ಹಿರಿಯೂರು :
ತಾಲ್ಲೂಕಿನ ವಾಣಿವಿಲಾಸಪುರದಲ್ಲಿ ಮೈಸೂರು ಒಡೆಯರು ನಿರ್ಮಿಸಿರುವ ವಾಣಿವಿಲಾಸ ಅಣೆಕಟ್ಟೆಯ ರಕ್ಷಕಿ ಎಂದೇ ಖ್ಯಾತಿ ಪಡೆದಿರುವ, ಭಕ್ತರ ಕೋರಿಕೆಗಳನ್ನು ಈಡೇರಿಸುವ ಆರಾಧ್ಯ ದೈವ ಕಣಿವೆ ಮಾರಮ್ಮದೇವಿಯ ಬ್ರಹ್ಮರಥೋತ್ಸವ ಮೇ 10 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ದೇವಸ್ಥಾನ ಸಮಿತಿ ವ್ಯವಸ್ಥಾಪಕರು ತಿಳಿಸಿದ್ದಾರೆ.
ಇದೇ ಮೇ 7 ರಂದು ಮದಲಿಂಗಿತ್ತಿಶಾಸ್ತ್ರದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. 8 ರಂದು ಗಂಗಪೂಜೆ ಮತ್ತು ಜಲಧಿ ಉತ್ಸವ , 9 ರಂದು ದೇವಿಯ ಉತ್ಸವಮೂರ್ತಿ ಮೆರವಣಿಗೆ ಮತ್ತು ಭಕ್ತಾಧಿಗಳಿಂದ ಆರತಿ ಕಾರ್ಯಕ್ರಮ ನಡೆಯಲಿದ್ದು, ಮೇ 10 ರಂದು ಸಾವಿರಾರು ಭಕ್ತರ ಸಮಕ್ಷಮದಲ್ಲಿ ಕಣಿವೆ ಮಾರಮ್ಮದೇವಿಯ ಬ್ರಹ್ಮರಥೋತ್ಸವ ನಡೆಯಲಿದೆ.
ಆನಂತರ ಮೇ 11 ರಂದು ಸಿಡಿ ಉತ್ಸವ, 12 ರಂದು ಅಮ್ಮನವರು ಗುಡ್ಡ ಇಳಿಯುವುದು, ಮೇ 13 ರಂದು ಭರಮಗಿರಿ ಕೆರೆ ಹಿಂಭಾಗದಲ್ಲಿ ದೊಡ್ಡ ಎಡೆ ಸೇವೆ ಮುಗಿಸಿಕೊಂಡು ಅಮ್ಮನವರು ಗುಡ್ಡ ಹತ್ತುವುದು, 14 ರಂದು ಚಪ್ಪರ ಇಳಿಸುವ ಕಾರ್ಯಕ್ರಮ ಇರುತ್ತದೆ ಎಂಬುದಾಗಿ ದೇವಸ್ಥಾನ ಸಮಿತಿ ವ್ಯವಸ್ಥಾಪಕರು ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments