. ತಳಕು ಹೋಬಳಿ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗಿರುವ ಶೇಂಗಾ ಬೆಳೆ
ಚಳ್ಳಕೆರೆ ಜನಧ್ವನಿ ವಾರ್ತೆ ಅ.4. ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮಳೆರಾಯನ ವಕ್ರದೃಷ್ಠಿಗೆ ಸಿಲುಕಿ ಬಿಸಿಲಿನ ತಾಪಕ್ಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಮಳೆಕೊರತೆಯಿಂದ ಬೆಳೆಗಳು ಒಣಗಿದ್ದು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದ್ದು ಸರಕಾರ ಬೆಳೆ ನಷ್ಟ ಪರಿಹಾರ. ಬೆಳೆ ವಿಮೆ ಕಟ್ಟಿದ ರೈತರ ಖಾತೆ ಬೆಳೆ ವಿಮೆ ಯಾವಾಗ ನೀಡುತ್ತದೆ ಎಂಬುದು ರೈತರ ಪ್ರಶ್ನೆಯಾಗಿದೆ.
![](https://janadhwani.in/wp-content/uploads/2023/10/IMG-20231004-WA0071.jpg)
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಆರೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.
![](https://janadhwani.in/wp-content/uploads/2023/10/IMG-20231004-WA0055.jpg)
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟವಾಡಿದೆ. ಬೆಳೆಗಳಿಗೆ ಬೇಕಿದ್ದಾಗ ಮಳೆರಾಯ ಸುಳಿಯಲೇ ಇಲ್ಲ. ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದಾಗಲೇ ಸೊರಗುವಂತಾಯಿತು. ರೈತರಿಗೆ ಆದಾಯ ತಂದುಕೊಡಬೇಕಿದ್ದ ಬೆಳೆಗಳು ಹಾನಿಗೀಡಾಗಿ ಬರದ ಭೀಕರತೆ ಎದುರಿಸುವಂತಾಗಿದೆ.
![](https://janadhwani.in/wp-content/uploads/2023/09/deccanherald_import_sites_dh_files_article_images_2019_07_23_file74rfabajx1dqtw5pn3v-1563891208.jpg)
![](https://janadhwani.in/wp-content/uploads/2023/10/n-chaluvarayaswamy-100548032.jpg)
![](https://janadhwani.in/wp-content/uploads/2023/10/IMG-20231004-WA0067.jpg)
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆರಾಯನ ವಕ್ರದೃಷ್ಟಿಯಿಂದ ಬಾರದ ಮಳೆ ಶೇಂಗಾ ವಿವಿಧ ಬೆಳೆಗಳು ಕಮರಿಹೋಗುತ್ತಿದ್ದು ಈ ಬಾರಿಯೂ ಮಳೆಯಿಲ್ಲದೆ ಮುಂದಿನ ದಿನಗಳು ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಬಂದು ರೈತಾಪಿ ವರ್ಗ ಸಾಲಾ ಸೂಲ ಮಾಡಿ ದುಬಾರಿ ಬಿತ್ತನೆ ಬೀಜ.ಗೊಬ್ಬರ.ಕೂಲಿ.ಕೃಷಿ ಸೇರಿದಂತೆ ಬೆಳೆ ಬಿತ್ತನೆ ಮಾಡಿ ಉತ್ತಮ ಇಳುವರಿ ಕನಸು ಕಂಡಿದ್ದ ರೈತರಿಗೆ ಮಳೆರಾಯನ ವಕ್ರದೃಷ್ಠಿಯಿಂದ ಶೇಂಗಾ.ತೊಗರಿ.ಸಜ್ಜೆ.ಜೋಳ ಸೇರಿದಂತೆ ವಿವಿಧ ಬೆಳೆಗಳು ಹೂವು.ಕಾಯಿ ಕಟ್ಟುವ ಮುನ್ನವೇ ಬಿಸಿಲಿನ ತಾಪಕ್ಕೆ ಕಮರಿ ಹೋಗುತ್ತಿದ್ದು ಇನ್ನು ಒಂದು ಮಳೆ ಬಾರದಿದ್ದರೆ ಸಂಪೂರ್ಣ ಬೆಳೆಗಳು ನೆಲಕಚ್ಚಲಿದ್ದು ಹಾಕಿದ ಬಂಡವಾಳವೂ ಕೈಸೇರದೆ ಈಗೆ ಒಂದು ತಿಂಗಳು ಮಳೆ ಬಾರದಿದ್ದರೆ ಜನ ಜಸನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾಗಿ ಪರದಾಡುವ ಸ್ಥಿತಿ ಎದುರಾಗಿ ತೀವ್ರ ಬರದ ಛಾಯೆ ಆವರಿದಲಿದೆ.
![](https://janadhwani.in/wp-content/uploads/2023/05/FB_IMG_1684684602877.jpg)
![](https://janadhwani.in/wp-content/uploads/2023/10/IMG-20231004-WA0072.jpg)
ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣ ಇದ್ದರೂ ಒಮ್ಮೆಯೂ
ಹದ ಮಳೆ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆ
ಎಂದರೆ ಮತ್ತೊಂದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ,
ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.ಬಯಲು ಸೀಮೆಯ ರೈತರು ಸುಮಾರು ಕಳೆದ ಹದಿನೈದು ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸು
ತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ ಸಾಲಗಾರರಾಗುತ್ತಲೇ ಇದ್ದಾರೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗು ತ್ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ,ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು,ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಶೇಂಗಾ ಒಣಗಿರುವ ದೃಶ್ಯ ಕಂಡುಬರುತ್ತದೆ. ನೀರಾವರಿ ಇರುವ ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ರೈತರಿಗೆ ಈಬಾರಿಯೂ ಭರದ ಛಾಯೆ ಇದ್ದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
![](https://janadhwani.in/wp-content/uploads/2023/05/4.-k.p.buthayya.jpg)
![](https://janadhwani.in/wp-content/uploads/2023/05/WhatsApp-Image-2023-05-13-at-8.52.59-PM2.jpeg)
![](https://janadhwani.in/wp-content/uploads/2023/05/1.jpg)
ಜಿಲ್ಲೆಯಲ್ಲಿ ಮಳೆಯ ಅಭಾವ ಉಂಟಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಇತ್ತ ಅಷ್ಟೊ, ಇಷ್ಟೋ ಬಿತ್ತನೆಯಾದ ಬೆಳೆಗಳು ಮಳೆಯಿಲ್ಲದೆ ಸೊರಗುತ್ತಿವೆ. ಮತ್ತೊಂದೆಡೆ ಸರ್ಕಾರ ಮಳೆ ಇಲ್ಲದಿರುವ ಪ್ರದೇಶಗಳನ್ನು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ.
strong>
ಕುಡಿಯು ನೀರು ಮೇವಿನ ಕೊರತೆ.
ಈಗೆ ಇನ್ನು ಒಂದು ತಿಂಗಳು ಮಳೆ ಕೈಕೊಟ್ಟರೆ ಅಂತರ್ಜಲ. ಮಟ್ಟ ಪಾತಾಳಕ್ಕೆ ಕುಸಿದು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ .
<
0 Comments