ಚಳ್ಳಕೆರೆ ಜನಧ್ವನಿ ವಾರ್ತೆ ಮಾ.24 ತಾಲ್ಲೂಕು ಪರಶುರಾಂಪುರ
ಹೋಬಳಿ ವ್ಯಾಪ್ತಿಯ ವೇದಾವತಿ ನದಿಗೆ ವಾಣಿವಿಲಾಸ ಸಾಗರದ
ನೀರು ಹರಿಯುತ್ತಿದ್ದು, ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ. ಬಯಲು ಸೀಮೆಯ ಏಕೈಕ ನದಿವೇದಾವತಿ ನದಿಯಾಗಿದ್ದು ಮಳೆಗಾಲದಲ್ಲಿ ಮಾತ್ರ ನೀರು ಕಾಣುತ್ತಿದ್ದ ನದಿ ಈಗ ಬೇಸುಗೆಯಲ್ಲಿ ನೀರು ಕಾಣುವಂತಾಗಿದ್ದು ವಾಣಿ ವಿಲಾಸ ಸಾಗರದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪ್ರತಿ ವರ್ಷ ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸುವುದರಿಂದ ನದಿ ಪಾತ್ರದ ಹಳ್ಳಿಗಳ ಅಂತರ್ಜಲ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹಾಗೂ ಜನ ಜಾನುವಾರುಗಳಿಗೆ ಶಾಶ್ವತ ಕುಡಿತುವ ನೀರಿ ಸಮಸ್ಯೆ ನಿವಾರಣೆಗೆ ಕಾರಣವಾಗಿದ್ದು ಈಗ ವೇದಾವದಿ ನದಿಗೆ ನೀರು ಹರಿಸಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಬೀರುವ ಜತೆಗೆ ನದಿಯ ನೀರು ನೋಡಲು ಜನರ ಹಿಂಡು ನದಿಯತ್ತ ಬರುತ್ತಿದ್ದಾರೆ. ಬಿಸಿಲಿನ ಧಗೆಯಿಂದ ಕಂಗಾಲಾಗಿರುವ
ಹಳ್ಳಿಗಳ ಜನತೆ ದಣಿವಾರಿಸಿಕೊಳ್ಳುವ ಲಸಂಬಂಧ
ಈಜಾಡಲು ಜಮೀನಿನಲ್ಲಿರುವ ನೀರಿನ ತೊಟ್ಟಿ.ಬಾವಿ ಹಾಗೂ ವೇದಾವತಿ ನದಿ
ಮೊರೆ ಹೋಗುತ್ತಿದ್ದಾರೆ.
ತಾಲೂಕಿನ ವೇದಾವತಿನದಿಯಲ್ಲಿನ ಬ್ಯಾರೇಜು ನೀರು ತುಂಬಿದ್ದು ಯುವಕರು ಮಕ್ಕಳು ಈಜಾಡುವ ಮೂಲಕ ಬಿಸಿಲಿನ ದಣಿವಾರಿಸಿಕೊಳ್ಳುವ ದೃಶ್ಯ ಕಂಡು ಬಂತು.
ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿದ್ದ ತೆರೆದ
ಬಾವಿಗಳು ಅಂತರ್ಜಲ ಕೊರತೆಯಿಂದ ಬರಿದಾಗಿದ್ದು,
ಇನ್ನು ಕೆಲವರು ಕೊಳವೆ ಬಾವಿಗಳ ಹಾವಳಿಗೆ
ತೆರೆದ ಬಾವಿಗಳನ್ನು ಮುಚ್ಚಿದ್ದು, ಗ್ರಾಮೀಣ ಭಾಗದ
ಇತ್ತೀಚಿನ ಯುವಕರಲ್ಲಿ ಈಜು ಮರೆತು ಹೊಗುವಂತೆ
ಮಾಡಿದೆ. ಬಿಸಿಲಿತಾಪದಿಂದ ನೀರಿನ ತೊಟ್ಟಿ, ವೇದಾವತಿ ನದಿ,
ಕೆರೆಗಳಲ್ಲಿ ಈಜಲು ಮುಗಿಬೀಳುತ್ತಿದ್ದಾರೆ.
ಸರಕಾರದವತಿಯಿಂದ ಈಜುಕೊಳ ನಿರ್ಮಿಸಿದರೆ
ಈಜು ಕಲಿಯಲು ಸಹಕಾರಿಯಾಗಲಿದೆ ಎಂಬುದು
ಸಾರ್ವಜನಿಕರ ಮನವಿ. ಬಿಸಿಲಿನ ತಾಪ
ದಿನದಿಂದ ದಿನಕ್ಕೆ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ
ಬಯಲು ನಾಡಿನ ಜನತೆ ರೋಸಿ ಹೋಗಿದ್ದಾರೆ.
ಉಷ್ಣತೆ ಅಧಿಕವಾಗಿದೆ. ಅದರಲ್ಲಿಯೂ ಮಧ್ಯಾಹ್ನವೇಳೆಯಂತೂ ಬಿಸಿಲು ಕೆಂಡದಂತೆ ಇರುತ್ತದೆ.
ಹೊರಗಡೆ ಹೋಗಲು ಆಗದಂತಹ ಪರಿಸ್ಥಿತಿ
ನಿರ್ಮಾಣವಾಗಿರುತ್ತದೆ. ಬಿಸಿಲಿನ ತಾಪಮಾನದಿಂದ
ತಪ್ಪಿಸಿಕೊಳ್ಳಲು ರೈತರ ಜಮೀನಿನ ನೀರಿನ ತೊಟ್ಟಿ, ಕೆರೆ
ಮತ್ತು ಬಾವಿಗಳಲ್ಲಿ ಈಜಾಡಲಾಗುತ್ತದೆ. ಗ್ರಾಮೀಣ
ಪ್ರದೇಶದಲ್ಲಿ ಇನ್ನೂ ಕೆಲವೊಂದು ಬಾವಿ ಮತ್ತುಕೆರೆಗಳಲ್ಲಿ ಇರುವ ಕಡಿಮೆ ನೀರಿನಲ್ಲಿಯೇ ಬಹುತೇಕರು
ಈಜಾಡುವ ಮೂಲಕ ಬಿಸಿಲಿನಿಂದ ತಪ್ಪಿಸಿಕೊಳ್ಳಲು
ನಿರತರಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ
ಇಲಾಖೆ ತಾಲೂಕು ಕೇಂದ್ರ ಹಾಗೂ ವಿವಿಧಕಡೆ
ಈಜುಕೊಳ ನಿರ್ಮಿಸಲು ಮುಂದಾಗುವರೇ ಕಾದು
ನೋಡಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments