ಚಳ್ಳಕೆರೆ ಜ.8 ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆ ಅಲಂಕರಿಸಿದರೆ ನಮ್ಮ ದೇಶ ಉನ್ನತ ಮಟ್ಟ ತಲುಪುತ್ತದೆ. ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಎಂದು ಶಾಸಕ ಟಿ.ರಘುಮೂರ್ತಿ ಕಿವಿ ಮಾತು ಹೇಳಿದರು.
ನಗರದ ಸೋಮಗುದ್ದು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವಕಾಲೇಜು, ಚಳ್ಳಕೆರೆ.
ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ಹಾಗೂ
ರೋವರ್ & ರೇಂಜರ್ ಘಟಕ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿರಬೇಕು. ಆಗ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತುಂಬ ಪರಿಶ್ರಮ ಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣ ಪಡೆಯಲು ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಇನ್ನಿತರ ಕಾರಣಗಳು ಅಡ್ಡಿ ಬರುತ್ತಿವೆ. ಸರ್ಕಾರ ಹಾಗೂ ವಿವಿಧ ಎನ್ ಜಿ ಒ ಸಂಸ್ಥೆಗಳು ಸ್ಪರ್ಧಾ ಪರೀಕ್ಷೆಗಳು ಆಯೋಜನೆ ಮಾಡಿ ಉತ್ತೀರ್ಣರಾದ ವಿದ್ಯರ್ಥಿಗಳಿಗೆ ಪ್ರತಿ ತಿಂಗಳು ವಿಸ್ಯಾರ್ಥಿವೇತನ. ಉನ್ನತ ವಿದ್ಯಾಭ್ಯಾಕ್ಕೆ ಉಚಿತ ವ್ಯವಸ್ಥೆ ಮಾಡುತ್ತಿದ್ದಾರೆ. ಸರಕಾರ ಹಾಗೂ ಖಾಸಗಿ ಸಂಘಸಂಸ್ಥೆಗಳ ಯೋಜನೆಗಳನ್ನು ಸದುಪತೋಗ ಪಡಿಸಿಕೊಂಡು ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತರುವಂತಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಕೂಟ.ಪ್ರಬಂಧ ಸ್ಪರ್ಧೆ. ಕ್ವಿಜ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಿಯು ಉಪನಿರ್ಧೇಶಕ ಪುಟ್ಟಯ್ಯ. ಪ್ರಾಚಾರ್ಯ ರವೀಶ್. ನಿವೃತ್ತ ಉಪನ್ಯಾಸಕ ಡಿ.ಮಲ್ಲಿಕಾರ್ಜುನ ಮಾತನಾಡಿದರು. ವಿದ್ಯಾರ್ಥಿನಿಯರಿಂದ ಕೋಲಾಟದ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಜಿಪಂಅಧ್ಯಕ್ಷೆ ಶಶಿಕಲಾಸುರೇಶ್. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ.ರಾಜ್ಯಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ. ಟಿ. ರುದ್ರಮುನಿ
. ಗುರುನಾಥಗುಪ್ತ
. ಜೋತಿ ಗುರುಸ್ವಾಮಿ. ಎಸ್. ಕೋಣಪ್ಪ. ಉಪನ್ಯಾಸಕರಾದ ಕೆ.ಎನ್. ವಸಂತಕುಮಾರ್.ಸಾಂಸ್ಕೃತಿಕ ಕಾರ್ಯದರ್ಶಿ : ನಾಗರಾಜ್ .
ಹೆಚ್.ಆರ್.ಜಜಉಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರು,
ಕ್ರೀಡಾ ಕಾರ್ಯದರ್ಶಿ :
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ: ಶಾಂತಕುಮಾರಿ
ರೋವರ್ & ರೇಂಜರ್ ಯೋಜನಾಧಿಕಾರಿ : ಕೆ.ಬಿ. ಚಂದ್ರಶೇಖರ್
.ಐ. ಲಲಿತಮ್ಮ ಇತರರಿದ್ದರು.
0 Comments