ಚಳ್ಳಕೆರೆ ಜನಧ್ವನಿ ವಾರ್ತೆ ನ.30 ಒಬ್ಬ ಸಾದು ಬಿಕ್ಷೆ ಬೇಡಿ ದೇವರ ಎತ್ತುಗಳಿಗೆ ಮೇವು ಒದಿಸುತ್ತಿದ್ದೇವೆ ಆದರೆ ರಾಜ್ಯವನ್ನಾಳುವ ಜನಪ್ರತಿನಿಧಿಗಳು ಮಾತ್ರ ದೇವರ ರಾಸುಗಳನ್ನು ಗೋ ಶಾಲೆ ಪ್ರಾರಂಭಿಸಲು ಇಚ್ಚಾ ಶಕ್ತಿ ತೋರುತ್ತಿಲ್ಲ ಎಂದು ಸರಕಾರದ ವಿರುದ್ದ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಜಪಾನಂದಸ್ವಾಮಿಗಳು ಕಿಡಿ ಕಾರಿದ್ದಾರೆ.
ಶೀಫ್ಟ್ ಮಾಡದೇ, ರಾಸುಗಳಿರುವ ಸ್ಥಳಕ್ಕೆ ಸರ್ಕಾರ ಮೇವು ಪೂರೈಕೆ ಮಾಡಬೇಕು ನಗರದ ಪ್ರವಾಸಿಮಂದಿರದಲ್ಲಿ ನಡೆದ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ದೇವರ ರಾಸುಗಳ ಕಿಲಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರ ಬರಗಾಲ ಎಂದು ಘೋಷಣೆ ಮಾಡಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ ಆದರೆ ಇದುವರೇಗೂ ಜಾನುವಾರುಗಳಿಗೆ ಗೋಶಾಲೆಗಳು ತೆರೆಯಲು ಸರಕಾರ ಮೀನಾ ಮೇಷ ಎಣಿಸುತ್ತಿದೆ. ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ತೆರೆಯಬೇಕು, ಶಾಶ್ವತ ಗೋಶಾಲೆ ತೆರಯಲು ಸರಕಾರದ ಗೋಮಾಳದಲ್ಲಿ ಜಾಗ ಮೀಸಲಿಡಬೇಕು.
![](https://janadhwani.in/wp-content/uploads/2023/11/Screenshot_20231130_143357.png)
ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಹೆಸರುಗಲ್ಲಿ ಜಾನುವಾರುಗಳು ಬಿಟ್ಟು ಪೋಷಣೆ ಮಾಡಿಕೊಂಡು, ವಿಶೇಷ ಆಚರಣೆಗಳನ್ನು ಮಾಡುತ್ತಾರೆ. ದೇವರ ರಾಸುಗಳಿಗೆ ಮೂಗು ದಾರ ಹಾಕುವುದಿಲ್ಲ, ಹಗ್ಗ ಹಾಕಿ ಕಟ್ಟುವುದಿಲ್ಲ, ಇವು ಗೋ ಶಾಲೆಗಳಲ್ಲಿ ಇರುವುದಿಲ್ಲ. ದೇವರ ರಾಸುಗಳು ಇರುವ ಸ್ಥಳಗಳಿಗೆ ಸರ್ಕಾರ ಮೇವು ಪೂರೈಕೆ ಮಾಡಿ ದೇವರ ರಾಸುಗಳನ್ನು ಸರ್ಕಾರ ರಕ್ಷಣೆ ಮಾಡಬೇಕ ಎಂದು ಮನವಿ ಮಾಡಿದರು.
ಗೋ ಶಾಲೆಗಳು ಯಾವಾಗಲು ತೆರೆಯಬೇಕಿತ್ತು, ಆದರೆ ಸರ್ಕಾರ, ಜನಪ್ರತಿನಿಧಿಗಳ ಮಾತಿನಲ್ಲಿಯೇ ಇದೇ ಹೊರತು, ಇದುವರೆಗೆಯಾದರೂ ಗೋ ಶಾಲೆಗಳನ್ನು ಸರ್ಕಾರ ಆರಂಭಿಸಿಲ್ಲ, ಮಳೆಯಿಲ್ಲದೆ ಮೇವು ನೀರಿಲ್ಲದೆ ಜಾನುವಾರುಗಳು ರಕ್ಷಣೆ ಮಾಡಲು ಗೋಪಾಲಕರು ಪರದಾಡುತ್ತಿದ್ದಾರೆ. ಸರ್ಕಾರ ದೇವರ ರಾಸುಗಳಿಗೆ ಮೇವು ಪೂರೈಕೆ ಮಾಡುವುದಿಲ್ಲವೆಂದು ಹೇಳಲು ನಾನೇ ಜಾನುವಾರುಗಳಿಗೆ ಮೇವು ಪೂರೈಕೆ ಮಾಡುತ್ತೇನೆ ಎಂದು ಗೋಪಾಲಕರಿಗೆ ಹೇಳಿದರು.
