ಚಿತ್ರದುರ್ಗ ಅ.31:
ರೇಬಿಸ್ ರೋಗ ಗುಣಪಡಿಸಲಾಗದು, ತಡೆಗಟ್ಟಲು ಸಾಧ. ನಿರ್ಲಕ್ಷೆ ವಹಿಸದಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಪಶುಪಾಲನಾ ಇಲಾಖೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯವಾಗಿ ರೇಬಿ ಸೋಂಕು ಪ್ರಾಣಿಗಳ ಕಡಿತದಿಂದ ರೋಗಾಣು ಇರುವ ಜಲ್ಲು ಸಂಪರ್ಕದಿಂದ ವೈರಾಣು ಗಾಯದ ಮುಖಾಂತರ ದೇಹ ಪ್ರವೇಶಿಸಿ ರೇಬಿಸ್ ರೋಗ ಉಂಟುಮಾಡುತ್ತದೆ. ನಾಯಿ, ಬೆಕ್ಕು, ಹಸು, ಎಮ್ಮೆ, ಕುರಿ, ಮೇಕೆ, ಕೋತಿ, ತೋಳ, ನರಿ ಮುಂಗುಸಿ, ಕುದುರೆ, ಬಾವಲಿ, ಇಲಿ ಹಾಗೂ ಇತ್ಯಾದಿ ಪ್ರಾಣಿಗಳು ಕಚ್ಚಿದಾಗ ನಕ್ಕಿದಾಗ ಹರಡುತ್ತದೆ. ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚು ನಾಯಿ ಕಡಿತದಿಂದಲೇ ಶೇ.97 ರಷ್ಟು ರೇಬಿಸ್ ರೋಗ ಬರುತ್ತದೆ. ಪ್ರಾಣಿಗಳ ನಿಕಟ ಸಂಪರ್ಕ ಹೊಂದಿದವರು ಹೆಚ್ಚಾಗಿ ಪಶುಪಾಲನ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿರುತ್ತಾರೆ. ಇವರ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಕ್ಕಾಗಿ ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ಇದರ ಸುದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಪ್ರಾಣಿ ಕಡಿತಕ್ಕೆ ಒಳಗಾಗುವ ಮುನ್ನ ರೇಬಿಸ್ ಲಸಿಕೆಯನ್ನ ಒಂದನೇ ದಿನ, ಏಳನೇ ದಿನ ಮತ್ತು 21 ಅಥವಾ 28ನೇ ದಿನಗಳಂದು ಮೂರು ವರಸೆ ಲಸಿಕೆ ಪಡೆದುಕೊಳ್ಳಬೇಕು. ಪ್ರಾಣಿಗಳ ಕಡಿತಕ್ಕೆ ಒಳಗಾದ ನಂತರ ಒಂದನೇ ದಿನ ಮೂರನೇ ದಿನ ಏಳನೇ ದಿನ ಮತ್ತು 21ನೇ ದಿನ ತಪ್ಪದೇ ಐದು ವರಸೆ ಪಡೆದುಕೊಳ್ಳಬೇಕು. ಲಸಿಕೆ ನೀಡುವ ಮಾರ್ಗ, ಲಸಿಕೆ ನೀಡುವ ಪ್ರಮಾಣ ಲಸಿಕೆ ಪಡೆದುಕೊಳ್ಳುವ ಬಗೆ ಕುರಿತು ತಿಳಿಸಿದರು.
ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಕುಮಾರ್ ಅವರು ಸಾಂಕೇತಿಕವಾಗಿ ಲಸಿಕೆ ಪಡೆದುಕೊಂಡರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಉಪನಿರ್ದೇಶಕ ಡಾ.ಬಾಬುರತ್ನ, ಮುಖ್ಯ ಆರೋಗ್ಯ ಮೇಲ್ವಿಚಾರಣ ಅಧಿಕಾರಿ ಎಂ.ಬಿ.ಹನುಮಂತ್ಪ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗೋಪಾಲ್ ಕೃಷ್ಣ, ಆರೋಗ್ಯ ಸುರಕ್ಷತಾಧಿಕಾರಿ ವನಜಾಕ್ಷಮ್ಮ, ಅರುಂದತಿ, ಮಂಜು, ಆಶಾ ಕಾರ್ಯಕರ್ತೆಯರು, ಪಶುಪಾಲನಾ ಇಲಾಖೆ ಸಿಬ್ಬಂದಿಗಳು ಇದ್ದರು. ಕಾರ್ಯಕ್ರಮದಲ್ಲಿ 150 ಪಶುಪಾಲನಾ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments