಾದ ಘಟನೆ ನಗರದ ಸೋಮಗುದ್ದು ರಸ್ತೆಯಲ್ಲಿ ನಡೆದಿದೆ.


ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿರುವ ಮಾಜಿ ನಗರಸಭೆ ಸದಸ್ಯ ರವಿಕುಮಾರ್ ಹೋಟೆಲ್ ನಲ್ಲಿ ಈ ಘಟನೆ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ನಡೆದಿದ್ದು ವಿದ್ಯುತ್ ಅವಘಟಕ್ಕೆ ಸಿಲುಕಿ ಬಲಿಯಾದ ಯುವಕ ಭರತ್ ಕುಮಾರ್(24) ಮೃತ ಯುವಕ ಎಂದು ಗುರುತಿಸಲಾಗಿದೆ.
ಹೋಟಲ್ ನ್ನು ಸುಮಾರು 3 ತಿಂಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು ಭಾನುವಾರ ಹೋಟೆಲ್ ಸ್ವಚ್ಚತೆಗಾಗಿ ಭರತ್ ಕುಮಾರ್ ಹೋಟೆಲ್ ಸ್ವಚ್ಚತೆಗೆ ಮುಂದಾಗಿದ್ದಾಗೆ. ನೀರು ಹಾಕಿ ತೊಳೆದು ನಂತರ ವಿದ್ಯುತ್ ಪ್ಲೆಗ್ ತೆಗೆಯಲು ಹೋದಾಗ ಕಬ್ಬಿಣದ ಮಳೆಗಳು ಸಮೇತ ಬೋರ್ಡ್ ಕಿತ್ತು ಬಂದು ಕೈ ಬೆರಳುಗಳಿಗೆ ವಿದ್ಯುತ್ ಸ್ಮರ್ಶದಿಂದಾಗಿ ನೆಲದಲ್ಲಿ ನೀರು ಇದ್ದ ಕಾರಣ ವಿದ್ಯುತ್ ಅವಘಡಕ್ಕೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.


ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಸಿಯು ನೀಗಿಸುವ ಯುವಕ.
ಮೃತನ ಸುದ್ದಿ ತಿಳಿದ ತಕ್ಷಣ ನಗರದ ವಿವಿಧ ಮೂಲೆಗಳಿಂದ ಕಾರ್ಮಿಕರು, ಸ್ನೇಹಿತರು, ಸಂಬಂಧಿಕರು ಜಾತ್ರೋಪಾದಿಯಲ್ಲಿ ಜನಸೇರಿ ಮೃತನ ಅಂತಿ ದರ್ಶನ ಪಡೆಯಲು ಸಾರ್ವಜನಿಕ ಆಸ್ಪತ್ರೆಯ ಶವಗಾರ ಹಾಗೂ ಆಸ್ಪತ್ರೆ ಆವರಣದಲ್ಲಿ ಜನ ಸೇರಿದ್ದು ಜವರಾಯಜನಿಗೆ ಹಿಡಿ ಶಾಪ ಕುತ್ತಿದ್ದು ದೃಶ್ಯ ಕಂಡು ಬಂದು.
ಮೃತ ಬಾಲಕನ ತಂದೆ ಶ್ರೀನಿವಾಸ್ ಗೆ ಒಂದು ಹೆಣ್ಣು, ಒಂದು ಗಂಡು ಅದರಲ್ಲಿ ಭತರ್ ಕುಮಾರ್ ದೊಡ್ಡವನು 21 ವರ್ಷದ ಹೆಣ್ಣುಮಗಳಿದ್ದಾಳೆ ತಂದೆ ಶ್ರೀನಿವಾಸ್ ಮೃತನಾಡದ ಮೇಲೆ ಶ್ರೀನಿವಾಸ್ ತಮ್ಮ ರವಿಕುಮಾರ್ ಹೆಗಲಿಗೆ ಇಬ್ಬರ ಮಕ್ಕಳ ಜವಾಬ್ದಾರ್ ಬೀಳುತ್ತದೆ ರವಿಕುಮಾರ್ ಇಬ್ಬರು ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಪಾಲನೆ ಪೋಷಣೆ ಮಾಡುತ್ತಾನೆ ಜತೆಗೆ ಹೋಟೆಲ್ ನಡೆಸುವ ಜವಾಬ್ದಾರ್ ಭರತ್ ಕುಮಾರನಿಗೆ ನೀಡುತ್ತಾರ.
ಹೋಟೆಲ್ ಕೂಲಿ ಕಾರ್ಮಿಕರು ಅಥವಾ ಯಾರಾದರೂ ಹೊಟ್ಟೆ ಹಸಿವಿದೆ ಹಣವಿಲ್ಲ ಎಂದರೆ ಸಾಕು ಹೊಟ್ಟೆ ತುಂಬಿ ತಿಂಡಿ ನೀಡಿ ಕಳಿಸುತ್ತಿದ್ದರು ಹಣ ಇರಲಿಬಿಡಲಿ ಗ್ರಾಹಕರೊಂದಿಗೆ ಸೌಜನ್ಯದಿಂದ ಸ್ಪಂಧಿಸಿ ಜನರನ್ನು ಸಂಪಾದನೆ ಮಾಡಿದ್ದರು ಇಂದು ಬೆಳಗ್ಗೆ ಹೋಟೆಲ್ ನಲ್ಲಿ ಜವರಾಯ ಅಡಗಿ ಕುಳಿತು ವಿದ್ಯುತ್ ಪ್ಲೆಗ್ ಕೀಳಲು ಹೋದಾಗಿ ವಿದ್ಯುತ್ ಶಾಖ್ ನಿಂದ ಸ್ಥಳದಲ್ಲೇ ಭರತ್ ಕುಮಾರ್ ಮೃತಪಟ್ಟಿದ್ದಕ್ಕೆ ಗೆರೆಯರು, ಕುಟುಂಬಸ್ಥರು ಹಾಗೂ ಹೋಟೆಲ್ ಗ್ರಾಹಕರು ಕಣ್ಣೀರು ಹರಿಸಿದ ದೃಶ್ಯಗಳು ಕಂದು ಬಂದವು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page