ನಾನು ಇದುವರೆಗೆ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿರುವ 113 ದೇವರ ರಾಸುಗಳ ಕೇಂದ್ರಗಳಿಗೆ ಭಿಕ್ಷೆ ಬೇಡಿ 302 ಟನ್ ಮೇವು ಪೂರೈಕೆ ಮಾಡಿದ್ದೇನೆ, ಸರ್ಕಾರಕ್ಕೆ ಮೇವು ಪೂರೈಕೆ ಮಾಡಲು ಮುಂದಾಗದಿದ್ದರೆ ಮುಂಗಾರು ಬರುವ ತನಕ ಮೇವು ಪೂರೈಕೆ ಮಾಡುತ್ತೇನೆ. ಗೋ ಶಾಲೆಗಳು ತೆರೆಯುವುದರಿಂದ ದೇವರ ರಾಸುಗಳಿಗೆ ಯಾವುದೇ ಉಪಯೋಗವಿಲ್ಲ ಎಂದು ತಿಳಿಸಿದರು.
ಮೊಳಕಾಲ್ಮೂರು ತಾಲ್ಲೂಕಿನ ಮಂಜಣ್ಣ ಮಾತನಾಡಿ ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ ಕ್ಷೇತ್ರಗಳಲ್ಲಿ ನಾಯಕ ಸಮುದಾಯ ಶಾಸಕರುಗಳು ಇದ್ದರು, ಬುಡಕಟ್ಟು ಮ್ಯಾಸನಾಯಕರು ದೇವರ ಹೆಸರುಗಳಲ್ಲಿ ಪೋಷಿಸುತ್ತಿರುವ ಜಾನುವರುಗಳು ಹಾಗು ಅವುಗಳಿಂದ ಆಚರಣೆ ಮಾಡುವ ಸಂಪ್ರದಾಯಗಳು ಉಳಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಉಪನ್ಯಾಸP ಓಬಣ್ಣ ಮಾತನಾಡಿ ವಿಜ್ಞಾನ ಮುಂದುವರೆದೆAತಲ್ಲ ಹುಲ್ಲು ಗಾವಲು ಪ್ರದೇಶವನ್ನು ಸರಕಾರ ಮುಟ್ಟುಗೋಲು ಮಾಡಿಕೊಂಡು ಜಾನುವಾರುಗಳಿಗೆ ಮೇಯಲು ಸ್ಥಳವಿಲ್ಲದಂತಾಗಿದೆ ಇದರಿಂದ ಪಶುಸಂಗೋಪನೆ ನಶಿಸಿ ಹೋಗುತ್ತದೆ.ಪಾರಂಪಾರಿಕ ತಲತಲಾಂತರದಿAದ ಬಂದ ಬುಡಕಟ್ಟು ಸಂಸಕೃತಿ ಕಣ್ಮರೆಯಾಗುತ್ತದೆ ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ತೆರೆಯುವಂತೆ ತಿಳಿಸಿದರು.
ನಟರಾಜ್ ಮಾತನಾಡಿ ಸರಕಾರಿ ಗೋಮಾಳಖಾಸಗಿಯವರಿಗೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ನಿವೇಶನ ಭೂಮಿ ಮಂಜುರಾತಿ ಮಾಡುತ್ತಿದೆ ಆದರೆ ದೇವರ ಎತ್ತುಗಳಿಗೆ ಮಾತ್ರ ಶಾಶ್ವತ ಗೋಶಾಲೆ, ಮೇವು ಬೆಳೆಯುವ ಯೋಜನೆಗೆ ಸರಕಾರಿ ಗೋಮಾಳದಲಿ ಮೀಸಲಿಡಲು ಮುಂದಾಗುತ್ತಿಲ್ಲ ದೇವರ ಎತ್ತುಗಳು ಜಪಾನಂದ ಸ್ವಾಮಿಗಳು ಕಳೆದ ಐದು ವರ್ಷಗಳಿಂದ ಮೇವು ವಿತರಣೆ ಮಾಡುತ್ತಿದ್ದಾರೆ ಇವರಿಗೆ ದೇವರ ಎತ್ತುಗಳ ದತ್ತು ಮಾಡಿಸುವುದು ಹಾಗೂ ದೇವರ ಎತ್ತುಗಳಿಗೆ ಗೋಶಾಲೆ ನಿರ್ಮಿಸಲು ಸರಕಾರಿ ಗೋಮಾಳದಲ್ಲಿ ಭೂಮಿ ಮಂಜುರಾತಿ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲ್ಲಿ ಕಿಲಾರಿ ಬೋರಯ್ಯ, ಪಾಲಯ್ಯ,ಬೋರಯ್ಯ, ಸಿದ್ದೇಶ್, ಪರಮೇಶ್ವರಪ್ಪ, ಸಂಯೋಜಕರಾದ ಮಹೇಶ್, ಸಿದ್ದೇಶ್ ಸೇರಿದಂತೆ ಉತರರುದ್ದರು.
0 Comments