ಚಳ್ಳಕೆರೆ: ನಗರದ ಅಜ್ಜಯ್ಯನ ಗುಡಿ ಬಳಿ ಸರ್ಕಾರದಿಂದ ಮಂಜೂರಾದ ಗೋಶಾಲೆಯನ್ನು ಶಾಸಕ ಟಿ ರಘುಮೂರ್ತಿ ಗೋವುಗಳಿಗೆ ಮೇವನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಭೀಕರ ಬರಗಾಲ ಆವರಿಸಿದೆ ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭವಾಗುವುದರಿಂದ ಜನ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹೋಬಳಿಗೊಂದು ಗೋಶಾಲೆ ತೆರೆಯಲು ಕ್ರಮ ಕೈಗೊಂಡಿದ್ದು ಇದರಂತೆ ಇಂದು ಕಸಬಾ ಹೋಬಳಿಯಲ್ಲಿ ಉದ್ಘಾಟನೆಗೊಂಡಿದೆ ರಾಜ್ಯದಲ್ಲಿ ಗೋಶಾಲೆ ನಿರ್ಮಾಣಗೊಂಡಿರುವುದು ಚಳ್ಳಕೆರೆ ತಾಲೂಕಿನಲ್ಲಿ ಪ್ರಥಮವಾಗಿದೆ ಸರ್ಕಾರ ತಾಲೂಕಿಗೆ ಮೊದಲ ಆದ್ಯತೆ ನೀಡಿದೆ ಅದರಂತೆ ಜಿಲ್ಲೆಗೆ 10 ಲಕ್ಷ ಬಿಡುಗಡೆಯಾಗಿದ್ದು 5 ಲಕ್ಷ ಚಳ್ಳಕೆರೆ ತಾಲೂಕಿಗೆ ಬಂದಿದೆ ತಾಲೂಕಿನ ಕಸಬಾ ಹೋಬಳಿ ಪರಶುರಾಂಪುರ ತುರುವನೂರು ದೊಡ್ಡ ಉಳ್ಳಾರ್ತಿ ನಾಯಕನಹಟ್ಟಿಯ ಹಿರೆಕಾವಲು ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆದಿದ್ದು ಜಾನುವಾರುಗಳನ್ನು ಸಲಹುತ್ತಿರುವ ಆರ್ಥಿಕವಾಗಿ ಹಿಂದುಳಿದ ಜನರು ರೈತಾಪಿ ವರ್ಗ ಹಾಗೂ ದೇವರ ಹಸುಗಳನ್ನು ಸಾಕುತ್ತಿರುವವರು ಈ ಸೌಲಭ್ಯವನ್ನು ಪಡೆದುಕೊಂಡು ಹಸುಗಳನ್ನು ಹಸಿವಿನಿಂದ ನರಳಿಸದೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ತಾಲೂಕಿನಲ್ಲಿ 1891 ಹಸುಗಳಿದ್ದು ಮೇವಿಗಾಗಿ 22 ಲಕ್ಷ ಹಣ ಬೇಕಾಗುತ್ತದೆ ಸರ್ಕಾರದಿಂದ 10 ಲಕ್ಷ ಮಂಜೂರಾಗಿದ್ದು ಉಳಿದ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನೀಡಲಾಗುವುದು ಹಸುಗಳಿಗೆ ಮೇವು ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಯಾವುದೇ ಲೋಕದೋಷಗಳು ಆಗದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಸುಗಳಿಗೆ ಒಂದೇ ರೀತಿಯ ಮೇವನ್ನು ನೀಡುವ ಬದಲು ಬತ್ತದ ಹುಲ್ಲು ರಾಗಿ ಹುಲ್ಲು ಸೆಪ್ಪೆದಂಟು ಮೆವನ್ನು ನೀಡಿದಾಗ ಹಸುಗಳಿಗೆ ಉತ್ತಮ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಮಾತನಾಡಿ ಶಾಸಕ ಟಿ ರಘುಮೂರ್ತಿಯವರ ಪರಿಶ್ರಮದಿಂದಾಗಿ ತಾಲೂಕಿನಲ್ಲಿ ಐದು ಗೋಶಾಲೆಗಳನ್ನು ತೆರೆಯಲಾಗಿದೆ ರೈತರು ಮೇ ವನ್ನು ಮನೆಗಳಿಗೆ ಒಯ್ಯದೆ ಹಸುಗಳನ್ನು ಇಲ್ಲಿಯೇ ತಂದು ಮೇಯಿಸಿಕೊಂಡು ಹೋಗಬೇಕು ಮೇವು ಹಾಗೂ ನೀರಿನ ಕೊರತೆ ಉಂಟಾದರೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ವೀರಭದ್ರಪ್ಪ ನನ್ನಿವಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ ರಾಜಣ್ಣ ಚಿನ್ನಣ್ಣ ಬಸವರಾಜ್ ಸಿಟಿ ಶ್ರೀನಿವಾಸ್ ತಹಶೀಲ್ದಾರ್ ರೆಹಾನ್ ಪಾಷಾ ಪಶುಸಂಗೋಪನ ಅಧಿಕಾರಿ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments