ಚಳ್ಳಕೆರೆ ಮೇ23 ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳಲ್ಲಿತೊಡಗುತ್ತಿರುವುದು ಗಣನೀಯವಾಗಿ ಏರಿಕೆ ಕಂಡು ಬಂದಿರುವುದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಸಂಘ ಸಂಸ್ಥೆಗಳಿಂದ ಮಾತ್ರ ಎಂದು ಪ್ರೊಫೆಸರ್ ಬಿಎಸ್ ಮಂಜುನಾಥ್ ರವರು ಪ್ರಾಂಶು ಪಾಲರು ತಿಳಿಸಿದರು
ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ,
ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ, ಚಿತ್ರದುರ್ಗ ರೋವರ್ಸ್ ರೇಂಜರ್ಸ್ ವಿಭಾಗ ಎಚ್.ಪಿ. ಪಿ .ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ರೋವರ್ಸ್ ಮತ್ತು ರೇಂಜಸ್ ಪದಕ ತರಬೇತಿ ಮತ್ತು ನಿಪುಣ ಪರೀಕ್ಷೆಯ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಶಿಸ್ತು ಸಮಯ ಪಾಲನೆ ಬೆಳೆಸಿಕೊಳ್ಳುವಲ್ಲಿ ಇಂತಹ ಶಿಬಿರಗಳು ಅತ್ಯವಶ್ಯಕ ವಾಗಿವೆ ಎಂದು ತಿಳಿಸಿದರು.
ಜಿಲ್ಲಾ ನೋಡಲು ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಹೆಚ್ ತಿಪ್ಪೇಸ್ವಾಮಿಯವರು ಮಾತನಾಡುತ್ತಾ ನಿಪುನ್ ಪರೀಕ್ಷಾ ಶಿಬಿರವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ ದಿನಮಾನಗಳಲ್ಲಿ ರಾಜ್ಯಪಾಲರ ಪ್ರಮಾಣ ಪತ್ರವನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನ ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ರೇಂಜರ್ಸ್ ವಿಭಾಗದ ನಾಯಕಿಯಾದ ಡಾಕ್ಟರ್ ಲೀಲಾವತಿ ಸಹಪ್ರಾಧ್ಯಾಪಕರು ಡಾಕ್ಟರ್ ಗಂಗಾಧರ್ ಆರ್ ಸಹ ಪ್ರಧ್ಯಾಪಕರು ಪ್ರೊಫೆಸರ್ ಗಿರೀಶ್ ಪ್ರೊಫೆಸರ್ ಜಗನ್ನಾಥ್ ಸಹಾಯಕ ಪ್ರಾಧ್ಯಾಪಕರು ಹಾಗೂ ಜಿಲ್ಲಾ ಸಂಘಟಕರಾದ ಪಾಟೀಲ್ ಜಿಬಿ ಸಿ ಚಿತ್ರದುರ್ಗ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಸಂಘಟನಾದ ಪಾಟೀಲ್ ಜಿ ಬಿ ಸಿ ಇವರುನೆರವೇರಿಸಿದರು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು ಕಾರ್ಯಕ್ರಮದ ವಂದನಾರ್ಪಣೆ ಯನ್ನು ಜಗನ್ನಾಥ್ ಸಹಾಯಕ ಪ್ರಾಧ್ಯಾಪಕರು ಇವರು ನೆರವೇರಿಸಿದರು
ಒಂದು ತರಬೇತಿಯ ಸದುಪಯೋಗವನ್ನು ಪಡೆದು ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನ ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದru ಸಮಯವನ್ನು ಅಳವಡಿಸಿಕೊಂಡು
0 Comments