ಹಿರಿಯೂರು :
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಇನ್ಹರ್ ವ್ಹೀಲ್ ಸಂಸ್ಥೆಗಳು ಸಾಮಾಜಿಕವಾಗಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಸತತವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಲೇ ಬಂದಿವೆ ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಇನ್ಹರ್ ವ್ಹೀಲ್ ಸಂಸ್ಥೆಗಳು, ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಕಾರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಶಿಬಿರಕ್ಕೆ ಉತ್ತಮ ತಜ್ಞವೈಧ್ಯರುಗಳು ಆಗಮಿಸಿದ್ದು ಶಿಭಿರಾರ್ಥಿಗಳು ತಮಗೆ ಇರುವಂತಹ ಹೃದಯದ ಸಮಸ್ಯೆ, ಮೂಳೆನೋವು, ನರರೋಗ, ಕ್ಯಾನ್ಸರ್, ಮೂತ್ರಪಿಂಡಕ್ಕೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ಶಿಬಿರಕ್ಕೆ ಬಂದಿರುವ ತಜ್ಞವೈದ್ಯರುಗಳಿಂದ ತಪಾಸಣೆ ಮಾಡಿಸಿಕೊಂಡು, ಸೂಕ್ತಸಲಹೆ ಚಿಕಿತ್ಸೆಪಡೆದು, ನಿಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಸಪ್ತಗಿರಿ ಆಸ್ಪತ್ರೆಯ ವೈದ್ಯ ಡಾ.ಅಭಿಲಾಷ್ ಮಾತನಾಡಿ, ಕಾರ್ಡಿಯಾಲಜಿ ವೈಧ್ಯೆ ಡಾ.ಐಶ್ವರ್ಯ ಮತ್ತು ಸುಗಂಧ, ಸರ್ಜಿಕಲ್ ಡಾ.ವರ್ಷಿತಾ, ಆರ್ಥೋಪೆಡಿಕ್ ಲೇಖಶ್ರೀ ಇವರುಗಳು ಆಗಮಿಸಿರುತ್ತಾರೆ ರೋಗಿಗಳು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಕಾಯಿಲೆಗಳ ಬಗ್ಗೆ ಡಾಕ್ಟರ್ ಗಳಿಗೆ ತಿಳಿಸಿ ತಪಾಸಣೆ ಮೂಲಕ ಸೂಕ್ತ ಸಲಹೆ, ಚಿಕಿತ್ಸೆಗಳನ್ನು ಪಡೆಯಬಹುದು ಎಂಬುದಾಗಿ ಹೇಳಿದರು.
ರೋಟರಿ ಅಧ್ಯಕ್ಷರು ಡಿ.ದೇವರಾಜ್ ಮೂರ್ತಿ ಮಾತನಾಡಿ, ರೋಗಿಗಳು ಯಾವುದೇ ಹಣ ಖರ್ಚುಮಾಡದೇ ತಮ್ಮ ಕಾಯಿಲೆಗಳಿಗೆ ನಮ್ಮ ಸಂಸ್ಥೆಗಳು ನಡೆಸುವಂತಹ ಉಚಿತ ತಪಾಸಣಾ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಅಲಕ್ಷಿಸದೇ ತಮ್ಮಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂಬುದಾಗಿ ಹೇಳಿದರು.
ಸಪ್ತಗಿರಿ ಆಸ್ಪತ್ರೆ ಕೋ ಆರ್ಡಿನೇಟರ್ ಫಣೀಂದ್ರ ಮಾತನಾಡಿ, ಈ ಶಿಬಿರದಲ್ಲಿ ಸುಮಾರು 80 ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡಿದ್ದು, ಸಪ್ತಗಿರಿ ಆಸ್ಪತ್ರೆಯಲ್ಲಿ ಸುಮಾರು 10 ಜನರಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ನಡೆಸಲಾಗುವುದು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಇನ್ಹರ್ ವ್ಹೀಲ್ ಅಧ್ಯಕ್ಷೆ ಲಕ್ಷ್ಮೀರಾಜೇಶ್ ಸೌಮ್ಯಾ ಪ್ರಶಾಂತ್, ಎಲ್.ಆನಂದಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಖಜಾಂಚ್ ಸಣ್ಣಭಿಮಣ್ಣ, ಬಿ.ಕೆ.ನಾಗಣ್ಣ ಶ್ರೀಮತಿ ಶಶಿಕಲಾರವಿಶಂಕರ್, ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ ಬಾಬು, ಇಸ್ಮಾಯಿಲ್ ಜಬೀವುಲ್ಲಾ, ರೋಟರಿಯ ವಸಂತ್ ಕುಮಾರ್, ಆರ್.ಶಿವಕುಮಾರ್, ವೆಂಕಟೇಶ್, ಸಪ್ತಗಿರಿ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಅಭಿಷೇಕ್, ಡಾ,ಐಶ್ವರ್ಯ, ಡಾ, ಸುಗಂಧ, ಡಾ.ವರ್ಷಿತಾ, ಡಾ.ಲೇಖಶ್ರೀ ಮತ್ತು ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments