ಹಿರಿಯೂರು :
ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 113.65 ಅಡಿ ತಲುಪಿದೆ. ಸೋಮವಾರ ಡ್ಯಾಂಗೆ 3800 ಕ್ಯೂಸೆಕ್ ನೀರು ಹರಿದು ಬಂದಿತ್ತು ಎನ್ನಲಾಗಿದೆ.
ಆದರೆ ಮಂಗಳವಾರ ಜಲಾಶಯಕ್ಕೆ 5100 ಕ್ಯೂಸೆಕ್ ನೀರುಹರಿದು ಬರುವ ಮೂಲಕ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಬುಧವಾರ 4800 ಕ್ಯೂಸೆಕ್ ನೀರು ಅಷ್ಟೇ ಹರಿದು ಬಂದಿತ್ತು. ಇದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಬಂದರೆ ಡ್ಯಾಂ ಕೋಡಿ ಬೀಳುವ ಸಾಧ್ಯತೆ ಇರುತ್ತದೆ.
0 Comments