ಚಳ್ಳಕೆರೆ ಮೇ25 ವರುಣನ ಆರ್ಭಟಕ್ಕೆ ತೋಟಗಾರಿಕೆ ಬೆಳೆಗಳು ನೆಲಕ್ಕುರಿಳಿದರೆ ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ. ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಉಂಡು ಮಲಗುವ ಒತ್ತಿಗೆ ಪ್ರಾರಂಭವಾದ ಮಳೆ ರಾತ್ರಿಯಲ್ಲ ಸುರಿದು ನಾಯಕನಹಟ್ಟಿ ಪೋಲಿಸ್ ಠಾಣೆ ಮಳೆ ನೀರಿನಿಂದ ಜಲಾವೃತಗೊಂಡರೆ.ಗುಡಿಹಳ್ಳಿ ಗ್ರಾಮದಲ್ಲಿ ಚರಂಡಿಗೆ ಅಡ್ಡಲಾಗಿ ಮನೆ ನಿರ್ಮಾಣದಿಂದ ದಲಿತ ಕಾಲೋನಿಯ ಸುಮಾರು 15 ಮನೆಗಳಿಗೆ ಚರಂಡಿ ನೀರು ನುಗ್ಗಿದರೆ. ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಡಿ.ಉಪ್ಪಾರಹಟ್ಟಿ ಗ್ರಾಮದಲ್ಲೂ ಸಹ ಚರಂಡಿ ಹೂಳು ತುಂಬಿದ್ದರಿಂದ ಮಳೆ ಹಾಗೂ ಕೊಳಚೆ ನೀರು ಮನೆಗಳಿಗೆ ನುಗ್ಗಿದರೆ ಕೊರ್ಲಕಟ್ಟೆ ಗ್ರಾಮದ ಅಜ್ಜಣ್ಣ ಎಂಬುವರಿಗೆ ಸೇರಿದ ಪಪ್ಪಾಯಿ ಬೆಳೆ ಮಳೆ ಗಾಳಿಗೆ ನೆಲ್ಲ ಕಚ್ಚಿವೆ.
ಎನ್.ದೇವರಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ ಚೆಕ್ ಡ್ಯಾಂ ಗಳು.ಹಳ್ಳಕೊಳ್ಳಲ್ಲಿ ನೀರು ತುಂಬಿ ಹರಿದಿದೆ ಒಟ್ಟಾರೆ ಬಿಸಿಲಿನ ತಾಪ ಹಾಗೂ ಬರದಿಂದ ತತ್ತರಿಸಿ ಜನರಿಗೆ ಮಳೆಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಕೊರತೆ ನೀಗುವಂತೆ ಮಾಡಿದರೆ ಇನ್ನೇ ಮಳೆ ಬಿಡುವಾದರೆ ಮುಂಗಾರು ಬಿತ್ತನೆಗೆ ಕೃಷಿ ಚಟುವಟಿಕೆ ಚುರುಕುಗೊಳ್ಳುವ ಸಾಧ್ಯತೆ ಇದೆ.
ಪರಶುರಾಂಪುರ 36-4 mm.ನಾಯಕನಹಟ್ಟಿ 65-6 mm
ತಳಕು 51-2 mm
ದೇವರಮರಿಕುಂಟೆ 41-2 mm ಮಳೆ ಬಿದ್ದಿದೆ.
0 Comments