ಹಿರಿಯೂರು:
ವಾಹನ ತೆರಿಗೆಗಿಂತ ಟೋಲ್ ಶುಲ್ಕವೇ ದುಬಾರಿಯಾಗಿದೆ ಎಂಬುದಾಗಿ ಕ್ರೂಸರ್ ಮಾಲಿಕರು ಮತ್ತು ಚಾಲಕರು ಅವಲತ್ತುಕೊಂಡಿದ್ದಾರೆ. ಪ್ರತಿ ದಿನವೂ ಹಿರಿಯೂರು ಮತ್ತು ಚಿತ್ರದುರ್ಗದ ನಡುವೆ ಸುಮಾರು 60 ರಿಂದ 70 ರಷ್ಟು ವಾಹನಗಳು ಸಂಚರಿಸುತ್ತಿದ್ದು ಟೋಲ್ ಶುಲ್ಕವನ್ನು ಕಡಿತಗೊಳಿಸಿ ಎಂಬುದಾಗಿ ಮಾಲಿಕರು ಮತ್ತು ಚಾಲಕರು ಟೋಲ್ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಉಚಿತ ಶಕ್ತಿ ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರು ಖಾಸಗಿ ವಾಹನಗಳತ್ತ ಸುಳಿಯದಂತಾಗಿದ್ದು ಪ್ರಯಾಣಿಕರನ್ನು ಗೋಗರೆದು ಹತ್ತಿಸಿಕೊಳ್ಳಬೇಕಾಗಿದೆ. ಇಂತಹ ಪ್ರಸಂಗದಲ್ಲಿ ನಮಗೆ ಕಲಕ್ಷನ್ ನ್ನೇ ಕಡಿಮೆಯಾಗಿರುವಾಗ ಟೋಲ್ ಸುಂಕದಲ್ಲಿ ಹೆಚ್ಚಳವಾಗಿರುವುದುಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದಾಗಿ ಅವರು ದೂರಿದ್ದಾರೆ.
ಈ ವಾಹನಗಳ ಆದಾಯವನ್ನೇ ನಂಬಿ ಜೀವನ ನಡೆಸುತ್ತಿರುವ ಕ್ರೂಸರ್ ವಾಹನ ಚಾಲಕರು ಮತ್ತು ಮಾಲೀಕರಿಗೆ ಟೋಲ್ ಶುಲ್ಕ, ತೆರಿಗೆ, ದುಬಾರಿಯಾದ ವಾಹನ ನಿರ್ವಹಣೆ, ಡೀಸೆಲ್ ಬೆಲೆ ಏರಿಕೆಗಳಿಂದ ದುಡಿಮೆಗೆ ದಾರಿ ಇಲ್ಲದಂತಾಗಿದೆ. 6500 ಇದ್ದ ಟೈರ್ ಬೆಲೆ 9300 ಆಗಿದೆ. ಆಯಿಲ್ ಚೇಂಜ್ ಮಾಡಿಸುವ ದರ ದುಪ್ಪಟ್ಟು ಆಗಿದೆ. ಇದರಿಂದಾಗಿ ನಾವು ವಾಹನಗಳನ್ನು ಓಡಿಸುವುದೇ ಕಷ್ಟವಾಗಿದೆ.
ಈ ಮೊದಲು ಕಡಿಮೆ ಹಣಕ್ಕೆ ಮಾಸಿಕ ಪಾಸ್ ನೀಡುತ್ತಿದ್ದು, ಕರೋನಾ ನಂತರ ದುಬಾರಿಯಾಗುತ್ತಾ ಹೋದ ಶುಲ್ಕ ಇದೀಗ ಮಾಸಿಕ ಪಾಸ್ ಬದಲಿಗೆ ಪ್ರತಿದಿನವೂ ವಸೂಲಿ ಮಾಡಿ ಚಾಲಕರ, ಮಾಲಿಕರ ದುಡಿಮೆಯನ್ನು ಕೈಗೆ ಸಿಗದಂತೆ ಮಾಡಲಾಗಿದೆ. ಬೆಳಿಗ್ಗೆ ತೆಗೆದುಕೊಂಡ ದಿನದ ಶುಲ್ಕದ ಪಾಸ್ ರಾತ್ರಿ 12ಕ್ಕೆ ಮುಗಿದು ಹೋಗುತ್ತದೆ.
ಇದರಿಂದ ಸ್ವಲ್ಪ ತಡವಾಗಿ ಬಂದರೂ ಮತ್ತೊಂದು ಪಾಸ್ ಗೆ ಹಣ ಕಟ್ಟಬೇಕು ಎಂಬ ಪರಿಸ್ಥಿತಿ ಇದೆ. ಈಗಾಗಲೇ ಇನ್ನೊಂದು ವಾರದಲ್ಲಿ ಟೋಲ್ ಶುಲ್ಕ ಕಡಿಮೆ ಮಾಡದಿದ್ದರೆ ಎಲ್ಲಾ ವಾಹನಗಳನ್ನು ತಂದು ಟೋಲ್ ಮುಂದೆ ನಿಲ್ಲಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಕ್ರೂಸರ್ ವಾಹನದ ಮಾಲೀಕರು, ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಡ ಚಾಲಕ ಹಾಗೂ ಮಾಲಿಕರ ಮನವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಟೋಲ್ ಬಂದ್ ಮಾಡಿಸಿ ಟೋಲ್ ಸಂಗ್ರಹದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲಾ ಚಾಲಕರು, ಮಾಲೀಕರು ಒತ್ತಾಯಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments