ವಾಹನ ತೆರಿಗೆಗಿಂತ ಟೋಲ್ ಶುಲ್ಕವೇ ದುಬಾರಿಯಾಗಿದೆ.ಟೋಲ್ ಶುಲ್ಕ ಕಡಿತಗೊಳಿಸಲು ಕ್ರೂಸರ್ ಮಾಲೀಕರು ಮತ್ತು ಚಾಲಕರಿಂದ ಟೋಲ್ ವ್ಯವಸ್ಥಾಪಕರಿಗೆ ಮನವಿ

by | 07/06/24 | ಪ್ರತಿಭಟನೆ


ಹಿರಿಯೂರು:
ವಾಹನ ತೆರಿಗೆಗಿಂತ ಟೋಲ್ ಶುಲ್ಕವೇ ದುಬಾರಿಯಾಗಿದೆ ಎಂಬುದಾಗಿ ಕ್ರೂಸರ್ ಮಾಲಿಕರು ಮತ್ತು ಚಾಲಕರು ಅವಲತ್ತುಕೊಂಡಿದ್ದಾರೆ. ಪ್ರತಿ ದಿನವೂ ಹಿರಿಯೂರು ಮತ್ತು ಚಿತ್ರದುರ್ಗದ ನಡುವೆ ಸುಮಾರು 60 ರಿಂದ 70 ರಷ್ಟು ವಾಹನಗಳು ಸಂಚರಿಸುತ್ತಿದ್ದು ಟೋಲ್ ಶುಲ್ಕವನ್ನು ಕಡಿತಗೊಳಿಸಿ ಎಂಬುದಾಗಿ ಮಾಲಿಕರು ಮತ್ತು ಚಾಲಕರು ಟೋಲ್ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಉಚಿತ ಶಕ್ತಿ ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರು ಖಾಸಗಿ ವಾಹನಗಳತ್ತ ಸುಳಿಯದಂತಾಗಿದ್ದು ಪ್ರಯಾಣಿಕರನ್ನು ಗೋಗರೆದು ಹತ್ತಿಸಿಕೊಳ್ಳಬೇಕಾಗಿದೆ. ಇಂತಹ ಪ್ರಸಂಗದಲ್ಲಿ ನಮಗೆ ಕಲಕ್ಷನ್ ನ್ನೇ ಕಡಿಮೆಯಾಗಿರುವಾಗ ಟೋಲ್ ಸುಂಕದಲ್ಲಿ ಹೆಚ್ಚಳವಾಗಿರುವುದುಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದಾಗಿ ಅವರು ದೂರಿದ್ದಾರೆ.
ಈ ವಾಹನಗಳ ಆದಾಯವನ್ನೇ ನಂಬಿ ಜೀವನ ನಡೆಸುತ್ತಿರುವ ಕ್ರೂಸರ್ ವಾಹನ ಚಾಲಕರು ಮತ್ತು ಮಾಲೀಕರಿಗೆ ಟೋಲ್ ಶುಲ್ಕ, ತೆರಿಗೆ, ದುಬಾರಿಯಾದ ವಾಹನ ನಿರ್ವಹಣೆ, ಡೀಸೆಲ್ ಬೆಲೆ ಏರಿಕೆಗಳಿಂದ ದುಡಿಮೆಗೆ ದಾರಿ ಇಲ್ಲದಂತಾಗಿದೆ. 6500 ಇದ್ದ ಟೈರ್ ಬೆಲೆ 9300 ಆಗಿದೆ. ಆಯಿಲ್ ಚೇಂಜ್ ಮಾಡಿಸುವ ದರ ದುಪ್ಪಟ್ಟು ಆಗಿದೆ. ಇದರಿಂದಾಗಿ ನಾವು ವಾಹನಗಳನ್ನು ಓಡಿಸುವುದೇ ಕಷ್ಟವಾಗಿದೆ.
ಈ ಮೊದಲು ಕಡಿಮೆ ಹಣಕ್ಕೆ ಮಾಸಿಕ ಪಾಸ್ ನೀಡುತ್ತಿದ್ದು, ಕರೋನಾ ನಂತರ ದುಬಾರಿಯಾಗುತ್ತಾ ಹೋದ ಶುಲ್ಕ ಇದೀಗ ಮಾಸಿಕ ಪಾಸ್ ಬದಲಿಗೆ ಪ್ರತಿದಿನವೂ ವಸೂಲಿ ಮಾಡಿ ಚಾಲಕರ, ಮಾಲಿಕರ ದುಡಿಮೆಯನ್ನು ಕೈಗೆ ಸಿಗದಂತೆ ಮಾಡಲಾಗಿದೆ. ಬೆಳಿಗ್ಗೆ ತೆಗೆದುಕೊಂಡ ದಿನದ ಶುಲ್ಕದ ಪಾಸ್ ರಾತ್ರಿ 12ಕ್ಕೆ ಮುಗಿದು ಹೋಗುತ್ತದೆ.
ಇದರಿಂದ ಸ್ವಲ್ಪ ತಡವಾಗಿ ಬಂದರೂ ಮತ್ತೊಂದು ಪಾಸ್ ಗೆ ಹಣ ಕಟ್ಟಬೇಕು ಎಂಬ ಪರಿಸ್ಥಿತಿ ಇದೆ. ಈಗಾಗಲೇ ಇನ್ನೊಂದು ವಾರದಲ್ಲಿ ಟೋಲ್ ಶುಲ್ಕ ಕಡಿಮೆ ಮಾಡದಿದ್ದರೆ ಎಲ್ಲಾ ವಾಹನಗಳನ್ನು ತಂದು ಟೋಲ್ ಮುಂದೆ ನಿಲ್ಲಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಕ್ರೂಸರ್ ವಾಹನದ ಮಾಲೀಕರು, ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಡ ಚಾಲಕ ಹಾಗೂ ಮಾಲಿಕರ ಮನವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಟೋಲ್ ಬಂದ್ ಮಾಡಿಸಿ ಟೋಲ್ ಸಂಗ್ರಹದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲಾ ಚಾಲಕರು, ಮಾಲೀಕರು ಒತ್ತಾಯಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page