ಚಳ್ಳಕೆರೆ: ನಗರದ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಹಾಲುಮತ ಮಹಾಸಭಾ ಸೇರಿದಂತೆ ಹಾಲುಮತ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಇಂದು 536ನೇ ಕನಕ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್ ಮಲ್ಲೇಶಪ್ಪ ತಿಳಿಸಿದರು.
ನಗರದ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಕನಕದಾಸ ಜಯಂತಿಯನ್ನು ವಿಶೇಷವಾಗಿ ಆಚರಿಸುತ್ತಿದ್ದು ಶಾಸಕ ಟಿ ರಘುಮೂರ್ತಿಯವರ ಪರಿಶ್ರಮದಿಂದ ನಗರದ ಕುರುಬರ ಹಾಸ್ಟೆಲ್ ಮುಂಭಾಗದ ರಸ್ತೆಗೆ ಕನಕದಾಸ ವೃತ್ತ ಎಂದು ನಾಮಕರಣ ಮಾಡಲು ಸರ್ಕಾರದಿಂದ ಆದೇಶ ಬಂದಿದ್ದು ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ನಂತರ ವಿವಿಧ ಕಲಾತಂಡಗಳೊಂದಿಗೆ ಕನಕದಾಸ ಭಾವಚಿತ್ರದೊಂದಿಗೆ ಹಾಸ್ಟೆಲ್ ಮುಂಭಾಗದಿಂದ ವಾಲ್ಮೀಕಿ ವೃತ್ತ ಅಂಬೇಡ್ಕರ್ ವೃತ್ತ ನೆಹರು ವೃತ್ತ ಕಂಬಳಿ ಮಾರುಕಟ್ಟೆ ಮೂಲಕ ಸಂಚರಿಸಿ ಮಧ್ಯಾಹ್ನ 12ರ ವೇಳೆಗೆ ಕುರುಬರ ಹಾಸ್ಟೆಲ್ ಕಾರ್ಯಕ್ರಮದ ವೇದಿಕೆ ತಲುಪಲಿದ್ದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಘನ ಉಪಸ್ಥಿತಿಯಲ್ಲಿ ಯೋಜನಾ ಮತ್ತು ಸಾಂಕೀಕ ಸಚಿವ ಡಿ ಸುಧಾಕರ್ ಶಾಸಕ ಟಿ ರಘುಮೂರ್ತಿ ಸೇರಿದಂತೆ ತಾಲೂಕಿನ ನಗರ ಸಭೆ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿ ಗ್ರಾಮ ಪಂಚಾಯಿತಿ ಹಾಲಿ ಹಾಗೂ ಮಾಜಿ ಸದಸ್ಯರುಗಳು ಎಲ್ಲಾ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ನಗರ ಹಾಗೂ ಗ್ರಾಮೀಣ ಭಾಗದ ಹಾಲುಮತ ಸಮಾಜದ ಬಾಂಧವರು ಹಾಗೂ ಇತರೆ ಸಮುದಾಯದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಪ್ರಾಚಾರ್ಯ ಎಂ ಶಿವಲಿಂಗಪ್ಪ ಮಾತನಾಡಿ ದಾಸ ಶ್ರೇಷ್ಟರಲ್ಲಿ ಕನಕದಾಸರು ಪ್ರಮುಖರಾಗಿದ್ದು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ನಾಡಿನಾದ್ಯಂತ ದಾಸ ಸಾಹಿತ್ಯದ ಮೂಲಕ ಜಾತ್ಯತೀತ ತತ್ವವನ್ನು ಜಗತ್ತಿಗೆ ಸಾರಿ ಸಾಮಾಜಿಕ ಸಮಾನತೆಯ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿದ ಮಹಾನ್ ದಾರ್ಶನಿಕರಾಗಿದ್ದಾರೆ ಇಂತಹ ಮಹನೀಯರ ಜಯಂತಿಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕಾಗಿ ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕನಕದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ ನಗರದಲ್ಲಿ 22,000 ಕುರುಬ ಸಮಾಜದ ಜನರಿದ್ದು ಹಲವರ ಹೋರಾಟದ ಫಲವಾಗಿ ಈ ಬಾರಿ ಕನಕದಾಸ ವೃತ್ತ ಭೂಮಿ ಪೂಜೆ ನೆರವೇರುತ್ತಿದ್ದು ಅತ್ಯಂತ ಸಂತಸದ ವಿಷಯವಾಗಿದೆ ಇದಕ್ಕೆ ಶಾಸಕ ಟಿ ರಘುಮೂರ್ತಿ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದು ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್ ಲಿಂಗಪ್ಪ ರುದ್ರಮುನಿ ಸದಾಶಿವಯ್ಯ ಹನುಮಂತರಾಯ ಪೂಜಾರಿ ಪರಸಪ್ಪ ಕೆ ಜಗ್ಗಣ್ಣ ಮಹಾಂತಪ್ಪ ಉಪಸ್ಥಿತರಿದ್ದರು
0 Comments