ಚಳ್ಳಕೆರೆ: ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ವತಿಯಿಂದ ವಿವಿಧ ಸಮುದಾಯಗಳ ಮಹನೀಯರ ಜಯಂತಿ ಆಚರಣೆಯ ಅಂಗವಾಗಿ ತಹಶೀಲ್ದಾರ್ ರೆಹಾನ್ ಪಾಷಾ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿ ಧಾರ್ಶನಿಕರ ಆಚರಣೆಗಳನ್ನು ಆಚರಿಸಲು ಸರ್ಕಾರ ನಿರ್ಧರಿಸಿದ್ದು ಅದರಂತೆ ದಿನಾಂಕ 15-1 2024 ರಂದು ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ದಿನಾಂಕ 19-1-2024 ರಂದು ವೇಮನ ಜಯಂತಿ ದಿನಾಂಕ 21.01.2024 ರಂದು ಅಂಬಿಗರ ಚೌಡಯ್ಯ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ದಿನಾಚರಣೆಗಳ ದಿನದಂದು ಆಯಾ ಸಮುದಾಯದ ಮುಖಂಡರುಗಳು ತಾಲೂಕಿನ ಎಲ್ಲಾ ಇಲಾಖೆ ಸಿಬ್ಬಂದಿಗಳು ಅಧಿಕಾರಿಗಳು ಮತ್ತು ಸಾರ್ವಜನಿಕರು ಆಗಮಿಸಿ ಜಯಂತಿಗಳನ್ನು ಯಶಸ್ವಿಗೊಳಿಸಬೇಕು ಸಮಾಜಕ್ಕಾಗಿ ತಮ್ಮ ಜೀವನಗಳನ್ನು ಮುಡುಪಾಗಿಟ್ಟ ಮಹನೀಯರಿಗೆ ಗೌರವ ಸಮರ್ಪಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ದಿನಾಂಕವನ್ನು ಬದಲಾವಣೆ ಮಾಡುವ ವಿಚಾರವಾಗಿ ಸಮಾಜದ ಅಧ್ಯಕ್ಷರಾದ ಆಂಜನೇಯ ಮಾತನಾಡಿ 14ರಂದು ಸಂಕ್ರಾಂತಿ ಹಬ್ಬ ಆಚರಣೆ ಇರುವುದರಿಂದ 15ರಂದು ಸಮುದಾಯದ ಜನರು ಹೆಚ್ಚು ಭಾಗವಹಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ ಶಾಸಕರೊಂದಿಗೆ ಚರ್ಚಿಸಿ ಜಯಂತಿ ಆಚರಣೆಯ ದಿನಾಂಕವನ್ನು ತಿಳಿಸಲಾಗುವುದು ಎಂದರು.
ಆಗಮಿಸಿದ್ದ ಸಮುದಾಯದ ಮುಖಂಡರುಗಳು ಜಯಂತಿ ಆಚರಣೆಗಳ ಬಗ್ಗೆ ಸಲಹೆಗಳನ್ನು ನೀಡಿದರು
ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಮುಖಂಡರಾದ ಶಿವಾನಂದ ಮಾರುತಿ ಆಂಜನೇಯ ಜಗದೀಶ್ ಅಂಜನಿ ವೆಂಕಟಪ್ಪ ತಿಮ್ಮಣ್ಣ ರಾಘವೇಂದ್ರ ರೆಡ್ಡಿ ದಿನೇಶ್ ರೆಡ್ಡಿ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
0 Comments