ಚಳ್ಳಕೆರೆ ಜನಧ್ವನಿ ವಾರ್ತೆ ಏ28
ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮಕ್ಕಳು ಶಾಲೆ ಬಿಟ್ಟು.. ಕೂಲಿ ಕೆಲಸಗಳಿಗೆ ಹೋಗುವುದನ್ನ ತಪ್ಪಿಸಲು ಬಡ ಮಕ್ಕಳಿಗೋಸ್ಕರ ವಸತಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ಸರ್ಕಾರ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದ್ರೆ ವಸತಿ ಶಾಲೆಯ ಮಕ್ಕಳ ಹಸಿವನ್ನು ನೀಗಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ.
ಹೌದು ಇದು ಚಳ್ಳಕೆರೆ ನಗರದ ಹೊರವಲಯ ಪಾವಗಡರಸ್ತೆಯಲ್ಲಿರುವ ಹೈಟೆಕ್ ಸುಂದರ ಕಟ್ಟಡಗಳಲ್ಲಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ತಾ.ಕಚೇರಿ ಬಳಿ ಪ್ರತಿಭಟಿಸಿ ಮನವಿ ಸಲ್ಲಿಸಿದ್ದಾರೆ.
ಬಿಸಿಎಂ ಹಾಸ್ಟೆಲ್ ನಲ್ಲಿ ೧೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಹಾಸ್ಟೆಲ್ ನಲ್ಲಿ ಸರಿಯಾದ ಊಟದ ವ್ಯವಸ್ಥೆಯಿಲ್ಲ. ಅವ್ಯವಸ್ಥೆ ಬಗ್ಗೆ ಅಡುಗೆ ಬಟ್ಟರಿಗೆ ಕೇಳಿದರೆ ಅಧಿಕಾರಿಗಳಿಗೆ ಕೇಳಿ ಎನ್ನುತ್ತಾರೆ ಊಟ ತಿಂದಿ ಮೆನು ಇದೆ ಆದರೆ ಅದಲ್ಲಿರುವ ಊಟ ತಿಂಡಿ ನೀಡುತ್ತಿಲ್ಲ ನೀಡುತ್ತಿರುವ ಗುಣಮಟ್ಟದ ಅಡುಗೆ ತಯಾರು ಮಾಡುತ್ತಿಲ್ಲ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಈಗಾಗಲೆ ಮೇಲಾಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನ ಸುರಿಮಳೆ ಗೈದರು.
ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಾದ ಹರೀಶ್, ತರುಣಕುಮಾರ್, ಲಿಖಿತ, ಪುನೀತ್, ವಿರೇಂದ್ರ, ನವೀನ್ ಸೇರಿದಂತೆ ಮುಂತಾದವರು ಇತರರಿದ್ದರು.
0 Comments