ಹಿರಿಯೂರು :
ಇಂದಿನ ಜಗತ್ತಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವಿಫಲವಾದ ಉದ್ಯೋಗವಕಾಶಗಳಿದ್ದು, ಉತ್ತಮ ಕೌಶಲ್ಯದ ಮುಖಾಂತರ ನೀವುಗಳು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಪಡೆದುಕೊಳ್ಳಬಹುದಾಗಿದೆ, ಈ ನಿಟ್ಟಿನಲ್ಲಿ ನಮ್ಮ ಮೆಡಿಕಲ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸೇವಾ ಮನೋಭಾವವನ್ನು ರೂಡಿಸಿಕೊಳ್ಳಬೇಕು ಎಂಬುದಾಗಿ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ವಿ ಬಸವರಾಜ ಹೇಳಿದರು.
ನಗರದ ಜ್ಞಾನಭಾರತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ದಾದಿಯರ ವೃತ್ತಿ ಅತ್ಯಂತ ಗೌರವಾನ್ವಿತ ವೃತ್ತಿಯಾಗಿದ್ದು, ಈ ವೃತ್ತಿಗೆ ಹೋಗುವ ನೀವು ತಾಳ್ಮೆ ಸಂಯಮದಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜ ತಾಯಿಯ ನಂತರದ ಸ್ಥಾನವನ್ನು ದಾದಿಯರಿಗೆ ನೀಡುತ್ತಿದೆ ಅಂತಹ ಪವಿತ್ರ ವೃತ್ತಿಗೆ ನ್ಯಾಯ ಒದಗಿಸಲು ನಿಸ್ವಾರ್ಥ ಮನೋಭಾವ ಮುಖ್ಯ ಕರೋನಾದಂತಹ ಭೀಕರ ರೋಗ ಬಂದಂತಹ ಸಂದರ್ಭದಲ್ಲಿ ಸಂಬಂಧಗಳನ್ನು ಮನುಷ್ಯ ಮರೆತಿರುವಾಗ ಬಂಧುವಿನಂತೆ ರೋಗಿಗಳನ್ನು ಆರೈಕೆ ಮಾಡಿದವರು ದಾದಿಯರು ಎಂದರಲ್ಲದೆ,
ಮಹಾಯುದ್ಧಗಳು ಸಂಭವಿಸಿದಾಗ ಗಾಯಾಳು ಸೈನಿಕರನ್ನ ಶುಶ್ರೂಷೆ ಮಾಡಿದವರು ದಾದಿಯರು ಆದ್ದರಿಂದ ನಿಮ್ಮ ವೃತ್ತಿ ಸಮಾಜದ ಬಹುಮುಖ್ಯ ಭಾಗವಾಗಿದ್ದು, ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೇಳುವಂತೆ ಕಲ್ಲು ಸಕ್ಕರೆಯಾಗು ದೀನ ದುರ್ಬಲರಿಗೆ ಎನ್ನುವ ಮಾತು ದಾದಿಯರಿಗೆ ಅತ್ಯಂತ ಪ್ರಸ್ತುತವಾಗಿದೆ ಎಂಬುದಾಗಿ ಹೇಳಿದರು.
ನೊಂದವರ ಪಾಲಿನ ಆಶಾಕಿರಣ ನೀವಾಗಬೇಕು ನೀವುಗಳು ನಿಮ್ಮ ಸೇವೆಯನ್ನು ಹೆಸರು ಕೀರ್ತಿ ಸುದ್ದಿಗಾಗಿ ಮಾಡಬೇಡಿ ಸದ್ದಿಲ್ಲದೇ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಿ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದ ಸ್ತಂಭಗಳಾದ ನೀವುಗಳು ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ರೋಗಗ್ರಸ್ತ ಸಮಾಜವನ್ನು ಸ್ವಸ್ಥ ಆರೋಗ್ಯಯುಕ್ತ ಸಮಾಜವನ್ನಾಗಿಸುವ ಗುರಿಯನ್ನು ಇಟ್ಟುಕೊಳ್ಳಿ ಎಂಬುದಾಗಿ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಇಡಿ ಕಾಲೇಜಿನ ಪ್ರಾಚಾರ್ಯರಾದ ಎನ್.ಧನಂಜಯ್, ಹಿರಿಯ ಉಪನ್ಯಾಸಕರಾದ ಎಂ.ಬಸವರಾಜ್, ಪ್ಯಾರಾ ಮೆಡಿಕಲ್ ವಿಭಾಗದ ಮುಖ್ಯಸ್ಥರಾದ ಗಿರೀಶ್, ವ್ಯವಸ್ಥಾಪಕರಾದ ದೊರೇಶ್. ನಾಗರತ್ನ, ಮಹಮದ್, ಲೀಲಾ, ಉಮ್ರಾಜ್, ಅಂಬಿಕಾ, ರವಿಕುಮಾರ್, ನಾಗೇಶ್, ಆದಿತ್ಯ ಉಪಸ್ಥಿತರಿದ್ದರು.
ಆರಂಭದಲ್ಲಿ ಚಂದ್ರಕಲಾ ಪ್ರಾರ್ಥಿಸಿದರು, ವಿದ್ಯಾರ್ಥಿಗಳಾದ ಲಿಖಿತ,ಪ್ರಿಯ ಸ್ವಾಗತಿಸಿದರು ಮಂಜುನಾಥ್ ವರದರಾಜ್ ಕಾರ್ಯಕ್ರಮ ನಿರೂಪಿಸಿದರು, ಶಕುಂತಲಾ ಪ್ರಾರ್ಥಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments