ಚಳ್ಳಕೆರೆಡಿ13. ರಾಜ್ಯ ಸರಕಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮೆ ಮಾಡಲು ಇನ್ನು ಕೆಲವೇ ದಿನಗಳು ಬಾಕಿದ್ದರೂ ಸಹ ಕೆಲ ರೈತರು ಎಫ್ ಐಡಿ ಮಾಡಿಸಲು ಮುಂದೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು ಚಳ್ಳಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದು ಒಂದು ರೀತಿಯ ಸಮಾಧಾನವಾದರೂ, ಪಹಣಿಗಳ ದಾಖಲೆಯನ್ನು ಫ್ರೂಟ್ಸ್ (ಫಾರ್ಮರ್ ರಿಜಿಸ್ಪ್ರೇಶನ್ ಆಂಡ್ ಯುನಿಫೈಡ್ ಬೆನಿಫಿಷರಿ ಇನ್ಫರ್ಮೇಶನ್ ಸಿಸ್ಟಮ್) ತಂತ್ರಾಂಶದಲ್ಲಿ ಎಫ್ಐಡಿ (ಫಾರ್ಮರ್ಸ್ ಐಡೆಂಟಿಫಿಕೇಶನ್ ಡಾಕ್ಯುಮೆಂಟ್) ಮೂಲಕ ರೈತರ ಖಾತೆಗೆ ನೇರ ಹಣ ಹಾಕಲಾಗುವುದು ಎಂದು ಕೃಷಿ , ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಪ್ರಚಾರ ಹಾಗೂ ಮನೆ ಮುಂದೆಯೇ ಎಫ್ ಐಡಿ ಮಾಡಿಕೊಂಡುತ್ತೇವೆ ಎಂದು ರೈತರ ಮನವೊಲಿಸಿದರೂ ಸಹ ಶೇ 100 ರಷ್ಟು ಗುರಿಮುಟ್ಟಲು ಸಾಧ್ಯವಾಗುತ್ತಿಲ್ಲ ಇತ್ತ ಸರಕಾರ ಯವೊಬ್ಬ ರೈತರು ಬೆಳೆ ನಷ್ಟ ಪರಿಹಾರದಿಂದ ವಂಚಿತರಾಗದಂತೆ ಪ್ರತಿ ಯೊಬ್ಬ ರೈತರಿಗೆ ಎಫ್ ಐಡಿ ಮಾಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ ರೈತರು ಮುಂದೆ ಬಾರದೇ ಇರುವುದು ಅಧಿಕಾರಿಗಳಿಗೆ ಚಿಂತೆಗೀಡು ಮಾಡಿದೆ.
ಎಫ್ ಐಡಿ ಗುರಿಮುಟ್ಟಲು ಹಲವು ತೊಡಕುಗಳು.
ತಾತ ಮುತ್ತಾಂದಿರ ಹೆಸರಿಗಿರುವ ಜಮೀನುಗಳು ಕುಟುಂಬಸ್ಥರ ಹೆಸರಿಗೆ ಪೌತಿ ಖಾತೆ ಆಗದೆ ಇರುವುದು, ಇತ್ತೀಚೆಗೆ ಮರಣ ಹೊಂದಿರುವವರು ಹಾಗೂ ಪಹಣಿ ವರ್ಗಾವಣೆ ಆಗಿರುವವರ ಕೆಲ ತಾಂತ್ರಿಕ ಕಾರಣದಿಂದ ಹಾಗೂ ಜಮೀನು ಹೊಂದಿದ ರೈತರು ಭೂಮಿ ಪಾಳ ಬಿಟ್ಟು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಉದ್ಯೋಗ ಮಾಡಲು ಹೋಗಿರುವ ಸಾಕಷ್ಟು ರೈತರು ಎಫ್ಐಡಿ ಮಾಡಿಸಲು ಮುಂದೆ ಬಾರದೆ ಇರುವುದು ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಡಿತರ ಚೀಟಿ ರದ್ದಾಗುವ ಭೀತಿ.
ಸರಕಾರ ನೀಡುವ ಎರಡು ಸಾವಿರ ರೂ ಪರಿಹಾರಕ್ಕೆ ವರ್ಷದ ಕೂಳು ಕಳೆದು ಕೊಳ್ಳಬೇಕೆ ಎಂಬ ಮಾತುಗಳು ಸಹ ರೈತರಿಂದ ಕೇಳಿ ಬರುತ್ತಿವೆ ಸುಮಾರು 7 ಎಕರೆ ಭೂಮಿ ಮೇಲಿದ್ದರೈತರ ಪಡಿತರ ಚೀಟಿಗಳು ರದ್ದಾಗುತ್ತವೆ ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ಉಚಿತ ಆರೋಗ್ಯ ಚಿಕಿತ್ಸೆಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದಲೂ ಸಹ ರೈತರು ಎಫ್ ಐ ಡಿ ಹಾಗೂ ಪಿಎಂ ಕಿಸಾನ್ ಗೆ ಆಧಾರ್ ಲಿಂಕ್ ಮಾಡಲು ರೈತರು ಮುಂದೆ ಬರದೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆಯೂ ಬೇಡ ಎಂದು ಕೆಲ ರೈತರು ಎಫ್ಐಡಿ ಹಾಗೂ ಪಿಎಂ ಕಿಸಾನ್ ಯೋಜನೆಗೆ ಆಧಾರ್ ಲಿಂಕ್ ಮಾಡಲು ರೈತರು ಇಚ್ಚಾಶಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
0 Comments