ದಾವಣಗೆರೆ: ನಗರದ ಬಿಐಇಟಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅಪಮಾನ ಮಾಡಲಾಗಿದ್ದು, ವಾರ್ಡನ್ ವಿರುದ್ಧ ಕಠಿಮ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಭಾವಚಿತ್ರವಿಡದೆ ಅಪಮಾನ ಮಾಡಿರುವಂತಹ ವಾರ್ಡನ್ ಅವರನ್ನು ಅಮಾನತು ಮಾಡಬೇಕು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಒಂದೊಮ್ಮೆ ವಾರ್ಡನ್ ತಪ್ಪು ಮಾಡಿದ್ದು ಸಾಬೀತಾದಲ್ಲಿ ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವಾಗ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅಪಮಾನ ಮಾಡಲಾಗಿದೆ. ವಾರ್ಡನ್ ಅವರನ್ನು ಕೇಳಿದಾಗ ಅಲ್ಲಿ ಇಳಿಜಾರು ಇತ್ತು. ಹಾಗಾಗಿ ಭಾವಚಿತ್ರ ಇಡಲಿಕ್ಕಾ ಗಲಿಲ್ಲ. ಪ್ರತಿ ಬಾರಿಯೂ ಅಂಬೇಡ್ಕರ್ ಅವರ ಭಾವಚಿತ್ರ ಇಡಲಾಗುತ್ತಿತ್ತು. ಈ ವರ್ಷ ಇಟ್ಟಿಲ್ಲದಿರುವುದನ್ನು ಪ್ರಶ್ನಿಸುತ್ತೀರಿ ಎಂದು ಹೇಳುತ್ತಾರೆ. ಎಲ್ಲಿಯೂ ಹೊರಗಡೆ ಯೇ ಭಾವಚಿತ್ರ ಇಡಬೇಕು ಎಂಬ ಆದೇಶ ಇಲ್ಲ ಎಂಬ ಉಡಾಫೆಯಾಗಿ ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಕೂಡಲೇ ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
0 Comments