ಚಳ್ಳಕೆರೆ:ನ.28 ತಾಲೂಕಿನ ರೈತ ಪರ ಹೋರಾಟಗಾರ ನುಲೆನೂರುಶಂಕ್ರಪ್ಪ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ಪಿ ಬೂತಯ್ಯ ಶಂಕರಪ್ಪ ಅವರೊಂದಿಗೆ 1986 ರಿಂದ ಒಡನಾಟ ಹೊಂದಿದ್ದೇನೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಮೊಳಕಾಲ್ಮುರಿನ ರಾಂಪುರದಿಂದ ಚಿತ್ರದುರ್ಗದ ವರೆಗೆ ಪಾದಯಾತ್ರ ಮಾಡಿ ಹೋರಾಟ ನಡೆಸಿದ್ದೆವು ಶಂಕ್ರಪ್ಪನವರು ರೈತಪರ ಹಾಗೂ ಜನಪರ ಹೋರಾಟಗಳಲ್ಲಿ ಸದಾ ಮುಂದಾಳತ್ವ ವಹಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ಬರಿಸುವ ಶಕ್ತಿ ನೀಡಲಿ ಶಂಕರಪ್ಪನವರ ರೈತ ಪರವಾದ ಕನಸುಗಳನ್ನು ಈಡೇರಿಸಲು ತಾಲೂಕಿನ ಎಲ್ಲಾ ರೈತ ಸಂಘಗಳು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿವೆ ಎಂದು ತಿಳಿಸಿದರು.
ಪತ್ರಕರ್ತ ಕೆಎಸ್ ರಾಘವೇಂದ್ರ ಮಾತನಾಡಿ ಶಂಕರಪ್ಪನವರು ರೈತ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಬರಲು ಹೋರಾಟಗಳಲ್ಲಿ ಭಾಗವಹಿಸಿ ಪ್ರಮುಖ ಪಾತ್ರ ನಿರ್ವಹಿಸಿದರು ಪತ್ರಿಕ ವಿತರಕರಾಗಿ ಸೇವೆ ಸಲ್ಲಿಸಿ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದರು ಎಂದು ಸ್ಮರಿಸಿದ್ದರು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ ಮಾತನಾಡಿ ಶಂಕರಪ್ಪನವರನ್ನು ಕಳೆದುಕೊಂಡು ತಾಲೂಕು ರೈತ ಸಂಘ ಬಡವಾಗಿದೆ ಮುಂದಿನ ದಿನಗಳಲ್ಲಿ ಅವರ ಚಿಂತನೆಗಳು ಆದರ್ಶಗಳನ್ನು ಮೈಗೂಡಿಸಿಕೊಂಡು ರೈತರು ಹೋರಾಟಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಹಂಪಣ್ಣ ಶ್ರೀನಿವಾಸ ರೆಡ್ಡಿ ತಿಪ್ಪೇಸ್ವಾಮಿ ಮಂಜುನಾಥ ಕ್ಯಾತಣ್ಣ ಮಂಜುನಾಥ ತಿಪ್ಪೇಸ್ವಾಮಿ ತಿಮ್ಮಣ್ಣ ಗುರುಮೂರ್ತಿ ಭೀಮಣ್ಣ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments