ಚಳ್ಳಕೆರೆ….ವಾಲ್ಮೀಕಿ ನಗರದ ಬಯಲು ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಮನೆಯೊಂದರ ಕಬ್ಬಿಣದ ಗೇಟ್ ಮತ್ತು ಇಂಟರ್ ಲಾಕ್ ಮುರಿದು ಒಳಪ್ರವೇಶಿಸಿದ ಕಳ್ಳರು ಮನೆಯಲ್ಲಿನ ಸುಮಾರು 7.50 ಲಕ್ಷದ ಬಂಗಾರ ಆಭರಣ ಹಾಗೂ 1.30 ಲಕ್ಷ ಮೌಲ್ಯದ ಬೆಳ್ಳಿ ದೀಪ ಸೇರಿ 8.80 ಲಕ್ಷ ಮೌಲ್ಯದ ಚಿನ್ಬಾಭರಣ ಕಳ್ಳತನ ಮಾಡಿದ್ದಾರೆ.
ತಾಲ್ಲೂಕಿನ ನನ್ನಿವಾಳ ಗ್ರಾಮದ ಹೈಸ್ಕೂಲ್ ಶಿಕ್ಷಕ ಬಿ.ಮನೋಹರ ಎಂಬುವವರ ಈ ಬಗ್ಗೆ ದೂರು ನೀಡಿದ್ದು, ಮಹಾಶಿವರಾತ್ರಿ ಹಿನ್ನೆಲೆ ಪತ್ನಿ ಹಾಗೂ ಬಂಧುಗಳು ಹಂಪೆಯ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿ ಶಿವರಾತ್ರಿ ಉತ್ಸವ ಮುಗಿಸಿ ಮಾ.10 ಭಾನುವಾರ ಸುಮಾರು 9.30ಕ್ಕೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಮರದ ತೊಳು ಹಾಗೂ ಇಂಟರ್ ಲಾಕ್ ಮುರಿದಿರುವುದು ಕಂಡುಬಂದಿದೆ. ಗಾಬರಿಗೊಂಡ ನಾವು ಮನೆಯೊಳಗೆ ಪ್ರವೇಶ ಮಾಡಿ ರೂಂನಲ್ಲಿದ್ದ ಕಬ್ಬಿಣದ ಬೀರ್ ನೋಡಿದಾಗ ಅದರ ಲಾಕನ್ನು ಸಹ ಕಳ್ಳರು ಮುರಿದು ಆಭರಣಗಳನ್ನು ದೋಚಿದ್ದು ಕಂಡುಬಂದಿದೆ. ಕೂಡಲೇ ಭಯಭೀತರಾದ ನಾವು ಪೊಲೀಸರಿಗೆ ಮಾಹಿತಿ ನೀಡಿದೆ. ಪಿಎಸ್ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments