ಚಳ್ಳಕೆರೆ ಬನ.23
ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳಲ್ಲಿ ಅಪೌಷ್ಟಿಕತೆ ಬರದಂತೆ ಪೋಷಣೆ ಮಾಡುವ ಉದ್ದೇಶದಿಂದ ಪಂಚಾಯಿತಿಗೊಂದು ಶಿಶು ಪಾಲನ ಕೇಂದ್ರ ಕೂಸಿನ ಮನೆ ತೆರೆಯಲಾಗುತ್ತಿದೆ ಎಂದು ತಾಪಂ ಇಒ ಶಶಿಧರ್ ಹೇಳಿದರು.
ನಗರದ ಬಾಪೂಜಿ ಪಿಯು ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕೂಸಿನ ಮನೆಯಲ್ಲಿ ಚಿಕ್ಕ ಮಕ್ಕಳ ಆರೈಕೆ ಮಾಡಲು 10 ಜನರನ್ನು ಆಯ್ಕೆ ಮಾಡಿಕೊಂಡಿದ್ದು,ನ.23ರಿಂದ 29ರವರೆಗೆ ತರಬೇತಿ ನೀಡಲಾಗುತ್ತದೆ ಎಂದರು.
ರಕ್ತ ಹೀನತೆಯಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಅದ್ದರಿಂದ ಯಾವ ಆಹಾರ ಸೇವನೆ ಮಾಡಬೇಕು. ಯಾವುದು ತಿನ್ನಬಾರದು ಎಂದು ಮಕ್ಕಳು ತಿಳಿಯುವ ಮೂಲಕ ತಮ್ಮ ಕುಟುಂಬಗಳಿಗೆ ತಿಳಿಸಬೇಕು. ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿಯಿಂದ ಪ್ರೌಢಶಾಲೆಯವರೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಮತೋಲನ ಆಹಾರ ಸೇವನೆ ಮಾಡಬೇಕು.ಸೊಪ್ಪು,ತರಕಾರಿ ಹೆಚ್ಚು ತಿನ್ನಬೇಕು. ರಕ್ತ ಹೀನತೆ ಹೋಗಲಾಡಿಸಲು ಮೊಟ್ಟೆ ಸೇವಿಸಬೇಕು ಎಂದರು.
ಸಿಡಿಪಿಒ ಹರಿಪ್ರಸಾದ್ ಮಾತನಾಡಿ,ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಎಗ್ ರೈಸ್, ಪಾನಿಪೂರಿ, ಗೋಬಿ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೆ, ಮನೆಯಲ್ಲಿ ಸೊಪ್ಪು,ತರಕಾರಿ ಸೇವಿಸಿದಲ್ಲಿ ದೇಹ ಸದೃಢವಾಗುವುದರಿಂದ ಏಕಾಗ್ರತೆಯಿಂದ ಶಿಕ್ಷಣ ಪಡೆಯಲು ಸಹಕಾರಿಯಾಗುವುದು.ಇನ್ನೂ ಕಾಲೇಜಿಗೆ ಬರುವುದು ಶಿಕ್ಷಣ ಪಡೆಯಲು ದು ಬಿಟ್ಟು ಪ್ರೀತಿ-ಪ್ರೇಮದ ವಿಷಯಗಳ ಕಡೆ ಗಮನ ಕೊಡಬಾರದು ಎಂದರು.
ಬಾಲ್ಯ ವಿವಾಹ ತಪ್ಪಿಸಲು ವಿದ್ಯಾರ್ಥಿಗಳು ಇಂಥ ವಿಷಯಗಳು ನಿಮ್ಮ ಗಮನಕ್ಕೆ 112 ಇಲ್ಲವೇ 1098ಕ್ಕೆ ತಿಳಿಸಿದರೆ ಬಾಲ್ಯ ವಿವಾಹ ತಡೆಯಲಾಗುವುದು ಎಂದರು.
ಟಿಎಚ್ಒ ಡಾ.ಎನ್.ಕಾಶಿ ಮಾತನಾಡಿ, ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಮಾಡಲು ಸರಕಾರ ಯೋಜನೆ ರೂಪಿಸಿದ್ದು, ಮಕ್ಕಳು ದೈಹಿಕವಾಹಿ ಸದೃಢ ಮತ್ತು ರಕ್ತ ಪ್ರಮಾಣ ಹೆಚ್ಚಿಸಿಕೊಳ್ಳಲು ಪಾಲಕ್ ಸೊಪ್ಪು, ಬೆಲ್ಲ, ಶೇಂಗಾ, ರಾಗಿ ಮುದ್ದೆ, ಮೊಳಕೆ ಕಾಳು, ಕರಿಬೇವು ಸೇವಿಸಬೇಕು. 11ಗ್ರಾಂಗಿಂತ ರಕ್ತ ಕಡಿಮೆ ಇರಬಾರದು ಎಂದರು.
ಮೊಳಕಾಲ್ಮುರು ಸಿಡಿಪಿಒ ನವೀನ್ಕುಮಾರ್, ತಾಪಂ ಸಹಾಯಕ ನಿರ್ದೇಶಕ ಸಂಪತ್ಕುಮಾರ್, ಆರೋಗ್ಯ ಇಲಾಖೆಯ ಬಿ.ಎಸ್.ತಿಪ್ಪೇಸ್ವಾಮಿ, ಉಪನ್ಯಾಸಕ ಜಗದೀಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮಕ್ಕಳಿದ್ದರು.
![](https://janadhwani.in/wp-content/uploads/2023/11/IMG-20231123-WA0054.jpg)
0 Comments