ಚಳ್ಳಕೆರೆ ಜೂ.5 ನಗರದ 8 ಹಾಗೂ9 ವಾರ್ಡ್ ನಿವಾಸಿಗಳ ಮನೆಗಳಿಗೆ ಮಂಗಳವಾರ ಸುರಿದ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಹೌದು ಇದು ಚಳ್ಳಕೆರೆ ನಗರದ ವಿಠಲನಗರ. ಪ್ರವಾಸಿ ಮಂದಿರ ಸೇರಿದಂತೆ ನಗದ ಬಹುತೇಕ ಕಡೆಗಳಿಂದ ಹರಿದು ಬರುವ ರಾಜಕಾಲುವೆ ಒತ್ತುವರಿಯಾಗಿದ್ದು ಮಳೆಗಾಲ್ಲಿ ನೀರು ಹರಿಯಲು ಸ್ಥಳವಕಾಶ ಕಮಿಯಾಗಿದ್ದು ಅಕ್ ಪಕ್ಕದ ಮನೆಗಳಿಗೆ ನುಗ್ಗುವುದು ಇದೇನು ಹೊಸದಲ್ಲ ಪ್ರತಿ ಮಳೆ ಬಂದಾಗ ರಹೀಂನಗರ ಜಲಾವೃತಗೊಂಡ ಜನಪ್ರತಿನಿಧಿಗಳು.ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬಂದು ಸಮಾಧಾನ ಪಡಿಸಿ ಅಕ್ಕಿ ಬೇಳೆ.ಬಟ್ಟೆ ಬರೆಗಳನ್ನು ವಿತರಿಸಿ ಹೋಗುತ್ತಾರೆ ಹೊರತು ಇದಕ್ಕೆ ಶಾಶ್ವತ ಪರಿಹಾರ ಮಾಡಲು ಮುಂದಾಗುತ್ತಿತ್ತಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೆಂಗಳೂರುವರಾಜದಾನಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ ಮನೆಗಳನ್ನು ನೆಲಸ ಮಾಡಿದರು. ರಾಜಕಾಲುವೆ ಯಿಂದ ಇಷ್ಟು ಹಂತರದಿಂದ ಮನೆ ನಿರ್ಮಾಣ ಮಾಡಿಕೊಳ್ಳಬೇಕಡಂಬ ನಿಮಯವುದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನೆಗಳನ್ನು ಕಟ್ಟಿಕೊಂಡರೂ ಸಹ ನಗರಸಭೆ ಅಧಿಕಾರಿಗಳು ಮಾತ್ರ ಮೌನವಹಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. 8 ಹಾಗೂ9 ವಾರ್ಡ್ ಗಳ ಮನೆಗಳಿಗೆ ಮಳೆನೀರು ಜತೆ ಚರಂಡಿ ನೀರು ಮನೆಗಳಿಗೆ ನುಗ್ಗಿರುವುದು ಗೊಬ್ಬು ವಾಸನೆ ಬರುತ್ತಿದ್ದು ಜೀವನ ನರಕ ಎಂದು ಮಹಿಳೆಯರು
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗುವರೇ ಕಾದು ನೋಡ ಬೇಕಿದೆ.
0 Comments