ಚಿತ್ರದುರ್ಗ ಜ.24:
ಲಿಂಗ ಅಸಮಾನತೆ ತೊಲಗಿಸಿ ಹೆಣ್ಣು ಮಕ್ಕಳಿಗೆ ಸಮಾನತೆಯನ್ನು ಕಲ್ಪಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳವರ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಜೀವನದಲ್ಲಿ ಅವರು ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸಲು ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 938 ಹೆಣ್ಣು ಮಕ್ಕಳ ಲಿಂಗಾನುಪಾತವಿರುತ್ತದೆ. ಈ ಅನುಪಾತದ ವ್ಯತ್ಯಾಸವನ್ನು ಸರಿದೂಗಿಸಬೇಕು ಎಂದರು.
ಶುಚಿ ಮೈತ್ರಿ ಮುಟ್ಟಿನ ಕಪ್ಪಿನ ಯೋಜನೆ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಪೈಲೆಟ್ ಯೋಜನೆಯಂತೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಅನುμÁ್ಠನಗೊಳಿಸಲಾಗುವುದು. ಪರಿಸರಸ್ನೇಹಿ ಯೋಜನೆಯ ಉಪಯೋಗದಿಂದ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಯಾಗುವುದು. ತಾಯಂದಿರ ಸಭೆಗಳಲ್ಲಿ ಪೌಷ್ಟಿಕ ಆಹಾರ ಮುಟ್ಟಿನ ಕಪ್ ಬಳಕೆ ಬಗ್ಗೆ ಹೆಚ್ಚು ಪ್ರಚಾರ ನೀಡಿರಿ ಎಂದರು.
ಡಾ. ಕವಿತಾ ಖಂಡೇನಹಳ್ಳಿ ಮಾತನಾಡಿ, ಮುಟ್ಟಿನ ಕಪ್ಪು ಹೇಗೆ ಬಳಕೆ ಮಾಡಬೇಕು. ಉಂಟಾಗುವ ಆರೋಗ್ಯ ಪರಿಣಾಮಗಳು ಏನು? ಮುಟ್ಟಿನ ಕಪ್ಗಳಲ್ಲಿ ಸಣ್ಣ, ಸಾಧಾರಣ, ದೊಡ್ಡ ಕಪ್ಗಳು ದೊರೆಯುತ್ತವೆ. ಇವುಗಳ ಉಪಯೋಗದಿಂದ ಮುಟ್ಟಿನ ಮುಜುಗರ ಹೊರಟು ಹೋಗಿ ಸ್ವತಂತ್ರದ ಭಾವ ಉಂಟಾಗುತ್ತದೆ ಎಂದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಗೌರಮ್ಮ ಮಾತನಾಡಿ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಬೇಟಿ ಬಚಾವೋ ಭೇಟಿ ಪಡಾವೋ ಯೋಜನೆ ಜಾರಿಯಲ್ಲಿದೆ. ಸುಕನ್ಯಾ ಸುರಕ್ಷಾ ಯೋಜನೆ ಅಡಿ ಪೆÇೀಸ್ಟ್ ಆಫೀಸ್ ಆರ್ ಡಿ ಖಾತೆಯನ್ನು ತೆರೆದಲ್ಲಿ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉಪಯೋಗವಾಗುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ನಾವು ನಮ್ಮ ಹೆಣ್ಣು ಮಕ್ಕಳನ್ನು ಬಲಶಾಲಿಯಾಗಿ ಸ್ವತಂತ್ರರಾಗಿ ಮತ್ತು ಭಯ ಮುಕ್ತರಾಗಿ ಬೆಳೆಸೋಣ. ಈ ಸಂಬಂಧ ಗ್ರಾಮ ಗ್ರಾಮಗಳಲ್ಲಿ ಗುಂಪು ಸಭೆಯ ತಾಯಂದಿರ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿದರು. ಕಾರ್ಯಕ್ರಮವನ್ನ ಮೈತ್ರಿ ಮುಟ್ಟಿನ ಕಪ್ ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸ್ಮಿತಾ ಆದಿವಾಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತ ಗೌಡ ಪೂಜಾರ್, ನೇತ್ರಾಧಿಕಾರಿ ರಜಿನಿ ಇತರರು ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments