ಚಳ್ಳಕೆರೆ ಮೇ.16 ನಗರದಲ್ಲಿ ಸರಣಿ ಕಳ್ಳತನ
ನಗರದ ಜನತೆಯ ನಿದ್ದೆ ಕೆಡಿಸುವಂತೆ ಮಾಡಿದೆ. ಹೌದು ಇದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯಲ್ಲಿ ಮನೆಗಳ್ಳತನ ಪ್ರಕರಣ ಮಾಸುವ ಮುನ್ನವೇ ವಿಠಲನಗರದ ಗ್ರಾಮಲೆಕ್ಕಾಧಿಕಾರಿ ಹರೀಶ್ ಮನೆಗೆ ಗುರುವಾರ ಬೆಳಗಿನ ಜಾಬ 2 ಗಂಟೆ ಸುಮಾರಿನಲ್ಲಿ ಗೇಟ್ ಬೀಗ ಮುರಿದು ಒಳ ನುಗ್ಗಿದ್ದಾರೆ ಗೇಟ್ ಶಬ್ದವಾದ ತಕ್ಷಣ ಎಚ್ಚರಗೊಂಡು ಕೂಗಿದ ತಕ್ಷಣ ಕಳ್ಳರು ಓಡಿ ಹೋಗಿದ್ದಾರೆ ಅಕ್ಕಪಕ್ಕದವರ ಸಮಯ ಪ್ರಜ್ಞೆಯಿಂದ ಕಳ್ಳತನ ತಪ್ಪಿದಂತಾಗಿದೆ. ಇತ್ತೀಚೆಗೆ ನಗರದಲ್ಲಿ ಆಸ್ಪತ್ರೆ. ಬಸ್ ನಿಲ್ದಾಣ. ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ನಿಲ್ಲಿಸಿದ್ದ ಬೈಕ್ ಕಳ್ಳತನ.ಮೊಬೈಲ್ ಕಳ್ಳತನಗಳ ಹಾವಳಿ ಹೆಚ್ಚಾಗಿದ್ದು ನಾಗರೀಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ನಗರದ ನೆಹರು ವೃತ್ತ. ಪೋಲಿಸ್ ಠಾಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮರಗಳ ನಿರ್ವಹಣೆ ಇಲ್ಲದೆ ಸಿಸಿ ಕ್ಯಾಮರಗಳು ಕಣ್ಣು ಮುಚ್ಚಿಕೊಂಡಿರುವುದರಿಂದ ಕಳ್ಳತನ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಅಂತ ಕಳ್ಳರು ಕಳ್ಳತನ ಕೆಲಸವನ್ನ ಮುಂದುವರಿಸಿದ್ದಾರೆ.
ನಗರಸಭೆವತಿಂದ ನೆಹರು ವೃತ್ತ. ಸೇರಿದಂತೆ ವಿವಿಧ ಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು.. ಇದೆ ಸಿಸಿಟಿವಿಗಳಿಂದ ಸಾಕಷ್ಟು ಅಪರಾಧ ಪ್ರಕರಗಳು ತಡೆಗಟ್ಟಲು ಪೊಲೀಸರಿಗೆ ಅನುಕೂಲ ಆಗ್ತಾಯಿತ್ತು.. ಕಳ್ಳರನ್ನ ಕ್ಷಣಾರ್ಧದಲ್ಲೇ ಲಾಕ್ ಮಾಡಲಾಗುತ್ತಿತ್ತು.. ಆದ್ರೆ ಸಿಸಿ ಕ್ಯಾಮರಗಳ ನಿರ್ವಹಣೆ ಮಾಡದೆ ನಿರ್ಲಕ್ಷ್ಯಕ್ಕೆ ಒಳಗಾಗಿ ಲಕ್ಷಾಂತರ ರೂ. ಮೌಲ್ಯದ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿ ಸುಮಾರು ಹತ್ತು ವರ್ಷಗಳು ಕಳೆದರೂ ದುರಸ್ಥಿ ಮಾಡಿಸಲು ಮುಂದಾಗದೆ ಇರುವುದು ವಿಪರ್ಯಾಸವಾಗಿದೆ.
ಪರಶುರಾಂಪು ಹೋಬಳಿ ಕೇಂದ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸಿ ಸಿ ಕ್ಯಾಮರ ಅಳವಡಿಸಲಾಗಿದ್ದು ನಗರದಲ್ಲಿ ಅಳವಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಈಗಲಾದರೂ ಚಳ್ಳಕೆರೆ ನಗರದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಿ ಸಿ ಕ್ಯಾಮರ ಅಳವಡಿಸುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments