ಜನಧ್ವನಿ ವಾರ್ತೆ ಏ 5
ವಿಕಲಚೇತನರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೋಂಡು ಶೇ ನೂರಷ್ಟು ಮತಚಲಾಯಿಸುವಂತೆ ಚುನಾವಣಾಧಿಕಾರಿ ಆನಂದ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ವಿಕಲಚೇತನ ಕಚೇರಿ ಆವರಣದಲ್ಲಿ ವಿಕಲಚೇತನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಚುನಾವಣೆ ಆಯೋಗ ಪ್ರಪ್ರಥಮ ಬಾರಿಗೆ ವಿಕಲ ಹಾಗೂ ೮೦ ವರ್ಷ ಮೇಲ್ಪಟ್ಟವರಿಗೆ ಮನೆಯಲಿದ್ದೇ ಅಂಜೆ ಮತದಾನ ಮಾಡುವ ಅವಕಾಶ ನೀಡಿದ್ದು ಈಗಾಗಲೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾನದ ಬಗ್ಗೆ ಒಪ್ಪಿಗೆ ಪತ್ರ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ವಿಕಲಚೇತನ ವಿವಿದೊದ್ದೇಶ ಸೌಕರ್ಯ ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ ಮತಗಟ್ಟೆ ಅಧಿಕಾರಿಗಳು ಎಂಬತ್ತು ವರ್ಷ ದಾಟಿದ ಹಾಗೂ ವಿಕಲಚೇತರ ಮನೆಗಳಿಗೆ ತೆರಳಿ ಮನೆಯಲ್ಲಿ ಓಟು ಹಾಕುತ್ತೀರೋ ಅಥವಾ ಮತಕಟ್ಟೆಗೆ ಬಂದು ಹಾಕುತ್ತೀರೋ ಎಂದು ಕೇಳಿದಾಗ ಮನೆಯಲ್ಲೇ ಹಾಕುತ್ತೇವೆ ಎಂದು ಹೇಳುತ್ತಾರೆ.
ವಿಕಲಚೇತನರಿಗೆ ವಾಹನ ಸೌಲಭ್ಯ ಒದಗಿಸಿದರೆ ಸಾಕು ಮತಗಟ್ಟೆ ಬಂದು ಮತದಾನ ಮಾಡಲಾಗುತ್ತದೆ. ಮನೆಯಲ್ಲೇ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯುತ್ತಿರುವಂತವರಿಗೆ ಮನೆಯಲ್ಲೇ ಓಟಿನ ಪವರ್ ನೀಡಿ ಸದೃಢವಾಗಿರುವಂತವರು ಮತಕಟ್ಟೆ ಬಂದು ಮತ ಚಾಲಾಯಿಸುವಂತೆ ಮನವರಿಕೆ ಮಾಡ ಬೇಕು ಎಂದು ಗಮನ ಸೆಳೆದರು.
ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಪ್ರಜಾ ಪ್ರಭುತ್ವದ ಹಕ್ಕನ್ನು ಮತಗಟ್ಟೆಗೆ ಬಂದು ಚಾಲಾಯಿಸ ಬೇಕುಂಬುದು ಉದ್ದೇಶವಿದೆ ಆದರೆ ಮನೆಯಲ್ಲಿ ಹಾಸಿಗೆ ಮೇಲೆ ಇರುವಂತರಿಗೆ ಇದೊಂದು ಸುವರ್ಣವಕಾಶ ಯಾರು ಮತದಾನದಿಂದ ವಂಚಿತರಾಗ ಬಾರದು ಆದರೆ ಒಮ್ಮೆ ಮನೆಯಲ್ಲಿ ಓಟು ಚಲಾಯಿಸಿದರೆ ಮತ್ತೆ ಮತಗಟ್ಟೆಗೆ ಬಂದು ಓಟು ಹಾಕುವಂತಿಲ್ಲ ಬೆಡ್ ರೆಷ್ಟ್ನಲ್ಲಿರುವವರು ಹೊರತು ಪಡಿಸಿ ಉಳಿದ ಎಲ್ಲಾ ವಿಕಲ ಚೇತನರು ತಮ್ಮ ಹಕ್ಕನ್ನು ಚಲಾಯಿಸುವ ಜತೆಗೆ ಮತದಾನದಲ್ಲಿ ಭಾಗವಹಿಸುವಂತೆ ಮತದಾರರಿಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments