ಚಳ್ಳಕೆರೆ ಜನಧ್ವನಿ ವಾರ್ತೆ ಜೂ.7 ರಸ್ತೆ ಕಾಮಗಾರಿ ಉದ್ಘಾಟನೆಗೂ ಮುನ್ನವೇ ಕುಸಿದಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ನಗರದಲ್ಲಿ ವಾಹನ ದಟ್ಟಣೆ ಟ್ರಾಫಿಕ್ ಕಿರಿ ತಪ್ಪಿಸಲು ನಗರದ ಹೊರಗೆ ಕೋಟಿ ಕೋಟಿ ರೂ ವೆಚ್ಚದಲ್ಲಿ ಸಿದ್ದಾಪುರ ಗ್ರಾಮದ ಕ್ರಾಸ್ ನಿಂದ ಬುಡ್ನಹಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸೇರುವಂತೆ ರಸ್ತೆ ಕಾಮಗಾರಿ ನಿರ್ಮಿಸಿದ್ದು , ರಸ್ತೆ ಕಾಮಗಾರಿ ಇನ್ನು ವಾಹನಗಳ ಸಂಚಾರಕ್ಕೆ ಉದ್ಘಾಟನೆಗೂ ಮುನ್ನವೆ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಜಗಲೂಜ್ಜನ ದೇವಸ್ಥಾನ ಬಳಿ ರಸ್ತೆ ಕಾಮಗಾರಿಗೆ ನಿರ್ಮಿಸಿರುವು ತಡೆ ಗೋಡೆ ಕುಸಿದಿದ್ದು , ರಸ್ತೆಗೆ ಅಳವಡಿಸಿರುವ ವಿದ್ಯುತ್ ಕಂಬಗಳೂಸಹ ಬೀಳುವ ಸ್ಥಿತಿ ನಿರ್ಮಾಣವಾಗಿದ್ದ ಇಲ್ಲಿ ಸಂಚಿರಿಸುವ ಸಾರ್ವಜನಿಕರು ಭಯಬೀತರಾಗಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ಕುಸಿದಿರುವುದನ್ನು ಹಾಗೂ ರಸ್ತೆಗೆ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸುವರೇ ಕಾದು ನೋಡ ಬೇಕಿದೆ.
0 Comments